ಆ್ಯಪ್ನಗರ

ನದಿಗಳ ಸಂಗಮ ಸ್ಥಳ ಈಗ ಜನಾಕರ್ಷಣೆ ತಾಣ

ಗುತ್ತಲ : ವರುಣನ ಆರ್ಭಟದಿಂದ ಜನಜೀವನ ಸಂಕಷ್ಟ ಎದುರಿಸುತ್ತಿದ್ದರೆ, ಗಳಗನಾಥ ಗ್ರಾಮ ಬಳಿಯ ನದಿಗಳ ಸಂಗಮ ಸ್ಥಳ ಎಲ್ಲರನ್ನು ಆಕರ್ಷಿಸುತ್ತಿದೆ.

Vijaya Karnataka 10 Aug 2019, 5:00 am
ಗುತ್ತಲ : ವರುಣನ ಆರ್ಭಟದಿಂದ ಜನಜೀವನ ಸಂಕಷ್ಟ ಎದುರಿಸುತ್ತಿದ್ದರೆ, ಗಳಗನಾಥ ಗ್ರಾಮ ಬಳಿಯ ನದಿಗಳ ಸಂಗಮ ಸ್ಥಳ ಎಲ್ಲರನ್ನು ಆಕರ್ಷಿಸುತ್ತಿದೆ.
Vijaya Karnataka Web HVR-9GTL-1
ಗುತ್ತಲ ಸಮೀಪದ ಗಳಗನಾಥ ಗ್ರಾಮದಲ್ಲಿ ನದಿಗಳ ಸಂಗಮಸ್ಥಳ.


ಹಾವೇರಿ ಜಿಲ್ಲೆಯ ಗಡಿ ಭಾಗದಲ್ಲಿರುವ ಗಳಗನಾಥ ಗ್ರಾಮ 5 ನದಿಗಳ ಸಂಗಮ ಸ್ಥಳವಾಗಿದ್ದು, ತುಂಗಾ, ಭದ್ರಾ, ಕುಮದ್ವತಿ, ವರದಾ, ಧರ್ಮಾ ನದಿಗಳನ್ನು ಇಲ್ಲಿ ಒಟ್ಟಿಗೆ ನೋಡಬಹುದಾಗಿದೆ.

ಇಲ್ಲಿ ಪುರಾತನ ಕಾಲದ ಗಳಗೇಶ್ವರ ದೇವಸ್ಥಾನ ನದಿ ದಂಡೆಯ ಎತ್ತರ ಪ್ರದೇಶದಲ್ಲಿದೆ. ದೇವಸ್ಥಾನದ ಮುಂಭಾಗದಲ್ಲಿ ನಿಂತುಕೊಂಡು ಮೈದುಂಬಿ ಹರಿಯುವ ನದಿ ನೀರನ್ನು ನೋಡಬಹುದಾಗಿದೆ. ಇದರೊಂದಿಗೆ ಐತಿಹಾಸಿಕ ಗಳಗೇಶ್ವರ ದೇವಸ್ಥಾನ ಎಲ್ಲರನ್ನೂ ಆಕರ್ಷಿಸುತ್ತಿದೆ.

ಪಂಚ ನಂದಿಗಳು ಸೇರುವ ಏಕೈಕ ಗ್ರಾಮ ಗಳಗನಾಥ ಪ್ರತಿ ವರ್ಷ ನದಿ ನೀರಿನ ಪ್ರವಾಹಕ್ಕೆ ಒಳಗಾಗುತ್ತಿದ್ದು, ನದಿ ದಂಡೆಯಲ್ಲಿದ್ದ ಗ್ರಾಮವನ್ನು 1992 ರಲ್ಲಿ ಎತ್ತರ ಪ್ರದೇಶಕ್ಕೆ ಸ್ಥಳಾಂತರಿಸಿದ್ದಾರೆ. ಆದರೂ ಸಹ ನದಿ ದಂಡೆಯಲ್ಲಿ ಇನ್ನೂ ಅನೇಕ ಕುಟುಂಬಗಳು ವಾಸವಾಗಿವೆ. 300ಕ್ಕೂ ಹೆಚ್ಚು ಕುಟುಂಬಗಳು ಇದ್ದು, 700 ಏಕರೆ ಭೌಗೋಳಿಕ ಕ್ಷೇತ್ರವನ್ನು ಹೊಂದಿದೆ. ಸದಾ ಹಚ್ಚು ಹಸಿರಿನಿಂದ ಕಂಗೊಳಿಸುವ ಈ ಗ್ರಾಮ ಕೆಂಪು ಮತ್ತು ಕಪ್ಪು ಮಣ್ಣಿನಿಂದ ಕೊಡಿದ್ದು, ಬಾಳೆ, ಕಬ್ಬು, ಭತ್ತ ,ಶೇಂಗಾ, ಮಾವು, ತೆಂಗು ಬೆಳೆಯುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ