ಆ್ಯಪ್ನಗರ

ಕನ್ನಡವನ್ನು ರಾಜ್ಯ ಭಾಷೆಯಾಗಿ ಘೋಷಣೆಗೆ ಆಗ್ರಹ

ಬ್ಯಾಡಗಿ: ಮಾತೃಭಾಷೆಯಲ್ಲಿ ಮಾಧ್ಯಮಿಕ ಶಿಕ್ಷ ಣವೆಂಬ ನಿಯಮಕ್ಕೆ ಇಂದಿಗೂ ತಿದ್ದುಪಡಿ ತರಲಾಗುತ್ತಿಲ್ಲ, ಕೂಡಲೇ ಸರಕಾರ ಕನ್ನಡವನ್ನು ರಾಜ್ಯ ಭಾಷೆಯಾಗಿ ಘೋಷಣೆ ಮಾಡಬೇಕು, ಕನ್ನಡ ಹೊರತುಪಡಿಸಿ ಅನ್ಯ ಭಾಷೆ ಪ್ರಥಮವಾಗಿದ್ದಲ್ಲಿ ದ್ವಿತೀಯ ಭಾಷೆಯಾಗಿ ಕನ್ನಡವನ್ನು ಕಡ್ಡಾಯಗೊಳಿಸಬೇಕು ಇಲ್ಲದೇ ಹೋದರೆ ರಾಜ್ಯದಲ್ಲೇ ಕನ್ನಡ ಭಾಷೆಗೆ ಕೊಡಲಿಪೆಟ್ಟು ಬೀಳಲಿದೆ ಎಂದು ವರ್ತಕ ಕುಮಾರಗೌಡ ಪಾಟೀಲ ಖೇದ ವ್ಯಕ್ತಪಡಿಸಿದರು.

Vijaya Karnataka 16 Dec 2018, 5:00 am
ಬ್ಯಾಡಗಿ: ಮಾತೃಭಾಷೆಯಲ್ಲಿ ಮಾಧ್ಯಮಿಕ ಶಿಕ್ಷ ಣವೆಂಬ ನಿಯಮಕ್ಕೆ ಇಂದಿಗೂ ತಿದ್ದುಪಡಿ ತರಲಾಗುತ್ತಿಲ್ಲ, ಕೂಡಲೇ ಸರಕಾರ ಕನ್ನಡವನ್ನು ರಾಜ್ಯ ಭಾಷೆಯಾಗಿ ಘೋಷಣೆ ಮಾಡಬೇಕು, ಕನ್ನಡ ಹೊರತುಪಡಿಸಿ ಅನ್ಯ ಭಾಷೆ ಪ್ರಥಮವಾಗಿದ್ದಲ್ಲಿ ದ್ವಿತೀಯ ಭಾಷೆಯಾಗಿ ಕನ್ನಡವನ್ನು ಕಡ್ಡಾಯಗೊಳಿಸಬೇಕು ಇಲ್ಲದೇ ಹೋದರೆ ರಾಜ್ಯದಲ್ಲೇ ಕನ್ನಡ ಭಾಷೆಗೆ ಕೊಡಲಿಪೆಟ್ಟು ಬೀಳಲಿದೆ ಎಂದು ವರ್ತಕ ಕುಮಾರಗೌಡ ಪಾಟೀಲ ಖೇದ ವ್ಯಕ್ತಪಡಿಸಿದರು.
Vijaya Karnataka Web the demand for a declaration of kannada as a state language
ಕನ್ನಡವನ್ನು ರಾಜ್ಯ ಭಾಷೆಯಾಗಿ ಘೋಷಣೆಗೆ ಆಗ್ರಹ


ತಾಲೂಕಿನ ಮಾಸಣಗಿ ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ತಾಲೂಕು ಘಟಕ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ‍್ಯಕ್ರಮವನ್ನುದ್ದೇಶಿಸಿ ಮಾತನಾಡಿದರು, ಕನ್ನಡ ಭಾಷೆ ಕೇವಲ ರಾಜ್ಯಕ್ಕೆ ಸೀಮಿತವಲ್ಲ ಇದೊಂದು ಸಂಸ್ಕೃತಿ ಕಳೆದ ಆರೇಳು ಶತನಾನಗಳಿಂದಲೂ ದಬ್ಬಾಳಿಕೆಗಳು ನಡೆಯುತ್ತ ಬಂದಿದೆ, ಮೊಘಲರಿಂದ ಆದಿಯಾಗಿ, ತೆಲುಗಿನ ಗಂಗರು, ಮೌರ್ಯರ ಕಾಲದವರೆಗೂ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಮೇಲೆ ದಬ್ಬಾಳಿಕೆ ನಡೆಯುತ್ತ ಬಂದಿದ್ದರೂ ಕನ್ನಡತನವನ್ನು ಉಳಿಸಿಕೊಳ್ಳಲಾಗಿದೆ ಎಂದರು.

ರಾಜ್ಯಗಳ ಸರದಿ: ರಾಜಪ್ರಭುತ್ವ ವ್ಯವಸ್ಥೆ ಬಳಿಕ ಇದೀಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಕನ್ನಡದ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಿದೆ, ಬೆಳಗಾವಿ ಉಳಿಸಿಕೊಳ್ಳಲು ಸುಪ್ರೀಂಕೋರ್ಟ್‌ ಮೆಟ್ಟಿಲೇರಬೇಕಾಯಿತು, ಕಾಸರಗೋಡು ಸಮಸ್ಯೆ ಇಂದಿಗೂ ಜೀವಂತವಾಗಿದೆ, ನಮ್ಮದೇ ಜಿಲ್ಲೆಗಳಾದ ಸೊಲ್ಲಾಪುರ ಮತ್ತು ಕೊಲ್ಲಾಪುರ ಕೈತಪ್ಪಿ ಹೋಗಿವೆ, ರಾಜಧಾನಿ ಬೆಂಗಳೂರು ತಮಿಳುನಾಡಿನ ಒಂದು ಭಾಗವಾಗುತ್ತಿದೆ, ಗೋವಾದಲ್ಲಿ ಕನ್ನಡಿಗರನ್ನು ಒಕ್ಕೆಲೆಬ್ಬಿಸಲಾಗುತ್ತಿದೆ, ಹೀಗೆ ಹತ್ತು ಹಲವು ರೀತಿಯಲ್ಲಿ ಕರ್ನಾಟಕ ಸಂಸ್ಕೃತಿಗಳ ಮೇಲೆ ಸವಾರಿ ನಡೆಯುತ್ತಿದೆ ಎಂದರು.

ಕೇವಲ ಭಾಷೆಯಲ್ಲ ಶೈಕ್ಷ ಣಿಕ ಅಧಃಪತನ: ಉಪನ್ಯಾಸ ನೀಡಿದ ಶಿಕ್ಷ ಕಿ ಇಂದಿರಾ ಕೊಪ್ಪದ, ಕಂಗ್ಲೀಷ್‌ ಶಾಲೆಗಳ ಹಾವಳಿಗೆ ಕೇವಲ ಭಾಷೆಯಷ್ಟೇ ಅಲ್ಲ, ಕನ್ನಡ ಭಾಷಾ ಮಾಧ್ಯಮದ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು ಶೈಕ್ಷ ಣಿಕ ಅಧಃಪತನವಾಗುತ್ತಿದೆ, ಬೆಂಗಳೂರು ನಗರವೊಂದರಲ್ಲೇ ಸುಮಾರು 6 ಸಾವಿರಕ್ಕೂ ಹೆಚ್ಚು ಇಂಗ್ಲೀಷ್‌ ಮಾದ್ಯಮದ ಶಾಲೆಗಳು ಕಾರ‍್ಯನಿರ್ವಹಿಸುತ್ತಿದ್ದು ಇನ್ನೆಲ್ಲಿಯ ಕನ್ನಡ ಎನ್ನುವಂತಾಗಿದೆ ಎಂದರು.

ಇದಕ್ಕೂ ಮುನ್ನ ತಾಪಂ ಉಪಾಧ್ಯಕ್ಷೆ ಶಾಂತವ್ವ ದೇಸಾಯಿ ಜ್ಯೋತಿ ಬೆಳಗಿಸುವ ಮೂಲಕ ಕಾರ‍್ಯಕ್ರಮ ಉದ್ಘಾಟಿಸಿದರು, ಕಸಾಪ ತಾಲೂಕಾಧ್ಯಕ್ಷ ಬಿ.ಎಂ.ಜಗಾಪುರ ಅಧ್ಯಕ್ಷ ತೆ ವಹಿಸಿದ್ದರು, ಎಸ್‌ಡಿಎಂಸಿ ಉಪಾದ್ಯಕ್ಷ ಬಸಪ್ಪ ಕೆಂಪಲಿಂಗಣ್ಣನವರ, ಸದಸ್ಯ ನಿಂಗಪ್ಪ ಹೆಗ್ಗಣ್ಣನವರ, ಮುಖ್ಯಶಿಕ್ಷ ಕ ಎಚ್‌.ಟಿ.ಭರಮಗೌಡ್ರ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ ಅಧ್ಯಕ್ಷ ಜೀವರಾಜ ಛತ್ರದ, ಎಂ.ಎಸ್‌.ಶಶಿಧರ ಎಸ್‌.ಎಚ್‌.ಕುರುಕುಂದಿ ಜಿ.ಟಿ.ಮುಲ್ಲಾ, ಬಿ.ಡಿ.ಗುದಗಿ, ಜಿ.ಟಿ.ಅಂಬಿಗೇರ, ರಾಜೇಂದ್ರಸ್ವಾಮಿ ಹಿರೇಮಠ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಶಿಕ್ಷ ಕ ಐ.ಬಿ.ಮುದಿಗೌಡ್ರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ