ನಂಬಿದ ಭಕ್ತರನ್ನು ಕೈಬಿಡದ ದುರ್ಗಾ ಮಾತೆ
ಕರಿಯಪ್ಪ.ಎಚ್.ಚೌಡಕ್ಕನವರ ರಟ್ಟೀಹಳ್ಳಿ: ತಾಲೂಕಿನ ಬುಳ್ಳಾಪುರ ಗ್ರಾಮದ ಶ್ರೀ ದುರ್ಗಾದೇವಿಯು ಈ ಭಾಗದಲ್ಲಿ ಹೆಸರುವಾಸಿಯಾಗಿದ್ದು, ಶ್ರಾವಣ ಮಾಸದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.
Vijaya Karnataka 21 Aug 2019, 5:00 am
ಕರಿಯಪ್ಪ.ಎಚ್.ಚೌಡಕ್ಕನವರ ರಟ್ಟೀಹಳ್ಳಿ: ತಾಲೂಕಿನ ಬುಳ್ಳಾಪುರ ಗ್ರಾಮದ ಶ್ರೀ ದುರ್ಗಾದೇವಿಯು ಈ ಭಾಗದಲ್ಲಿ ಹೆಸರುವಾಸಿಯಾಗಿದ್ದು, ಶ್ರಾವಣ ಮಾಸದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.
ಈ ದೇವಿಯನ್ನು ಪೂಜಿಸುವ ಭಕ್ತರು ರಾಜ್ಯದ ನಾನಾ ಮೂಲೆಗಳಿಂದ ಬರುತ್ತಾರೆ. ದುರ್ಗಾದೇವಿ ತನ್ನ ಅವತಾರಗಳಿಂದ ದುಷ್ಟಸಂಹಾರ, ಶಿಷ್ಟ ರಕ್ಷ ಣೆ, ನಂಬಿಬಂದ ಭಕ್ತರನ್ನು ಈ ದೇವಿ ಕೈಬಿಡದೇ, ರೋಗ-ರುಜಿನಗಳನ್ನು ದೂರಮಾಡುತ್ತಾಳೆ.
ಶ್ರಾವಣ ಸಂಭ್ರಮ: ಶ್ರಾವಣ ಮಾಸದಲ್ಲಿ ದುರ್ಗಾದೇವಿ ಸನ್ನಿದಿಯಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಪ್ರತಿದಿನ ಬೆಳಿಗ್ಗೆ ವಿಶೇಷ ಪೂಜೆ ನಡೆಯುತ್ತದೆ. ಶುಕ್ರವಾರ ಮತ್ತು ಮಂಗಳವಾರ ಸಹಸ್ರಾರು ಭಕ್ತರು ಬಂದು ದೇವಿಯ ದರ್ಶನಾಶೀರ್ವಾದ ಪಡೆಯುತ್ತಾರೆ.
ಶ್ರಾವಣ ಮಾಸದಲ್ಲಷ್ಟೆ ಅಲ್ಲದೇ ದಸರಾ ಸಂದರ್ಭದಲ್ಲಿ ದೊಡ್ಡ ಮಟ್ಟದ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ರೋಗ-ರುಜಿನಗಳನ್ನು ಕಳೆಯುವ ಮಾತೆಯಾಗಿ ಈ ಭಾಗದಲ್ಲಿ ಕಂಡು ಬಂದಿದ್ದಾಳೆ. ಇಂದಿಗೂ ಅನಾರೋಗ್ಯಪೀಡಿತರು ದೇವಿಯ ಸನ್ನಿದಿಗೆ ಬಂದು ಹೋಗುತ್ತಿದ್ದಾರೆ.
5 ಕೋಟಿ ವೆಚ್ಚದಲ್ಲಿ ದೇವಸ್ಥಾನ: ಬುಳ್ಳಾಪುರ ಗ್ರಾಮದಲ್ಲಿ ದೇವಿಯ ಹಳೆ ದೇವಸ್ಥಾನವನ್ನು ತೆಗೆದು 5 ಕೋಟಿ ರೂ. ವೆಚ್ಚದಲ್ಲಿ ಬೃಹತ್ ದೇವಸ್ಥಾನ ನಿರ್ಮಾಣವಾಗುತ್ತಿದೆ. ಸಂಪೂರ್ಣ ಕಲ್ಲಿನಿಂದ ನಿರ್ಮಿಸುವುದಕ್ಕೆ ಗ್ರಾಮಸ್ಥರು, ಭಕ್ತರು ಮುಂದಾಗಿದ್ದಾರೆ.
ಈ ಭಾಗದಲಷ್ಟೆ ಅಲ್ಲದೇ ರಾಜ್ಯ ಮನೆಮಾತಾಗಿರುವ ಬುಳ್ಳಾಪುರ ದುರ್ಗಾದೇವಿ ಸನ್ನಿದಿಯಲ್ಲಿ ಶ್ರಾವಣ ಸಂಭ್ರಮ ಸಡಗರದಿಂದ ಪ್ರತಿದಿನ ಜರುಗುತ್ತಿದೆ.
ಈ ದೇವಿಯನ್ನು ಪೂಜಿಸುವ ಭಕ್ತರು ರಾಜ್ಯದ ನಾನಾ ಮೂಲೆಗಳಿಂದ ಬರುತ್ತಾರೆ. ದುರ್ಗಾದೇವಿ ತನ್ನ ಅವತಾರಗಳಿಂದ ದುಷ್ಟಸಂಹಾರ, ಶಿಷ್ಟ ರಕ್ಷ ಣೆ, ನಂಬಿಬಂದ ಭಕ್ತರನ್ನು ಈ ದೇವಿ ಕೈಬಿಡದೇ, ರೋಗ-ರುಜಿನಗಳನ್ನು ದೂರಮಾಡುತ್ತಾಳೆ.
ಶ್ರಾವಣ ಸಂಭ್ರಮ: ಶ್ರಾವಣ ಮಾಸದಲ್ಲಿ ದುರ್ಗಾದೇವಿ ಸನ್ನಿದಿಯಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಪ್ರತಿದಿನ ಬೆಳಿಗ್ಗೆ ವಿಶೇಷ ಪೂಜೆ ನಡೆಯುತ್ತದೆ. ಶುಕ್ರವಾರ ಮತ್ತು ಮಂಗಳವಾರ ಸಹಸ್ರಾರು ಭಕ್ತರು ಬಂದು ದೇವಿಯ ದರ್ಶನಾಶೀರ್ವಾದ ಪಡೆಯುತ್ತಾರೆ.
ಶ್ರಾವಣ ಮಾಸದಲ್ಲಷ್ಟೆ ಅಲ್ಲದೇ ದಸರಾ ಸಂದರ್ಭದಲ್ಲಿ ದೊಡ್ಡ ಮಟ್ಟದ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ರೋಗ-ರುಜಿನಗಳನ್ನು ಕಳೆಯುವ ಮಾತೆಯಾಗಿ ಈ ಭಾಗದಲ್ಲಿ ಕಂಡು ಬಂದಿದ್ದಾಳೆ. ಇಂದಿಗೂ ಅನಾರೋಗ್ಯಪೀಡಿತರು ದೇವಿಯ ಸನ್ನಿದಿಗೆ ಬಂದು ಹೋಗುತ್ತಿದ್ದಾರೆ.
5 ಕೋಟಿ ವೆಚ್ಚದಲ್ಲಿ ದೇವಸ್ಥಾನ: ಬುಳ್ಳಾಪುರ ಗ್ರಾಮದಲ್ಲಿ ದೇವಿಯ ಹಳೆ ದೇವಸ್ಥಾನವನ್ನು ತೆಗೆದು 5 ಕೋಟಿ ರೂ. ವೆಚ್ಚದಲ್ಲಿ ಬೃಹತ್ ದೇವಸ್ಥಾನ ನಿರ್ಮಾಣವಾಗುತ್ತಿದೆ. ಸಂಪೂರ್ಣ ಕಲ್ಲಿನಿಂದ ನಿರ್ಮಿಸುವುದಕ್ಕೆ ಗ್ರಾಮಸ್ಥರು, ಭಕ್ತರು ಮುಂದಾಗಿದ್ದಾರೆ.
ಈ ಭಾಗದಲಷ್ಟೆ ಅಲ್ಲದೇ ರಾಜ್ಯ ಮನೆಮಾತಾಗಿರುವ ಬುಳ್ಳಾಪುರ ದುರ್ಗಾದೇವಿ ಸನ್ನಿದಿಯಲ್ಲಿ ಶ್ರಾವಣ ಸಂಭ್ರಮ ಸಡಗರದಿಂದ ಪ್ರತಿದಿನ ಜರುಗುತ್ತಿದೆ.