ಅಕ್ಕಿಆಲೂರು: ಗ್ರಾಮೀಣ ಪ್ರದೇಶದಲ್ಲಿ ಪ್ರಗತಿ ಸಾಧಿಸುವ ಮಹತ್ವದ ಉದ್ದೇಶದಿಂದ ಸರಕಾರ ಶಿಕ್ಷ ಣ ಇಲಾಖೆಯ ಮೂಲಕ ಹಲವಾರು ಯೋಜನೆ, ಕಾರ್ಯಕ್ರಮ ರೂಪಿಸಿದೆ. ಇವುಗಳನ್ನು ಸದ್ಭಳಕೆ ಮಾಡಿಕೊಳ್ಳುವ ಮೂಲಕ ಶಾಲಾ ಹಾಜರಾತಿ ಪ್ರಮಾಣ ಹೆಚ್ಚಿಸುವಲ್ಲಿ ಶಿಕ್ಷ ಕರು ಗಮನ ಹರಿಸಬೇಕಿದೆ ಎಂದು ಜ್ಞಾನಭಾರತಿ ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ವಿ.ಪಿ.ಗುರಪ್ಪನವರ ಹೇಳಿದರು.
ಇಲ್ಲಿನ ಜ್ಞಾನಭಾರತಿ ಕಾನ್ವೆಂಟ್ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಶಾಲಾ ಪ್ರಾರಂಭೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಶಿಕ್ಷ ಣದಿಂದ ಮಾತ್ರ ವಿಕಾಸ ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಪ್ರತಿನಿತ್ಯವೂ ತಪ್ಪದೇ ಶಾಲೆಗೆ ಮಕ್ಕಳನ್ನು ಕಳುಹಿಸುವಲ್ಲಿ ಪೋಷಕರು ಕಾಳಜಿ ವಹಿಸುವಂತೆ ಕರೆ ನೀಡಿದರು.
ಸಂಘದ ಉಪಾಧ್ಯಕ್ಷ ಡಾ.ಎಸ್.ಎಂ.ಹುಣಸಿಕಟ್ಟಿ ಮಾತನಾಡಿ, ಶಿಕ್ಷ ಣದಿಂದ ಮಾತ್ರ ವ್ಯಕ್ತಿತ್ವ ವಿಕಾಸ ಸಾಧ್ಯವಿದೆ. ಇಂದಿಗೂ ಕೂಡ ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಸಂಖ್ಯೆಯ ಪೋಷಕರು ಮಕ್ಕಳನ್ನು ಶಾಲೆ ಬಿಡಿಸಿ ದುಡಿಯಲು ಹಚ್ಚುತ್ತಿರುವ ಪ್ರಕರಣಗಳು ಹೆಚ್ಚಿವೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಮುದಾಯದ ಸಹಕಾರ ಅಗತ್ಯವಿದೆ. ಸರಕಾರ ಮತ್ತು ಸಮುದಾಯ ಒಟ್ಟೊಟ್ಟಿಗೆ ಕಾರ್ಯೋನ್ಮುಖವಾದರೆ ಸುಶಿಕ್ಷಿತ ಸಮಾಜ ನಿರ್ಮಾಣ ಸಾಧ್ಯವಿದೆ ಎಂದರು.
ಮುಖ್ಯೋಪಾಧ್ಯಾಯ ಎಂ.ಎನ್.ಹಾವೇರಿ, ವಾಣಿ ಸುಗಂಧಿ, ನಂದಿನಿ ಕೆ.ಬಿ., ಬಿ.ಬಿ.ನೆಲ್ಲಿಕೊಪ್ಪ, ಎಸ್.ಎಚ್.ಬಿದರಕೊಪ್ಪ, ವಿ.ಎಂ.ತಳವಾರ, ಜೆ.ಎಂ.ಅಂಗಡಿ, ಜಿ.ಬಿ.ರಾಯಚೂರ, ವಿ.ಎಂ.ಕಬ್ಬಿಣಕಂತಿಮಠ, ಜ್ಯೋತಿ ಲಮಾಣಿ, ಹೀನಾಕೌಸರ್ ಮನ್ನಂಗಿ, ಪವಿತ್ರಾ ಎಸ್.ಎಸ್., ಜ್ಯೋತಿ ಚಕ್ರಸಾಲಿ, ಚೇತನ ಸಿಂಗಾಪೂರ ಸೇರಿದಂತೆ ಇನ್ನೂ ಹಲವರಿದ್ದರು.
ಇಲ್ಲಿನ ಜ್ಞಾನಭಾರತಿ ಕಾನ್ವೆಂಟ್ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಶಾಲಾ ಪ್ರಾರಂಭೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಶಿಕ್ಷ ಣದಿಂದ ಮಾತ್ರ ವಿಕಾಸ ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಪ್ರತಿನಿತ್ಯವೂ ತಪ್ಪದೇ ಶಾಲೆಗೆ ಮಕ್ಕಳನ್ನು ಕಳುಹಿಸುವಲ್ಲಿ ಪೋಷಕರು ಕಾಳಜಿ ವಹಿಸುವಂತೆ ಕರೆ ನೀಡಿದರು.
ಸಂಘದ ಉಪಾಧ್ಯಕ್ಷ ಡಾ.ಎಸ್.ಎಂ.ಹುಣಸಿಕಟ್ಟಿ ಮಾತನಾಡಿ, ಶಿಕ್ಷ ಣದಿಂದ ಮಾತ್ರ ವ್ಯಕ್ತಿತ್ವ ವಿಕಾಸ ಸಾಧ್ಯವಿದೆ. ಇಂದಿಗೂ ಕೂಡ ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಸಂಖ್ಯೆಯ ಪೋಷಕರು ಮಕ್ಕಳನ್ನು ಶಾಲೆ ಬಿಡಿಸಿ ದುಡಿಯಲು ಹಚ್ಚುತ್ತಿರುವ ಪ್ರಕರಣಗಳು ಹೆಚ್ಚಿವೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಮುದಾಯದ ಸಹಕಾರ ಅಗತ್ಯವಿದೆ. ಸರಕಾರ ಮತ್ತು ಸಮುದಾಯ ಒಟ್ಟೊಟ್ಟಿಗೆ ಕಾರ್ಯೋನ್ಮುಖವಾದರೆ ಸುಶಿಕ್ಷಿತ ಸಮಾಜ ನಿರ್ಮಾಣ ಸಾಧ್ಯವಿದೆ ಎಂದರು.
ಮುಖ್ಯೋಪಾಧ್ಯಾಯ ಎಂ.ಎನ್.ಹಾವೇರಿ, ವಾಣಿ ಸುಗಂಧಿ, ನಂದಿನಿ ಕೆ.ಬಿ., ಬಿ.ಬಿ.ನೆಲ್ಲಿಕೊಪ್ಪ, ಎಸ್.ಎಚ್.ಬಿದರಕೊಪ್ಪ, ವಿ.ಎಂ.ತಳವಾರ, ಜೆ.ಎಂ.ಅಂಗಡಿ, ಜಿ.ಬಿ.ರಾಯಚೂರ, ವಿ.ಎಂ.ಕಬ್ಬಿಣಕಂತಿಮಠ, ಜ್ಯೋತಿ ಲಮಾಣಿ, ಹೀನಾಕೌಸರ್ ಮನ್ನಂಗಿ, ಪವಿತ್ರಾ ಎಸ್.ಎಸ್., ಜ್ಯೋತಿ ಚಕ್ರಸಾಲಿ, ಚೇತನ ಸಿಂಗಾಪೂರ ಸೇರಿದಂತೆ ಇನ್ನೂ ಹಲವರಿದ್ದರು.