ಆ್ಯಪ್ನಗರ

ಶಾಲೆಗೆ ಶಿಕ್ಷಕರ ಗೈರು ಹಾಜರಿ: ಬಿಇಒಗೆ ತರಾಟೆ

ಬ್ಯಾಡಗಿ: ತಾಲೂಕಿನಾದ್ಯಂತ ಶಿಕ್ಷ ಕರು ಶಾಲೆಗಳಿಗೆ ಸಮಯಕ್ಕೆ ಸರಿಯಾಗಿ ಹಾಜರಾಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿದ್ದು ಈ ಕುರಿತಂತೆ ನೀವೇನು ಕ್ರಮ ಕೈಗೊಂಡಿದ್ದಿರಿ ಎಂದು ತಾಪಂ ಅಧ್ಯಕ್ಷೆ ಸವಿತಾ ಸುತ್ತಕೋಟಿ ಶಿಕ್ಷ ಣಾಧಿಕಾರಿಯನ್ನು ಪ್ರಶ್ನಿಸಿದ ಘಟನೆ ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ನಡೆಯಿತು.

Vijaya Karnataka 7 Aug 2019, 5:00 am
ಬ್ಯಾಡಗಿ: ತಾಲೂಕಿನಾದ್ಯಂತ ಶಿಕ್ಷ ಕರು ಶಾಲೆಗಳಿಗೆ ಸಮಯಕ್ಕೆ ಸರಿಯಾಗಿ ಹಾಜರಾಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿದ್ದು ಈ ಕುರಿತಂತೆ ನೀವೇನು ಕ್ರಮ ಕೈಗೊಂಡಿದ್ದಿರಿ ಎಂದು ತಾಪಂ ಅಧ್ಯಕ್ಷೆ ಸವಿತಾ ಸುತ್ತಕೋಟಿ ಶಿಕ್ಷ ಣಾಧಿಕಾರಿಯನ್ನು ಪ್ರಶ್ನಿಸಿದ ಘಟನೆ ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ನಡೆಯಿತು.
Vijaya Karnataka Web teacher absenteeism at school tirade for beo
ಶಾಲೆಗೆ ಶಿಕ್ಷಕರ ಗೈರು ಹಾಜರಿ: ಬಿಇಒಗೆ ತರಾಟೆ


ಶಿಕ್ಷ ಣ ಇಲಾಖೆ ಪ್ರಗತಿ ಪರಿಶೀಲನಾ ಸಂದರ್ಭದಲ್ಲಿ ಈ ಕುರಿತಂತೆ ಮಾತನಾಡಿದ ಅಧ್ಯಕ್ಷೆ ಸವಿತಾ ಸುತ್ತಕೋಟಿ, ತಾಲೂಕಿನಲ್ಲಿ ಕೆಲ ಶಿಕ್ಷ ಕರು ಶಾಲಾ ಅವಧಿಗೆ ಸರಿಯಾಗಿ ಹಾಜರಾಗದೇ ತಮಗಿಷ್ಟ ಬಂದಂತೆ ಬರುವ ಪರಿಪಾಠ ರೂಢಿಸಿಕೊಂಡಿದ್ದಾರೆ ಎಂದು ಸಾರ್ವಜನಿಕರಿಂದ ದೂರುಗಳು ಬಂದಿವೆ. ಈ ಇಂತಹ ಶಿಕ್ಷ ಕರ ವಿರುದ್ಧ ನಿವ್ಯಾಕೆ ಶಿಸ್ತು ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.

ಇದಕ್ಕೆ ದನಿಗೂಡಿಸಿದ ತಾಪಂ ಇಒ ಪರಶುರಾಮ ಪೂಜಾರ, ನಾನು ಕೆಲ ಶಾಲೆಗಳಿಗೆ ಭೇಟಿ ನೀಡಿದಾಗ ಪ್ರಾರ್ಥನೆಗೆ ಗೈರಾಗಿ ಶಾಲೆ ಪ್ರಾರಂಭವಾದ ಕೆಲ ಗಂಟೆಗಳ ನಂತರ ಶಾಲೆಗೆ ಹಾಜರಾಗಿದ್ದ ಶಿಕ್ಷ ಕರ ಕುರಿತಂತೆ ನಿಮಗೆ ಮಾಹಿತಿ ನೀಡಿದ್ದೆ. ಅಂತಹ ಶಿಕ್ಷ ಕರ ವಿರುದ್ಧ ನೀವ್ಯಾಕೆ ಶಿಸ್ತು ಕ್ರಮಕ್ಕೆ ಮುಂದಾಗಿಲ್ಲ. ಇಂತಹ ಶಿಕ್ಷ ಕರಿಗೆ ನೋಟಿಸ್‌ ನೀಡಿ, ಇದು ಕೆಲವರಿಗೆ ಎಚ್ಚರಿಕೆ ಗಂಟೆಯಾಗಲಿದೆ ಎಂದರು.

ಶಿಕ್ಷ ಕರು ಸಮರ್ಪಕ ಹಾಜರಾತಿ ಕುರಿತಂತೆ ನನ್ನ ಗಮನಕ್ಕೂ ಬಂದಿದ್ದು ಈ ಕುರಿತಂತೆ ಕೆಲವರಿಗೆ ಕಾರಣ ಕೇಳಿ ನೋಟಿಸ್‌ ನೀಡಿದ್ದಾಗಿ ಶಿಕ್ಷ ಣಾಧಿಕಾರಿ ತಿಳಿಸಿದರು.

ಸರಕಾರಿ ಕಟ್ಟಡ ಖಾಸಗಿಯರಿಗೆ:
ಶಿಶು ಅಭಿವೃದ್ಧಿ ಪರಿಶೀಲನಾ ಸಂದರ್ಭದಲ್ಲಿ ಮಾತನಾಡಿದ ಉಪಾಧ್ಯಕ್ಷೆ ಶಾಂತಮ್ಮ ದೇಸಾಯಿ ಪಟ್ಟಣದ ಜಿಪಂ ಕಾರಾರ‍ಯಲಯಕ್ಕೆ ಹೊಂದಿಕೊಂಡಂತೆ ಇರುವ ಸ್ತ್ರೀ ಶಕ್ತಿ ಸಂಘದ ಸರಕಾರಿ ಕಟ್ಟಡವನ್ನು ಯಾರ ಅನುಮತಿ ಪಡೆದು ಖಾಸಗಿ ವ್ಯಕ್ತಿಗಳಿಗೆ ಯಾವುದೇ ಕರಾರು ಪತ್ರಗಳಿಲ್ಲದೇ ನೀಡಿದ್ದೀರಿ? ಕಟ್ಟಡ ಬಾಡಿಗೆ ಪಡೆದ ವ್ಯಕ್ತಿ ಕಳೆದೊಂದು ವರ್ಷದಿಂದ ಬಾಡಿಗೆ ಸಹ ಕಟ್ಟಿಲ್ಲ, ವಿದ್ಯುತ್‌ ಶುಲ್ಕವನ್ನು ಭರಿಸಿಲ್ಲ ಎಂದು ಸಿಡಿಪಿಒ ಅವರನ್ನು ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಉತ್ತರಿಸಿದ ಸಿಡಿಪಿಓ, ಇದು ನನ್ನ ಅವಧಿಯಲ್ಲಿ ಬಾಡಿಗೆ ಕೊಟ್ಟಿದ್ದಲ್ಲ, ಈ ಹಿಂದೆ ಇದ್ದ ಸಿಡಿಪಿಓ ವಿಜಯಕುಮಾರ ಅವರನ್ನು ಈ ಕುರಿತಂತೆ ಕೇಳಿದಲ್ಲಿ ಜಿಲ್ಲಾ ಮೇಲಾಧಿಕಾರಿಗಳ ಅನುಮತಿ ಪಡೆದು ಸ್ತ್ರೀ ಶಕ್ತಿ ಸಂಘದ ಬ್ಲಾಕ್‌ ಒಕ್ಕೂಟಕ್ಕೆ ನೀಡಿದ್ದಾಗಿ ತಿಳಿಸಿದ್ದಾರೆ. ಅವರು ಇನ್ನೊಬ್ಬ ಖಾಸಗಿ ಸಂಸ್ಥೆಗೆ ಬಾಡಿಗೆ ನೀಡಿದ್ದಾರೆ ಎಂದರು. ಹಾಗಾದರೆ ಅಧಿಕಾರಿಗಳು ನೀಡಿದ ಆದೇಶ ಪ್ರತಿ ನೀಡಿ ಎಂದು ಉಪಾಧ್ಯಕ್ಷೆ ಪ್ರಶ್ನಿಸಿದಾಗ, ಯಾವುದೇ ಆದೇಶ ಪ್ರತಿ ಇಲ್ಲ ಕೇವಲ ಮೌಖಿಕ ಆದೇಶದ ಮೇರೆಗೆ ನೀಡಲಾಗಿದೆ ಎಂದು ತಿಳಿಸಿದ ಕೂಡಲೇ ಗದರಿದ ತಾಪಂ ಇಒ ಪರಶುರಾಮ ಪೂಜಾರ, ಸರಕಾರಿ ಕಟ್ಟಡವನ್ನು ಬೇಕಾಬಿಟ್ಟಿಯಾಗಿ ಖಾಸಗಿ ಸಂಸ್ಥೆಗೆ ನೀಡಿರುವುದು ಸಮಂಜಸವಲ್ಲ. ಕೂಡಲೇ ಒಂದು ವರ್ಷದ ಕಟ್ಟಡ ಬಾಡಿಗೆ ಭರಣ ಮಾಡಿಸಿಕೊಂಡು ಖಾಲಿ ಮಾಡಿಸಿ ಎಂದು ಸೂಚಿಸಿದರು.

ಈ ಸಂದರ್ಬದಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಶುದ್ಧ ನೀರಿನ ಘಟಕ ದುರಸ್ತಿ ಮಾಡಿ: ತಾಲೂಕಿನಾದ್ಯಂತ ಕೆಆರ್‌ಐಡಿಎಲ್‌, ಲ್ಯಾಂಡ್‌ ಆರ್ಮಿ ಸೇರಿದಂತೆ ನೀರಾವರಿ ಇಲಾಖೆಯಿಂದ ಸ್ಥಾಪಿಸಲಾದ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ಹೋಗಿದ್ದು ಇಲ್ಲಿಯರೆಗೂ ದುರಸ್ತಿ ಕಂಡಿಲ್ಲ. ಜನರು ಕುಡಿಯುವ ನೀರಿಗೆ ಪರದಾಡುತ್ತಿದ್ದರೆ ನೀವಿನ್ನು ಟೆಂಡರ್‌ ಆಗಿಲ್ಲ ಎನ್ನುತ್ತ ಕಾಲಹರಣ ಮಾಡುತ್ತ ಕುಳಿತಿದ್ದೀರಿ.? ಘಟಕಗಳನ್ನು ದುರಸ್ತಿ ಮಾಡಿಸಿ ಸಾರ್ವಜನಿಕರಿಗೆ ನೀರೋದಗಿಸಿ ಎಂದು ಯಲ್ಲನಗೌಡ ಕರೆಗೌಡ್ರ ಆಗ್ರಹಿಸಿದರು.

ಇಲಾಖಾಧಿಕಾರಿಗಳಿಗೆ ನೋಟಿಸ್‌: ಏಷ್ಟು ಬಾರಿ ಹೇಳಿದರೂ ಕೆಡಿಪಿ ಸಭೆಗೆ ಹಾಜರಾಗದೇ ಉದ್ಧಟತನ ತೋರುತ್ತಿರುವ ಅಬಕಾರಿ ಇಲಾಖೆ, ಅರಣ್ಯ ಇಲಾಖೆ, ಸಾರಿಗೆ ಇಲಾಖೆ, ಕಾರ್ಮಿ ಇಲಾಖೆ ಅಧಿಕಾರಿಗಳಿಗೆ ನೋಟಿಸ್‌ ನೀಡಿ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಜಿಲ್ಲಾ ಮೇಲಾಧಿಕಾರಿಗಳಿಗೆ ಪತ್ರ ಬರೆಯುವಂತೆ ತಾಪಂ ಇಒ ಪೂಜಾರ ತಾಪಂ ಸಿಬ್ಬಂದಿಗೆ ಸೂಚಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ