ಆ್ಯಪ್ನಗರ

ನೆಗೆಟಿವ್‌ ವರದಿ ತಂದ ಸಮಾಧಾನ

ಹಾವೇರಿ : ಸಾರ್ವಜನಿಕರಲ್ಲಿಆತಂಕಕ್ಕೆ ಕಾರಣವಾಗಿದ್ದ ಬಳ್ಳಾರಿ ಕೆಎಸ್‌ಆರ್‌ಪಿ ಪೇದೆಗೆ ನೆಗಡಿ, ಜ್ವರ ಬಂದ ಸುದ್ದಿ ನೆಗೆಟಿವ್‌ ವರದಿ ಮೂಲಕ ಸುಖಾಂತ್ಯ ಕಂಡಿದೆ. ಜಿಲ್ಲಾಆಸ್ಪತ್ರೆಯ ಐಸೋಲೇಷನ್‌ ವಾರ್ಡ್‌ನಲ್ಲಿಕೆಲಸ ನಿರ್ವಹಿಸುತ್ತಿರುವ ವೈದ್ಯರಿಗೆ ಮತ್ತು ಶುಶ್ರೂಕ ಸಿಬ್ಬಂದಿಗಳಿಗೆ ನೆಮ್ಮದಿಯನ್ನುಂಟು ಮಾಡಿದೆ.

Vijaya Karnataka 16 Apr 2020, 5:00 am
ಹಾವೇರಿ : ಸಾರ್ವಜನಿಕರಲ್ಲಿಆತಂಕಕ್ಕೆ ಕಾರಣವಾಗಿದ್ದ ಬಳ್ಳಾರಿ ಕೆಎಸ್‌ಆರ್‌ಪಿ ಪೇದೆಗೆ ನೆಗಡಿ, ಜ್ವರ ಬಂದ ಸುದ್ದಿ ನೆಗೆಟಿವ್‌ ವರದಿ ಮೂಲಕ ಸುಖಾಂತ್ಯ ಕಂಡಿದೆ. ಜಿಲ್ಲಾಆಸ್ಪತ್ರೆಯ ಐಸೋಲೇಷನ್‌ ವಾರ್ಡ್‌ನಲ್ಲಿಕೆಲಸ ನಿರ್ವಹಿಸುತ್ತಿರುವ ವೈದ್ಯರಿಗೆ ಮತ್ತು ಶುಶ್ರೂಕ ಸಿಬ್ಬಂದಿಗಳಿಗೆ ನೆಮ್ಮದಿಯನ್ನುಂಟು ಮಾಡಿದೆ.
Vijaya Karnataka Web the consolation brought by the negative report
ನೆಗೆಟಿವ್‌ ವರದಿ ತಂದ ಸಮಾಧಾನ


ಕೋವಿಡ್‌ ನಿಯಂತ್ರಣಕ್ಕೆ ಬಂದಿದ್ದ ಬಳ್ಳಾರಿ ಕೆಎಸ್‌ಆರ್‌ಪಿ ತುಕಡಿಯಲ್ಲಿದ್ದ 25 ಪೇದೆಗಳ ಪೈಕಿ ಓರ್ವ ಪೇದೆಗೆ ಮಂಗಳವಾರ ನೆಗಡಿ, ಕೆಮ್ಮು ಜತೆಗೆ ಜ್ವರ ಕಾಣಿಸಿದ ಹಿನ್ನೆಲೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಇನ್ನುಳಿದ 24 ಪೇದೆಗಳ ಸಂಪರ್ಕದ ಹಿನ್ನೆಲೆ ಹಳೆಯ ಎಸ್ಪಿ ಕಚೇರಿಯಲ್ಲೇ ಕ್ವಾರಂಟೈನ್‌ನಲ್ಲಿಡಲಾಗಿತ್ತು. ಇದಕ್ಕೆ ಅನತಿ ದೂರದಲ್ಲಿರುವ ಜಿಲ್ಲಾಸಶಸ್ತ್ರ ಮೀಸಲು ಪಡೆಯ ಮಹಿಳೆಯರು ವಿರೋಧ ವ್ಯಕ್ತಪಡಿಸಿ ಕ್ವಾರಂಟೈಟ್‌ನಲ್ಲಿರುವ ಎಲ್ಲರನ್ನೂ ಬೇರೆ ಕಡೆ ಸ್ಥಳಾಂತರಿಸುವಂತೆ ಎಸ್ಪಿ ಅವರಿಗೆ ಆಗ್ರಹಿಸಿದ್ದರು.

ಈ ಸುದ್ದಿ ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರಲ್ಲಿಆತಂಕವನ್ನುಂಟು ಮಾಡಿತ್ತು. ರಾತ್ರಿಯೇ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ ವರಿಷ್ಠಾಧಿಕಾರಿ ಕೆ.ಜೆ. ದೇವರಾಜು ನಿವಾಸಿಗಳಿಗೆ ವಾಸ್ತವ ಸಂಗತಿ ವಿವರಿಸಿ ಮನವೊಲಿಸುವಲ್ಲಿಯಶಸ್ವಿಯಾಗಿದ್ದರು.

ಐಸೋಲೇಷನ್‌ನಲ್ಲಿದಾಖಲಾಗಿರುವ ಪೇದೆಯ ಗಂಟಲು ದ್ರವ ಪರೀಕ್ಷೆ ಕುರಿತು ಶಿವಮೊಗ್ಗ ಲ್ಯಾಬ್‌ನಿಂದ ವರದಿ ಬಂದಿದ್ದು, ಇದು ನೆಗೆಟಿವ್‌ ಬಂದಿರುವ ಹಿನ್ನೆಲೆ ಯಾರೂ ಭಯ ಪಡುವ ಪ್ರಶ್ನೆಯೇ ಇಲ್ಲಎಂದು ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಂದ್ರ ದೊಡ್ಮನಿ ಸ್ಪಷ್ಟಪಡಿಸಿದ್ದಾರೆ. ಸದ್ಯಕ್ಕೆ ಪೇದೆಯನ್ನು ಜಿಲ್ಲಾಆಸ್ಪತ್ರೆಯ ಐಸೋಲೇಷನ್‌ ವಾರ್ಡ್‌ನಲ್ಲೇ ಇರಿಸಿ ನಿಗಾವಹಿಸಲಾಗುತ್ತಿದೆ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ