ಆ್ಯಪ್ನಗರ

ಒತ್ತಾಯಕ್ಕೆ ಕಾಂಗ್ರೆಸ್‌ ಸೇರಿದೆ: ಆರ್‌.ಶಂಕರ್‌

ರಾಣೇಬೆನ್ನೂರ: ''ನನಗೆ ಕಾಂಗ್ರೆಸ್‌ ಪಕ್ಷ ಸೇರುವ ಇಚ್ಛೆಯಿರಲಿಲ್ಲ, ಮುಖಂಡರ ಒತ್ತಾಯದ ಕಾರಣ ಅನಿವಾರ್ಯವಾಗಿ ಪಕ್ಷ ಕ್ಕೆ ಸೇರ್ಪಡೆಯಾಗಿದ್ದೇನೆ'' ಎಂದು ಸಚಿವ ಹಾಗೂ ಸ್ಥಳೀಯ ಕ್ಷೇತ್ರದ ಶಾಸಕ ಆರ್‌.ಶಂಕರ್‌ ಹೇಳಿದರು.

Vijaya Karnataka 17 Jun 2019, 5:00 am
ರಾಣೇಬೆನ್ನೂರ: ''ನನಗೆ ಕಾಂಗ್ರೆಸ್‌ ಪಕ್ಷ ಸೇರುವ ಇಚ್ಛೆಯಿರಲಿಲ್ಲ, ಮುಖಂಡರ ಒತ್ತಾಯದ ಕಾರಣ ಅನಿವಾರ್ಯವಾಗಿ ಪಕ್ಷ ಕ್ಕೆ ಸೇರ್ಪಡೆಯಾಗಿದ್ದೇನೆ'' ಎಂದು ಸಚಿವ ಹಾಗೂ ಸ್ಥಳೀಯ ಕ್ಷೇತ್ರದ ಶಾಸಕ ಆರ್‌.ಶಂಕರ್‌ ಹೇಳಿದರು.
Vijaya Karnataka Web the congress has joined the demand r shankar
ಒತ್ತಾಯಕ್ಕೆ ಕಾಂಗ್ರೆಸ್‌ ಸೇರಿದೆ: ಆರ್‌.ಶಂಕರ್‌


ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ತಾವು ಯಾವ ಪಕ್ಷ ಕ್ಕೂ ಬೆಂಬಲ ನೀಡದೇ ತಟಸ್ಥ ಧೋರಣೆ ಅನುಸರಿಸಿದ್ದು ರಾಜಕೀಯ ತಂತ್ರಗಾರಿಕೆ. ಮೇಲಾಗಿ ತಮಗೆ ಯಾವ ಪಕ್ಷ ದವರೂ ಬೆಂಬಲ ನೀಡುವಂತೆ ಕೋರಿರಲಿಲ್ಲ. ರಾಜಕೀಯದಲ್ಲಿ ಅವಕಾಶಗಳಿಗೆ ಮಣೆ ಹಾಕಲಾಗುತ್ತಿದ್ದು ನಾನೇನು ಸನ್ಯಾಸಿಯಲ್ಲ ಎಂದರು.

ವಿಧಾನಸಭೆ ಮಾಜಿ ಅಧ್ಯಕ್ಷ ಹಾಗೂ ಸ್ಥಳೀಯ ಕ್ಷೇತ್ರದ ಮಾಜಿ ಶಾಸಕ ಕೆ.ಬಿ.ಕೋಳಿವಾಡ ಬಗ್ಗೆ ಮಾತನಾಡುವುದಿಲ್ಲ, ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ನೀಡುತ್ತೇನೆ. ಕಳೆದ ಬಾರಿ ಸಚಿವರಾಗಿದ್ದಾಗ ಕೊಪ್ಪಳ ಜಿಲ್ಲೆಯ ಉಸ್ತುವಾರಿ ನೀಡಿದ್ದರಿಂದ ಕ್ಷೇತ್ರದ ಅಭಿವೃದ್ಧಿಗೆ (ರಾಣೇಬೆನ್ನೂರ ವಿಧಾನಸಭಾ ಕ್ಷೇತ್ರ) ಹೆಚ್ಚಿನ ಒತ್ತು ನೀಡಲು ಆಗಿರಲಿಲ್ಲ. ಚುನಾವಣೆ ಪೂರ್ವದಲ್ಲಿ ಕ್ಷೇತ್ರದ ಮತದಾರರಿಗೆ ಭರವಸೆ ನೀಡಿದಂತೆ ತಾಲೂಕನ್ನು ಬೆಂಗಳೂರು ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಶ್ರಮಿಸುತ್ತೇನೆ. ಇದುವರೆಗೂ ತಾಲೂಕಿನ ಅಭಿವೃದ್ಧಿಗೆ 250 ಕೋಟಿ ಅನುದಾನ ತಂದಿದ್ದೇನೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ