ಆ್ಯಪ್ನಗರ

ಬಾಲಕ ಕಾಣೆ, ಪ್ರಕರಣ ದಾಖಲು

ಬ್ಯಾಡಗಿ: ಸಂಬಂಧಿಕರ ಮನೆಗೆ ಹೋಗಿ ಬರುತ್ತೇನೆಂದು ಹೇಳಿ ಹೋಗಿದ್ದ ಬಾಲಕನೊಬ್ಬ ಕಾಣೆಯಾಗಿರುವ ಘಟನೆ ತಾಲೂಕಿನ ಹೆಡ್ಡಿಗೊಂಡ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

Vijaya Karnataka 16 Dec 2018, 5:00 am
ಬ್ಯಾಡಗಿ: ಸಂಬಂಧಿಕರ ಮನೆಗೆ ಹೋಗಿ ಬರುತ್ತೇನೆಂದು ಹೇಳಿ ಹೋಗಿದ್ದ ಬಾಲಕನೊಬ್ಬ ಕಾಣೆಯಾಗಿರುವ ಘಟನೆ ತಾಲೂಕಿನ ಹೆಡ್ಡಿಗೊಂಡ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
Vijaya Karnataka Web the boy is missing the case is recorded
ಬಾಲಕ ಕಾಣೆ, ಪ್ರಕರಣ ದಾಖಲು


ಕಾಣೆಯಾದ ಬಾಲಕ ಹೆಡ್ಡಿಗೊಂಡ ಗ್ರಾಮದ ನಿವಾಸಿ ಶಿವಯೋಗಿ ಶಿಡೆನೂರ ಎಂಬುವವರ ಪುತ್ರ ಅಭಿಷೇಕ್‌ ಶಿವಯೋಗಿ ಶಿಡೆನೂರ (17) ಎಂದು ಗುರುತಿಸಲಾಗಿದೆ. ನವೆಂಬರ್‌ 3 ರಂದು ಸಂಬಂಧಿಕರ ಮನೆಗೆ ಹೋಗಿ ಬರುವುದಾಗಿ ತಿಳಿಸಿ ಹೋದವ ಇಲ್ಲಿಯವರೆಗೂ ಮನೆಗೆ ಬಂದಿರುವುದಿಲ್ಲ.

ಪ್ರಕರಣ ದಾಖಲು:
ಕಳೆದ ಒಂದು ತಿಂಗಳಿನಿಂದ ಕಾಣೆಯಾಗಿರುವ ಬಾಲಕನನ್ನು ಎಲ್ಲ ಕಡೆಗಳಲ್ಲಿ ಹುಡುಕಿದರು ಸಿಗದ ಹಿನ್ನೆಲೆ ಯಾರೋ ಮಗನನ್ನು ಅಪಹರಣ ಮಾಡಿರಬಹುದು ಎಂಬ ಶಂಕೆಯೊಂದಿಗೆ ಮಗನನ್ನು ಹುಡುಕಿಕೊಡುವಂತೆ ಪೋಷಕರು ಕಾಗಿನೆಲೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಚಹರೆ: ನಾಪತ್ತೆಯಾಗಿರುವ ಬಾಲಕ ಅಭಿಷೇಕ ಸುಮಾರು 5.4 ಇಂಚು ಉದ್ದ, ದುಂಡು ಮುಖ, ನೀಟಾದ ಮೂಗು ಬಲಗೈಯಲ್ಲಿ ಅಮ್ಮ ಮತ್ತು ಎನ್‌ಎಸ್‌ ಎಂಬ ಅಚ್ಚೆ ಹಾಕಿಸಿಕೊಂಡಿದ್ದಾನೆ, ಕನ್ನಡ, ಇಂಗ್ಲಿಷ್‌ ಮತ್ತು ಹಿಂದಿ ಭಾಷೆ ಮಾತನಾಡುತ್ತಾನೆ, ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಶರ್ಟ್‌, ಕಪ್ಪು ಬಣ್ಣದ ಪ್ಯಾಂಟ್‌ ಧರಿಸಿರುತ್ತಾನೆ. ಈತನ ಬಗ್ಗೆ ಸುಳಿವು ಸಿಕ್ಕಲ್ಲಿ ಎಸ್‌.ಪಿ.ಹಾವೇರಿ 9480804501 ಹೆಚ್ಚುವರಿ ಎಸ್‌.ಪಿ.9480804502, ಡಿಎಸ್‌ಪಿ 9480804520, ಪಿ.ಎಸ್‌.ಬ್ಯಾಡಗಿ, 9880804531, ಜಿಲ್ಲಾ ಕಂಟ್ರೋಲ್‌ ರೂಂ-08375-227368 ಹಾಗೂ ಕಾಗಿನೆಲೆ ಪೊಲೀಸ್‌ ಠಾಣೆ, 08375-289233 ಕರೆ ಮಾಡುವಂತೆ ಕಾಗಿನೆಲೆ ಪೊಲೀಸ್‌ ಠಾಣೆ ಪಿಎಎಸ್‌ಐ ಸಿ.ಹನುಮಂತಪ್ಪ ಪ್ರಕಟಣೆಯಲ್ಲಿ ಕೋರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ