ಆ್ಯಪ್ನಗರ

ಜಾವಲಿನ್‌ ಎಸೆತ ತಂದಿತು ಸಾವು

ಬ್ಯಾಡಗಿ :ಶಾಲೆಯಲ್ಲಿ ಆಟವಾಡುತ್ತಿದ್ದ ವೇಳೆಯಲ್ಲಿ ಆಕಸ್ಮಿಕವಾಗಿ ವಿದ್ಯಾರ್ಥಿಯೊಬ್ಬ ಎಸೆದ ಜಾವಲಿನ್‌ ಸಹಪಾಠಿ ವಿದ್ಯಾರ್ಥಿಯ ಕುತ್ತಿಗೆ ಸೀಳಿದ ಘಟನೆ ತಾಲೂಕಿನ ಕೆರವಡಿ ಸರಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ನಡೆದಿದ್ದು, ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಬುಧವಾರ ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

Vijaya Karnataka 12 Jul 2018, 5:00 am
ಬ್ಯಾಡಗಿ :ಶಾಲೆಯಲ್ಲಿ ಆಟವಾಡುತ್ತಿದ್ದ ವೇಳೆಯಲ್ಲಿ ಆಕಸ್ಮಿಕವಾಗಿ ವಿದ್ಯಾರ್ಥಿಯೊಬ್ಬ ಎಸೆದ ಜಾವಲಿನ್‌ ಸಹಪಾಠಿ ವಿದ್ಯಾರ್ಥಿಯ ಕುತ್ತಿಗೆ ಸೀಳಿದ ಘಟನೆ ತಾಲೂಕಿನ ಕೆರವಡಿ ಸರಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ನಡೆದಿದ್ದು, ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಬುಧವಾರ ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
Vijaya Karnataka Web the death of a javelin throw
ಜಾವಲಿನ್‌ ಎಸೆತ ತಂದಿತು ಸಾವು


ಅದೇ ಗ್ರಾಮದ ನಿವಾಸಿ ಮಲ್ಲಿಕ ರೆಹಾನ್‌ ಮಿರಾಂಬೇರ್‌ (15) ಮೃತ ಬಾಲಕ. ಮಂಗಳವಾರ ಸಂಜೆ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಯಲ್ಲಿ ಬುಧವಾರ ಬೆಳಗ್ಗೆ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾನೆ.

ಘಟನೆ ಹಿನ್ನೆಲೆ: ಶಾಲಾ ಆಟದ ಸಮಯದಲ್ಲಿ ಜಾವಲಿನ್‌ ಎಸೆತದ ಆಟವಾಡುತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿ ಮಲ್ಲಿಕ್‌ ಶೇಖಸನದಿ ಎಸೆದ ಜಾವಲಿನ್‌ ಆಕಸ್ಮಿಕವಾಗಿ ಮಲಿಕ್‌ ರೆಹಾನ್‌ ಕುತ್ತಿಗೆ ಹೊಕ್ಕಿದೆ. ಗಾಬರಿಗೊಂಡ ಬಾಲಕರು ಶಿಕ್ಷ ಕರಿಗೆ ವಿಷಯ ತಿಳಿಸಿದಾಗ, ಕೂಡಲೇ ಶಿಕ್ಷ ಕರು ಆಂಬ್ಯೂಲೆನ್ಸ್‌ಗೆ ಕರೆ ಮಾಡಿದರೂ, ಸಮಯಕ್ಕೆ ಸರಿಯಾಗಿ ಬರದ ಕಾರಣ ಖಾಸಗಿ ವಾಹನದಲ್ಲಿ ತಾಲೂಕಾಸ್ಪತ್ರೆಗೆ ದಾಖಲಿಸಿದ್ದಾರೆ.

ತೀವ್ರ ರಕ್ತ ಸ್ರಾವದಿಂದ ಬಳಲುತ್ತಿದ್ದ ಬಾಲಕನಿಗೆ ತಾಲೂಕಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳವಾರ ರಾತ್ರಿ ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಗಿತ್ತು. ಆದರೆ ಬುಧವಾರ ಬೆಳಗ್ಗೆ ಬಾಲಕ ಮೃತ ಪಟ್ಟಿದ್ದಾನೆ.

ಪಾಲಕರ ಪ್ರತಿಭಟನೆ:ಬಾಲಕನ ಸಾವಿನ ಸುದ್ದಿ ತಿಳಿಯುತ್ತಲೇ ಆಕ್ರೋಶಗೊಂಡ ಪಾಲಕರು ಹಾಗೂ ಗ್ರಾಮಸ್ಥ ರು ಬೆಳಗ್ಗೆಯಿಂದಲೆ ಶಾಲೆಗೆ ಬೀಗ ಜಡಿದು ಪ್ರತಿಭಟನೆ ಆರಂಭಿಸಿದರು. ಈ ಸಂದರ್ಭದಲ್ಲಿ ಶಿಕ್ಷ ಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಸುದ್ದಿ ತಿಳಿದು ಶಾಲೆಗೆ ಆಗಮಿಸಿದ ಪೊಲೀಸರು ಎಲ್ಲರನ್ನೂ ಸಮಾಧಾನ ಪಡಿಸಲು ಮುಂದಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಕೆಲ ಕಾಲ ವಾಗ್ವಾದ ನಡೆದ ಕಾರಣ ವಾತಾವರಣ ವಿಕೋಪಕ್ಕೆ ತಿರುಗಿತು.

ಬಿಇಒ, ತಹಸೀಲ್ದಾರ, ಡಿಡಿಪಿಐ ಭೇಟಿ

ಆಗ ಸ್ಥಳಕ್ಕೆ ಆಗಮಿಸಿದ ಬಿಇಒ ಮಂಜುನಾಥ ಸ್ವಾಮಿ, ತಹಸೀಲ್ದಾರ ಶಿವಶಂಕರ ನಾಯಕ್‌ ಹಾಗೂ ಡಿಡಿಪಿಐ ಆನಂದ ವಡಿಗೇರ ಎಲ್ಲರನ್ನೂ ಸಮಾಧಾನ ಪಡಿಸಲು ಮುಂದಾದರು. ಡಿಡಿಪಿಐ ಆನಂದ ವಡಿಗೇರ ಮಾತನಾಡಿ, ಇದೊಂದು ಅತ್ಯಂತ ದುಃಖ ತರುವ ಹಾಗೂ ಆಘಾತಕಾರಿ ಘಟನೆಯಾಗಿದೆ. ಮೃತ ಬಾಲಕನ ಕುಟುಂಬದ ದುಃಖದಲ್ಲಿ ನಾವೆಲ್ಲ ಭಾಗಿಯಾಗಿದ್ದೇವೆ. ಬಾಲಕನ ಕುಟುಂಬಕ್ಕೆ ಶಿಕ್ಷ ಣ ಇಲಾಖೆ ವತಿಯಿಂದ ಆರ್ಥಿಕ ಸಹಾಯ ಹಾಗೂ ಶಾಸಕರ ಜತೆ ಮಾತನಾಡಿ, ಶಾಸಕರ ಕಲ್ಯಾಣ ನಿಧಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಾಗೂ ಆರ್ಥಿಕ ಸಹಾಯ ಮಾಡುವುದಾಗಿ ಭರವಸೆ ನೀಡಿದರು.

ಪರಿಹಾರಕ್ಕೆ ಆಗ್ರಹ:ಶಾಲೆಯ ಶಿಕ್ಷ ಕರ ಬೇಜವಾಬ್ದಾರಿಯೇ ಈ ದುರಂತಕ್ಕೆ ಕಾರಣ. ದೈಹಿಕ ಶಿಕ್ಷ ಕರು ಇಲ್ಲದ ಸಂದರ್ಭದಲ್ಲಿ ಮಾರಕ ವಸ್ತುಗಳನ್ನು ಬಳಸಿ ಕ್ರೀಡೆಗಳನ್ನು ಆಡಲು ಅವಕಾಶ ನೀಡಿದ್ದು ದೊಡ್ಡ ತಪ್ಪು. ತಪ್ಪಿತಸ್ಥ ಶಿಕ್ಷ ಕರಿಗೆ ಶಿಕ್ಷೆಯಾಗಲೇಬೇಕು ಮತ್ತು ಬಾಲಕನ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಪ್ರತಿಭಟನಕಾರರು ಆಗ್ರಹಿಸಿದರು.

ಮುಗಿಲು ಮುಟ್ಟಿದ ಆಕ್ರಂದನ

ಮೃತ ಬಾಲಕನ ಶವವನ್ನು ಗ್ರಾಮಕ್ಕೆ ತರುತ್ತಿದ್ದಂತೆ ಪಾಲಕರು ಹಾಗೂ ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಮುದ್ದಾಗಿ ಸಾಕಿ ಬೆಳೆಸಿದ್ದ ಮಗನನ್ನು ಕಳೆದುಕೊಂಡ ಪಾಲಕರು ಗೋಳಾಡಿ ಕಣ್ಣೀರಿಡುತ್ತಿದ್ದ ದೃಶ್ಯಗಳು ಎಂತಹ ಕಲ್ಲು ಹೃದಯದವರನ್ನೂ ಕರಗಿಸುವಂತಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ