ಆ್ಯಪ್ನಗರ

ಕಾಂಗ್ರೆಸ್‌ ಗೆಲುವಿನ ದಿನ ಹತ್ತಿರ

ಶಿಗ್ಗಾವಿ: ನೂರಾರು ವರ್ಷದ ಇತಿಹಾಸ ಹೊಂದಿದ ಕಾಂಗ್ರೆಸ್‌ಗೆ ದೇಶದಲ್ಲಾದ ಈಗಿನ ಸೋಲು ಶಾಶ್ವತವಲ್ಲ. ಗೆಲುವಿನಿಂದ ಪುಟದೇಳುವ ದಿನಗಳ ಹತ್ತಿರವಿದೆ. ಕಾರ್ಯಕರ್ತರು ಕ್ರೀಯಾಶೀಲರಾಗಿ ಬರುವ ಚುನಾವಣೆಗಳಲ್ಲಿಪಕ್ಷ ಗೆಲ್ಲಿಸುವ ಹೊಣೆಗಾರಿಕೆ ಹೊತ್ತುಕೊಳ್ಳಬೇಕು ಎಂದು ಕಾಂಗ್ರೆಸ್‌ ಮುಖಂಡ ಪ್ರೊ.ಆರ್‌.ಎಂ.ಕುಬೇರಪ್ಪ ಕರೆ ನೀಡಿದರು.

Vijaya Karnataka 24 Sep 2019, 5:00 am
ಶಿಗ್ಗಾವಿ: ನೂರಾರು ವರ್ಷದ ಇತಿಹಾಸ ಹೊಂದಿದ ಕಾಂಗ್ರೆಸ್‌ಗೆ ದೇಶದಲ್ಲಾದ ಈಗಿನ ಸೋಲು ಶಾಶ್ವತವಲ್ಲ. ಗೆಲುವಿನಿಂದ ಪುಟದೇಳುವ ದಿನಗಳ ಹತ್ತಿರವಿದೆ. ಕಾರ್ಯಕರ್ತರು ಕ್ರೀಯಾಶೀಲರಾಗಿ ಬರುವ ಚುನಾವಣೆಗಳಲ್ಲಿಪಕ್ಷ ಗೆಲ್ಲಿಸುವ ಹೊಣೆಗಾರಿಕೆ ಹೊತ್ತುಕೊಳ್ಳಬೇಕು ಎಂದು ಕಾಂಗ್ರೆಸ್‌ ಮುಖಂಡ ಪ್ರೊ.ಆರ್‌.ಎಂ.ಕುಬೇರಪ್ಪ ಕರೆ ನೀಡಿದರು.
Vijaya Karnataka Web 23SGN-2_23


ಸೋಮವಾರ ಪಟ್ಟಣದಲ್ಲಿಪದವೀಧರ ಮತದಾರರ ನೋಂದಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಜನ ಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡುವ ಪಕ್ಷವಾಗಿದೆ. ಆದರೆ, ಕ್ಷಣಿಕ ಸೋಲಿಗೆ ಧೃತೀಗೆಡದ ಪಕ್ಷ ಜನರ ಸಮಸ್ಯೆಗೆ ಪರಿಹಾರವಾಗಿ ಸಂಘಟನೆಗೊಳ್ಳುತ್ತಿದೆ. ವರಿಷ್ಠರು ಪಕ್ಷದ ಗತವೈಭವ ಮರುಸ್ಥಾಪನೆಗೆ ಶ್ರಮಿಸುತ್ತಿದ್ದಾರೆ. ಸ್ಥಳೀಯವಾಗಿ ಕಾರ್ಯಕರ್ತರು ಸಂಘಟನೆಯಲ್ಲಿತೊಡುಗಿಸಿಕೊಳ್ಳಲಿ ಎಂದು ಮನವಿ ಮಾಡಿದರು.

ದೇಶದ ಜನರ ದಾರಿ ತಪ್ಪಿಸುತ್ತಿರುವ ನರೇಂದ್ರ ಮೋದಿ ಮಹಾನ್‌ ಸುಳ್ಳುಗಾರ. ದೇಶಕ್ಕೆ ಎದುರಾದ ಆರ್ಥಿಕ ಕೆಟ್ಟ ಸ್ಥಿತಿಯನ್ನು ಬಿಜೆಪಿ ಒಪ್ಪಿಕೊಳ್ಳುತ್ತಿದೆ. ಆದರೂ ಬೀಗುವುದನ್ನು ಬಿಡುತ್ತಿಲ್ಲ. ಬಿಜೆಪಿ ಅಬ್ಬರ ಅಂತ್ಯಕ್ಕೆ ಬರುತ್ತಿದೆ. ಕಾರ್ಯಕರ್ತರು ಬರುವ ಪದವೀಧರರ ಚುನಾವಣೆಯಲ್ಲಿಹೊಸ ಮತದಾರರ ನೋಂದಣಿ ಮಾಡಿಸುವ ಮೂಲಕ ಅಭ್ಯರ್ಥಿಯಾಗುವ ತಮಗೆ ಗೆಲುವು ತಂದುಕೊಡಬೇಕು ಎಂದು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್‌ ಅಧ್ಯಕ್ಷ ಎಂ.ಎನ್‌.ವೆಂಕೋಜಿ, ಮುಖಂಡ ಗುರುನಗೌಡ ಪಾಟೀಲ ಮಾತನಾಡಿ, ಕಬೇರಪ್ಪ ಅವರನ್ನು ಗೆಲ್ಲಿಸಿದರೇ ನಾವೇ ಗೆದ್ದಂತೆ. ನಮ್ಮ ಸಮಸ್ಯೆಗೆ ಪರಿಹಾರಕ್ಕಾಗಿ ಇನ್ನೊಬ್ಬರ ಬಳಿ ಹೋಗುವುದನ್ನು ತಪ್ಪಿಸಿಕೊಳ್ಳಬೇಕಾದರೇ ಅವರ ಗೆಲುವಿಗೆ ಈಗಿನಿಂದಲೇ ಸಂಘಟಿತರಾಗಬೇಕು. ಮೊದಲ ಹಂತದ ನೊಂದಣಿ ಕಾರ್ಯಕ್ರಮ 1-102019 ರಿಂದ 6-112019ಕ್ಕೆ ಮುಕ್ತಾಯವಾಗುತ್ತದೆ. ಸಮಯ ಸದ್ಬಳಿಕೆ ಮಾಡಿಕೊಳ್ಳಲು ಕರೆ ನೀಡಿದರು.

ಚಂದ್ರಣ್ಣ ನಡುವಿನಮನಿ, ಬಸನಗೌಡ್ರ ದುಂಡಿಗೌಡ್ರ, ಎಸ್‌.ಎಫ್‌.ಮಣಕಟ್ಟಿ, ಜಿಪಂ.ಸದಸ್ಯ ಬಸವರಾಜ ದೇಸಾಯಿ, ಶಿವಾನಂದ ಬಾಗೂರ, ಪ್ರದೀಪಕುಮಾರ ಗಿರೆಡ್ಡಿ, ಮಲ್ಲಿಕಾರ್ಜುನಗೌಡ್ರ ಪಾಟೀಲ, ಗುರನಗೌಡ್ರ ಪಾಟೀಲ, ಗುಡ್ಡಪ್ಪ ಜಲದಿ, ಕಿರಣ ಪಾಟೀಲ, ಅಬ್ದುಲ್‌ ಕರೀಂಸಾಬ ಮೊಗಲಲ್ಲಿಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ