ಆ್ಯಪ್ನಗರ

ಬಿಸಿಪಿ ಬೆಳೆಯಬಾರದೆಂದು ಮೈತ್ರಿ ಮಂತ್ರಿ ಮಾಡಿರಲಿಲ್ಲ: ಬೊಮ್ಮಾಯಿ

ರಟ್ಟೀಹಳ್ಳಿ: ಸಮಿಶ್ರ ಸರಕಾರದಲ್ಲಿಬಿ.ಸಿ.ಪಾಟೀಲರು ಮಂತ್ರಿಯಾದರೆ ದೊಡ್ಡ ಲೀಡರಾಗಿ ಬೆಳೆಯುತ್ತಾರೆಂದು ಅವರಿಗೆ ಮಂತ್ರಿ ಸ್ಥಾನ ಕೊಡಲಿಲ್ಲಎಂದು ಜಿಲ್ಲಾಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

Vijaya Karnataka 18 Nov 2019, 5:00 am
ರಟ್ಟೀಹಳ್ಳಿ: ಸಮಿಶ್ರ ಸರಕಾರದಲ್ಲಿಬಿ.ಸಿ.ಪಾಟೀಲರು ಮಂತ್ರಿಯಾದರೆ ದೊಡ್ಡ ಲೀಡರಾಗಿ ಬೆಳೆಯುತ್ತಾರೆಂದು ಅವರಿಗೆ ಮಂತ್ರಿ ಸ್ಥಾನ ಕೊಡಲಿಲ್ಲಎಂದು ಜಿಲ್ಲಾಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
Vijaya Karnataka Web the alliance minister did not want the bcp to grow bommai
ಬಿಸಿಪಿ ಬೆಳೆಯಬಾರದೆಂದು ಮೈತ್ರಿ ಮಂತ್ರಿ ಮಾಡಿರಲಿಲ್ಲ: ಬೊಮ್ಮಾಯಿ


ಅವರು ರಟ್ಟೀಹಳ್ಳಿ ಪಟ್ಟಣದಲ್ಲಿಜರುಗಿದ ಜಿ.ಪಂ. ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿ, ಯು.ಬಿ.ಬಣಕಾರ ಮತ್ತು ಪಾಟೀಲರು ಜೋಡೆತ್ತುಗಳಾಗಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಕಂಕಣ ಬದ್ಧರಾಗಿ ದುಡಿಯುವುದಕ್ಕೆ ಸಿದ್ಧರಿದ್ದಾರೆ. ರಾಜ್ಯದಲ್ಲಿಸುಭದ್ರ ಸರಕಾರಕ್ಕೆ ಆಶೀರ್ವಾದ ಮಾಡಿದರೆ 30 ವರ್ಷದಲ್ಲಿಆಗದೇ ಇರುವ ಕೆಲಸವನ್ನು ಮೂರುವರೆ ವರ್ಷದಲ್ಲಿಮಾಡಲಾಗುತ್ತದೆ ಎಂದರು.

ಉಗ್ರಾಣ ನಿಗಮದ ಅಧ್ಯಕ್ಷ ಮಾಜಿ ಶಾಸಕ ಯು.ಬಿ.ಬಣಕಾರ ಮಾತನಾಡಿ, ರಾಜ್ಯದಲ್ಲಿಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಮಾಡಿಕೊಂಡಿದ್ದವು. ಅದನ್ನು ಕಿತ್ತು ಹಾಕುವುದಕ್ಕೆ ಬಿ.ಸಿ.ಪಾಟೀಲರು ಸೇರಿದಂತೆ 16 ಶಾಸಕರು ತ್ಯಾಗ ಮಾಡಿದ್ದಾರೆ. ಬಿಜೆಪಿ ಸರಕಾರ ಮುಂದುವರೆಯಬೇಕಾದರೆ ಬಿ.ಸಿ.ಪಾಟೀಲರನ್ನು ಶಾಸಕರನ್ನಾಗಿ ಮಾಡಬೇಕಾಗಿದೆ ಎಂದರು.

ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ರಟ್ಟೀಹಳ್ಳಿ ಪಟ್ಟಣಕ್ಕೂ ರೈಲ್ವೆ ಸಂಚಾರ ಆರಂಭವಾಗುತ್ತದೆ. ಸರ್ವರಿಗೂ ಸಾಮಾಜಿಕ ಸಮಪಾಲು ನ್ಯಾಯ ಒದಗಿಸುವುದು ಬಿಜೆಪಿ ಸರಕಾರದ ಉದ್ದೇಶ. ತಾಲೂಕಿನ ಅಭಿವೃದ್ಧಿ ದೃಷ್ಟಿಯಿಂದ ಯು.ಬಿ.ಬಣಕಾರ ಮತ್ತು ಬಿ.ಸಿ.ಪಾಟೀಲ್‌ ಒಂದಾಗಿದ್ದು, ತಾಲೂಕಿನ ಜನರು ಅವರನ್ನು ಆಶೀರ್ವದಿಸಬೇಕೆಂದು ಹೇಳಿದರು.

ಹಾವೇರಿ ಸಂಸದ ಶಿವಕುಮಾರ ಉದಾಸಿ ಮಾತನಾಡಿ, ತಾಲೂಕಿನ ಇಬ್ಬರು ಪ್ರಭಾವಿ ಮುಖಂಡರು ಒಂದೇ ಪಕ್ಷದಲ್ಲಿಇದ್ದಾರೆ. 20-20 ಮ್ಯಾಚ್‌ನಂತೆ ಆಗುತ್ತದೆ. ಯು.ಬಿ.ಬಣಕಾರ ಮತ್ತು ಬಿ.ಸಿ.ಪಾಟೀಲ್‌ ಒಂದಾಗಿದ್ದರಿಂದ ತಾಲೂಕಿನಲ್ಲಿಬಿಜೆಪಿ ಜಯ ಸಾಧಿಸುವುದರಲ್ಲಿಯಾವುದೇ ಅನುಮಾನವಿಲ್ಲಎಂದರು.

ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಬಿ.ಸಿ.ಪಾಟೀಲ್‌ ಮಾತನಾಡಿ, ತಾಲೂಕಿನ ಸಮಗ್ರ ಅಭಿವೃದ್ಧಿಗೆ ಯು.ಬಿ.ಬಣಕಾರ ನಾನು ಇಬ್ಬರು ಒಟ್ಟಾಗಿ ದುಡಿಯುತ್ತವೆ. ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿಮಾಜಿ ಶಾಸಕ ಸುರೇಶಗೌಡ ಪಾಟೀಲ, ದತ್ತಾತ್ರಯ್ಯ, ಎನ್‌.ಎಂ.ಈಟೇರ, ಎಸ್‌.ಆರ್‌.ಅಂಗಡಿ, ಪಾಲಕ್ಷಗೌಡ ಪಾಟೀಲ, ಲಿಂಗರಾಜ ಚಪ್ಪರದಹಳ್ಳಿ, ಆರ್‌.ಎನ್‌.ಗಂಗೋಳ, ಮಹೇಶ ಗುಬ್ಬಿ, ಎಸ್‌.ಬಿ.ಪಾಟೀಲ, ಯು.ಯು.ಬಣಕಾರ, ಹಲವಾರು ಮುಖಂಡರು ವೇದಿಕೆಯಲ್ಲಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ