ಆ್ಯಪ್ನಗರ

ಸಿಪಿಐ ಮೇಲೆ ಹಲ್ಲೆಗೆ ಖಂಡನೆ

ಬ್ಯಾಡಗಿ: ಕರ್ತವ್ಯನಿರತ ಸಿಪಿಐ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ ಮತ್ತು ಪೂರ್ವ ನಿಯೋಜಿತ ಕೃತ್ಯ. ಕೂಡಲೇ ಹಲ್ಲೆ ಮಾಡಿದವರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ವಾಲ್ಮೀಕಿ ಸಮಾಜದ ನಿವೃತ್ತ ಡಿವೈಎಸ್ಪಿ ಸಿ.ಬಿ.ಪಾಟೀಲ ಎಚ್ಚರಿಸಿದರು.

Vijaya Karnataka 18 Dec 2018, 5:00 am
ಬ್ಯಾಡಗಿ: ಕರ್ತವ್ಯನಿರತ ಸಿಪಿಐ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ ಮತ್ತು ಪೂರ್ವ ನಿಯೋಜಿತ ಕೃತ್ಯ. ಕೂಡಲೇ ಹಲ್ಲೆ ಮಾಡಿದವರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ವಾಲ್ಮೀಕಿ ಸಮಾಜದ ನಿವೃತ್ತ ಡಿವೈಎಸ್ಪಿ ಸಿ.ಬಿ.ಪಾಟೀಲ ಎಚ್ಚರಿಸಿದರು.
Vijaya Karnataka Web the attack on the cpi was condemned
ಸಿಪಿಐ ಮೇಲೆ ಹಲ್ಲೆಗೆ ಖಂಡನೆ


ಪಟ್ಟಣದ ವಾಲ್ಮೀಕಿ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಪಿಐ ಮೇಲೆ ಮಹಿಳೆಯೊಬ್ಬರು ಆರೋಪ ಮಾಡಿರುವುದರ ಹಿಂದೆ ಯಾರದೋ ಕೈವಾಡವಿದೆ. ನಿಷ್ಠಾವಂತ ಅಧಿಕಾರಿಯ ತೇಜೋವಧೆ ಮಾಡುವ ದುರುದ್ದೇಶವಿದೆ. ಸಿಪಿಐ ಅವರು ತಪ್ಪು ಮಾಡಿದ್ದಲ್ಲಿ ಅವರಿಗೆ ಶಿಕ್ಷೆ ಆಗಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಈ ರೀತಿ ಮಾರಣಾಂತಿಕ ಹಲ್ಲೆ ಖಂಡನೀಯ ಎಂದರು.

ಇನ್ನೊಬ್ಬ ನಿವೃತ್ತ ಡಿವೈಎಸ್ಪಿ ಎನ್‌.ಎಂ.ಈಟೇರ ಮಾತನಾಡಿ, ಕರ್ತವ್ಯನಿರತ ಪೊಲೀಸ್‌ ಅಧಿಕಾರಿಯ ಮೇಲೆ ಹಲ್ಲೆ ಮಾಡಿರುವುದು ನಾಚಿಕೆಗೇಡಿನ ಸಂಗತಿ. ಆರೋಪ ಮಾಡಿದ ತಕ್ಷ ಣ ಸಿಪಿಐ ಅಪರಾಧಿಯಾಗಲ್ಲ ಎಂಬುದರ ಸಾಮಾನ್ಯ ಜ್ಞಾನವೂ ಇಲ್ಲದೇ ಹಲ್ಲೆ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ? ಇಂತಹ ಘಟನೆಗಳು ನಡೆಯುತ್ತಾ ಸಾಗಿದಲ್ಲಿ ಬ್ಯಾಡಗಿಯಲ್ಲಿ ಕಾರ‍್ಯನಿರ್ವಹಿಸಲು ಯಾವೊಬ್ಬ ಅಧಿಕಾರಿಯು ಮುಂದೆ ಬರಲ್ಲ. ಈ ಹಿನ್ನೆಲೆಯಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದರು.

ನಿವೃತ್ತ ಶಿಕ್ಷ ಕ ಯಮನಕ್ಕವರ ಮಾತನಾಡಿ, ಸಿಪಿಐ ವಿರುದ್ಧ ಮಹಿಳೆಯ ಬಳಿ ಸಾಕ್ಷ್ಯಾಧಾರಗಳಿದ್ದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಿ. ಆದರೆ ಹಲ್ಲೆ ಕ್ರಮ ಸರಿಯಲ್ಲ ಎಂದರಲ್ಲದೇ, ಸಿಪಿಐ ಅವರು ವಾಲ್ಮೀಕಿ ಜನಾಂಗಕ್ಕೆ ಸೇರಿದ್ದಾರೆ ಎಂಬ ಕಾರಣಕ್ಕೆ ಹಲ್ಲೆಯನ್ನು ಖಂಡಿಸುತ್ತಿಲ್ಲ. ಯಾವುದೇ ಸಮಾಜದ ವ್ಯಕ್ತಿಯಾಗಿದ್ದರೂ ನಾವು ಖಂಡಿಸುತ್ತಿದ್ದೇವು ಎಂದರು.

ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಹೊನ್ನುರಪ್ಪ ಕಾಡಸಾಲಿ, ಹನುಮಂತಪ್ಪ ನಾಯ್ಕರ, ಪುರಸಭೆ ಸದಸ್ಯ ರಾಮಣ್ಣ ಕೋಡಿ ಹಳ್ಳಿ, ದುಗ್ಗಪ್ಪ ಬಂಡ್ರಾಳ, ಮಲ್ಲೇಶಪ್ಪ ಒಳಗುಂದಿ, ಹೊನ್ನಪ್ಪ ಯಲಿಗಾರ ಸೋಮನಗೌಡ ಪಾಟೀಲ, ಶಿವರಾಜ ಹೊನ್ನಳ್ಳಿ, ಈರಪ್ಪ ತರೇದಹಳ್ಳಿ, ಹನುಮಂತಪ್ಪ ಕುರಕುಂದಿ, ಸುರೇಶ ಚಲವಾದಿ, ಚಂದ್ರು ಒಳಗುಂದಿ, ಸೇರಿದಂತೆ ಹಾವೇರಿ ಜಿಲ್ಲಾ ವಾಲ್ಮೀಕಿ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ