ಆ್ಯಪ್ನಗರ

ಸುವರ್ಣಾಕ್ಷ ರಗಳಿಂದ ಬರೆದಿಡುವ ದಿನ

ಬ್ಯಾಡಗಿ: ವಿಧಿ 370 ರದ್ದುಗೊಳಿಸಿದ್ದು ಭಾರತದ ಇತಿಹಾಸದಲ್ಲೆ ಸುವರ್ಣಾಕ್ಷ ರಗಳಿಂದ ಬರೆದಿಡುವ ದಿನವಾಗಿದ್ದು ದೇಶವನ್ನು ಒಂದುಗೂಡಿಸುವ ಮಹತ್ತರ ಕಾರ‍್ಯವನ್ನು ಮೋದಿ ನೇತೃತ್ವದ ಕೇಂದ್ರ ಸರಕಾರ ಮಾಡಿದೆ ಎಂದು ಶಾಸಕ ವಿರೂಪಾಕ್ಷ ಪ್ಪ ಬಳ್ಳಾರಿ ಹೇಳಿದರು.

Vijaya Karnataka 6 Aug 2019, 5:00 am
ಬ್ಯಾಡಗಿ: ವಿಧಿ 370 ರದ್ದುಗೊಳಿಸಿದ್ದು ಭಾರತದ ಇತಿಹಾಸದಲ್ಲೆ ಸುವರ್ಣಾಕ್ಷ ರಗಳಿಂದ ಬರೆದಿಡುವ ದಿನವಾಗಿದ್ದು ದೇಶವನ್ನು ಒಂದುಗೂಡಿಸುವ ಮಹತ್ತರ ಕಾರ‍್ಯವನ್ನು ಮೋದಿ ನೇತೃತ್ವದ ಕೇಂದ್ರ ಸರಕಾರ ಮಾಡಿದೆ ಎಂದು ಶಾಸಕ ವಿರೂಪಾಕ್ಷ ಪ್ಪ ಬಳ್ಳಾರಿ ಹೇಳಿದರು.
Vijaya Karnataka Web HVR-05BYD2


ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370 ವಿಧಿ ರದ್ದು ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ‍್ಯಕರ್ತರೊಂದಿಗೆ ಪಟ್ಟಣದ ಹಳೆ ಪುರಸಭೆ ಎದುರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿ ಅವರು ಮಾತನಾಡಿದರು. 370 ವಿಧಿ ರದ್ದು ಮಾಡಿ ರಾಷ್ಟ್ರೀಯ ಏಕೀಕರಣ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಇಟ್ಟಿರುವ ಹೆಜ್ಜೆ ಶ್ಲಾಘನೀಯ ಎಂದರು.

ಪುರಸಭೆ ಸದಸ್ಯ ಬಸವರಾಜ ಛತ್ರದ ಮಾತನಾಡಿ, ದೇಶದ ಭದ್ರತೆ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂಬುದನ್ನು ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ ಶಾ ಐತಿಹಾಸಿಕ ನಿರ್ಣಯ ತೆಗೆದುಕೊಳ್ಳುವ ಮೂಲಕ ಮತ್ತೆ ಸಾಬೀತುಪಡಿಸಿದ್ದಾರೆ. ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದರು.

ಪುರಸಭೆ ಸದಸ್ಯರಾದ ಶಿವರಾಜ ಅಂಗಡಿ, ಸುಭಾಷ ಮಾಳಗಿ, ಏಪಿಎಂಸಿ ನಿರ್ದೇಶಕ ವಿಜಯ ಮಾ ಳಗಿ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಶಿವಯೋಗಿ ಶಿರೂರ, ಶಂಕ್ರಣ್ಣ ಮಾತನವರ, ಸುರೇಶ ಯತ್ನಳ್ಳಿ, ವಿರೇಂದ್ರ ಶೆಟ್ಟರ್‌, ರವೀ ಂದ್ರ ಪಟ್ಟಣ ಶೆಟ್ಟಿ, ರಾಮಣ್ಣ ಉಕ್ಕುಂದ ನಂದೀಶ ವೀರನಗೌಡ್ರ ಇನ್ನಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ