ಆ್ಯಪ್ನಗರ

ನಿಖರ ಗುರಿ, ಅಧ್ಯಯನದಿಂದ ಅಭಿವೃದ್ಧಿ ಸಾಧ್ಯ

ರಾಣೇಬೆನ್ನೂರ: ಸಮಾಜದ ಮಕ್ಕಳು ಸ್ಪರ್ಧಾತ್ಮಕ ಮನೋಭಾವನೆ ಮತ್ತು ನಿಖರವಾದ ಗುರಿಯನ್ನು ಹೊಂದಿ ಅದರ ಈಡೇರಿಕೆಗಾಗಿ ಅಧ್ಯಯನ ಕೈಗೊಂಡಲ್ಲಿ ಸರ್ವತೋಮುಖ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ತುಮ್ಮಿನಕಟ್ಟಿ ಶ್ರೀ ಗುರು ಮಾರ್ಕಂಡೇಶ್ವರ ಪದ್ಮಶಾಲಿ ಮಹಾಸಂಸ್ಥಾನ ಟ್ರಸ್ಟ್‌ ಕಮೀಟಿ ಪೀಠಾಧ್ಯಕ್ಷ ಪ್ರಭುಲಿಂಗ ಸ್ವಾಮೀಜಿ ಹೇಳಿದರು.

Vijaya Karnataka 4 Jun 2019, 5:00 am
ರಾಣೇಬೆನ್ನೂರ: ಸಮಾಜದ ಮಕ್ಕಳು ಸ್ಪರ್ಧಾತ್ಮಕ ಮನೋಭಾವನೆ ಮತ್ತು ನಿಖರವಾದ ಗುರಿಯನ್ನು ಹೊಂದಿ ಅದರ ಈಡೇರಿಕೆಗಾಗಿ ಅಧ್ಯಯನ ಕೈಗೊಂಡಲ್ಲಿ ಸರ್ವತೋಮುಖ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ತುಮ್ಮಿನಕಟ್ಟಿ ಶ್ರೀ ಗುರು ಮಾರ್ಕಂಡೇಶ್ವರ ಪದ್ಮಶಾಲಿ ಮಹಾಸಂಸ್ಥಾನ ಟ್ರಸ್ಟ್‌ ಕಮೀಟಿ ಪೀಠಾಧ್ಯಕ್ಷ ಪ್ರಭುಲಿಂಗ ಸ್ವಾಮೀಜಿ ಹೇಳಿದರು.
Vijaya Karnataka Web HVR-3RNR4


ನಗರದ ಶ್ರೀ ಗುರು ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಭಾನುವಾರ ಜಿಲ್ಲಾ ಪದ್ಮಶಾಲಿ ನೌಕರರ ಸಂಘ, ಪದ್ಮಶಾಲಿ ನೇಕಾರ ಸಮಾಜ ಸೇವಾ ಸಂಘ, ಮಾರ್ಕಂಡೇಶ್ವರ ಯುವಕ ಮಂಡಳಿ ಹಾಗೂ ಶ್ರೀ ಗುರು ಮಾರ್ಕಂಡೇಶ್ವರ ಪತ್ತಿನ ಸೌರ್ಹಾದ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 2018-19ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಪದ್ಮಶಾಲಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಇಂದಿನ ದಿನಗಳಲ್ಲಿ ಉತ್ತಮ ಅಂಕಗಳ ಗಳಿಕೆಯ ಜತೆಯಲ್ಲಿ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮನೋಭಾವನೆಯನ್ನು ಹೊಂದುವುದು ಅತ್ಯಗತ್ಯವಾಗಿದೆ ಎಂದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಕೆಂಚೆ ಮಾತನಾಡಿ, ಮಕ್ಕಳ ವ್ಯಾಸಂಗಕ್ಕೆ ಸೂಕ್ತ ಸೌಲಭ್ಯಗಳನ್ನು ದೊರಕಿದಲ್ಲಿ ಹೆಚ್ಚಿನ ಸಾಧನೆ ಮಾಡಲು ಸಹಕಾರಿಯಾಗುತ್ತದೆ ಎಂದರು.

ಜಿಲ್ಲಾ ನೇಕಾರ ಸಂಘದ ಒಕ್ಕೂಟದ ಗೌರವಾಧ್ಯಕ್ಷ ಡಾ.ಬಸವರಾಜ ಕೇಲಗಾರ ಮಾತನಾಡಿದರು.

ಉತ್ತರ ಕರ್ನಾಟಕ ಪ್ರಾಂತಿಯ ಪದ್ಮಶಾಲಿ ಸಮಾಜದ ಜಿಲ್ಲಾಧ್ಯಕ್ಷ ಕರಬಸಪ್ಪ ಹಳ್ಳಳ್ಳಿ, ವರ್ತಕ ಶಿವಾನಂದ ಬಡೆಂಕಲ್‌, ಮಾರ್ಕಂಡೇಶ್ವರ ಯುವಕ ಭಕ್ತ ಮಂಡಳಿ ಅಧ್ಯಕ್ಷ ಅಜಯ ಹುಲ್ಲತ್ತಿ, ಮಂಜುನಾಥ ಹುಬ್ಬಳ್ಳಿ, ಶಿವಕುಮಾರ ಜಕ್ಕಾ, ಪದ್ಮಶಾಲಿ ಸಮಾಜ ಸೇವಾ ಸಂಘ ಅಧ್ಯಕ್ಷ ಹನುಮಂತಪ್ಪ ಸುಂಕಾಪುರ, ನಾಗರಾಜ ಅಗಡಿ, ರಾಮಚಂದ್ರಪ್ಪ ಗುತ್ತಲ, ವಾಸುದೇವ ಬಡೆಂಕಲ್‌, ಈಶ್ವರ ಗುಂಡೇರ, ಭೀಮಣ್ಣ ಕೊಟ್ಟೂರ, ಪರಶುರಾಮ ಅಗಡಿ, ಲಕ್ಷ ್ಮಣ ಕಡ್ಲಿಬಾಳ, ನಾಗಾರಾಜ ಗುರಂ, ನಾಗರಾಜ ಪೆನಗೊಂಡ್ಲ, ನಾಗರಾಜ ಕಾಸಲ್‌, ಮಾರುತಿ ಗರಡಿಮನಿ, ಜಗದೀಶ ಅಗಡಿ, ಪ್ರವಿಣ ಕಳಸದ, ಪಾಂಡುರಂಗ ಗಂಗಾವತಿ, ರತ್ನವ್ವ ಪೂಜಾರ ಮತ್ತು ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ