ಆ್ಯಪ್ನಗರ

ಉಗ್ರರ ದಾಳಿ ಖಂಡಿಸಿ ಬಿಜೆಪಿ ಧರಣಿ

ಹಾವೇರಿ : ಉಗ್ರರ ದಾಳಿ ಖಂಡಿಸಿ ಬಿಜೆಪಿ ಜಿಲ್ಲಾ ಘಟಕದಿಂದ ನಗರದ ಮೈಲಾರ ಮಹದೇವಪ್ಪ ವೃತ್ತದಲ್ಲಿ ಭಾನುವಾರ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಧರಣಿ ನಡೆಯಿತು.

Vijaya Karnataka 18 Feb 2019, 5:00 am
ಹಾವೇರಿ : ಉಗ್ರರ ದಾಳಿ ಖಂಡಿಸಿ ಬಿಜೆಪಿ ಜಿಲ್ಲಾ ಘಟಕದಿಂದ ನಗರದ ಮೈಲಾರ ಮಹದೇವಪ್ಪ ವೃತ್ತದಲ್ಲಿ ಭಾನುವಾರ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಧರಣಿ ನಡೆಯಿತು.
Vijaya Karnataka Web the bjp has condemned the attack on the terrorists
ಉಗ್ರರ ದಾಳಿ ಖಂಡಿಸಿ ಬಿಜೆಪಿ ಧರಣಿ


ಶಾಸಕ ಸಿ.ಎಂ.ಉದಾಸಿ ಮಾತನಾಡಿ, ಕಾಶ್ಮಿರದ ಪುಲ್ವಾಮದಲ್ಲಿ ನಡೆದ ಘಟನೆ ಅತ್ಯಂತ ಖಂಡನೀಯ. ಪಾಕಿಸ್ತಾನ ಉಗ್ರರನ್ನು ಬೆಳೆಸುವ ತಾಣವಾಗಿದೆ. ಕೆಲವು ಮತಾಂಧ ಯುವಕರಿಂದ ಇಡೀ ಮುಸ್ಲಿಂ ಸಮುದಾಯ ತೆಲೆತಗ್ಗಿಸುವಂತೆ ಮಾಡುತ್ತಿದೆ. ಅಂತಹ ಸಮಾಜ ವಿರೋಧಿಗಳಿಗೆ ಆ ಸಮುದಾಯವೇ ಉತ್ತಮ ಸಂಸ್ಕಾರ ಕಲಿಸಬೇಕು ಎಂದರು.

ಶಾಸಕ ವಿರೂಪಾಕ್ಷ ಪ್ಪ ಬಳ್ಳಾರಿ ಮಾತನಾಡಿ, ಇಂದು ಸೈನಿಕರ ಹತ್ಯೆ ವಿಚಾರ ಅತ್ಯಂತ ದುಃಖದ ವಿಷಯ. ಇಂದು ಪಾಕಿಸ್ತಾನದ ಪಾಪಿಗಳು ತಮ್ಮ ನರಿ ಬುದ್ಧಿ ತೋರಿಸುವ ಮೂಲಕ ತಾವು ಹಿಂಸೆಯಲ್ಲಿಯೇ ನಂಬಿಕೆಯಿಟ್ಟವರು ಎಂಬುವದನ್ನು ತೋರಿಸಿದ್ದಾರೆ. ಆದರೆ, ಭಾರತ ದೇಶ ಇದಕ್ಕೆ ತಕ್ಕ ಉತ್ತರ ನೀಡುತ್ತದೆ ಎಂದರು.

ಮಾಜಿ ಶಾಸಕ ಯು.ಬಿ.ಬಣಕಾರ ಮಾತನಾಡಿ, ಉಗ್ರರನ್ನು ಪಾಕಿಸ್ತಾನ ಪೋಷಣೆ ಮಾಡುತ್ತಿದೆ. ನಮ್ಮ ಸೈನಿಕರಿಗೆ ಪಾಕಿಸ್ತಾನವನ್ನು ಸಂಪೂರ್ಣವಾಗಿ ದ್ವಂಶಮಾಡುವುದು ಎರಡು ತಾಸಿನ ಕೆಲಸ ಆದರೆ ಮಾನವ ಹಿಂಸೆ ಮಾಡುವುದು ಸರಿಯಲ್ಲವೆಂದು ಭಾವಿಸುವವರು ನಾವು. ಆದರೆ ಇಂದು ನಮ್ಮ ತಾಳ್ಮೆ ಮೀರಿದೆ. ಪಾಕಿಸ್ತಾನದ ಈ ಕೃತ್ಯಕ್ಕೆ ಪ್ರತಿಕಾರ ತೀರಿಸಿಕೊಳ್ಳುತ್ತೇವೆ ಎಂದರು.

ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನರ ಮಾತನಾಡಿ, ಇಂದು ರಾಜ್ಯಾದ್ಯಂತ ಧರಣಿ ಹಾಗೂ ಶ್ರದ್ಧಾಂಜಲಿ ಸಭೆ ನಡೆಸಲಾಗುತ್ತಿದೆ. ಸೈನಿಕರ ಹತ್ಯೆ ವಿಷಯದಲ್ಲಿ ಪ್ರಧಾನಿ ರಾಜೀಸ್ವಭಾವದವರಲ್ಲ. ಸೈನಿಕರ ರಕ್ತದ ಪ್ರತಿ ಹನಿಗೂ ನ್ಯಾಯ ದೊರಕಿಸಿಕೊಡುತ್ತಾರೆ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ಮ್ಯಾಗೇರಿ, ಸಂತೋಷ ಪಾಟೀಲ, ರವಿ ಮೆಣಸಿನಕಾಯಿ, ಸಂತೋಷ ಆಲದಕಟ್ಟಿ, ಪ್ರಭು ಹಿಟ್ನಳ್ಳಿ, ನಂಜುಂಡೇಶ ಕಳ್ಳೇರ, ರಮೇಶ ಪಾಲನಕರ, ಮುರುಗೆಪ್ಪ ಶೆಟ್ಟರ, ನಿಂಗಪ್ಪ ಗೊಬ್ಬೆರ, ಎಸ್‌.ಆರ್‌. ಅಂಗಡಿ, ಚೋಳಪ್ಪ ಕಸವಾಳ, ವಿಶ್ವನಾಥ ಪಾಟೀಲ ಸೇರಿದಂತೆ ಪಕ್ಷ ದ ಮುಖಂಡರು, ಕಾರ್ಯಕರ್ತರು ಧರಣಿಯಲ್ಲಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ