ಆ್ಯಪ್ನಗರ

ರೈತ ಸಂಘದ ಹಾನಗಲ್ಲ ತಾಲೂಕು ಘಟಕ ಅಸ್ತಿತ್ವಕ್ಕೆ

ಅಕ್ಕಿಆಲೂರು :ಉತ್ತರ ಕರ್ನಾಟಕ ರೈತ ಸಂಘದ ಹಾನಗಲ್ಲ ತಾಲೂಕು ಘಟಕ ಅಸ್ತಿತ್ವಕ್ಕೆ ಬಂದಿದ್ದು, ಅಶೋಕ ಕಲ್ಲಿಕರೆಣ್ಣನವರ(ಗೌರವಾಧ್ಯಕ್ಷ ), ಫಕ್ಕೀರೇಶ ಮಲಗುಂದ (ಅಧ್ಯಕ್ಷ ), ಚಂದ್ರಪ್ಪ ಚೌಡಣ್ಣನವರ (ಉಪಾಧ್ಯಕ್ಷ ), ಹನುಮಂತಪ್ಪ ಅಗಡಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

Vijaya Karnataka 1 Aug 2018, 5:00 am
ಅಕ್ಕಿಆಲೂರು :ಉತ್ತರ ಕರ್ನಾಟಕ ರೈತ ಸಂಘದ ಹಾನಗಲ್ಲ ತಾಲೂಕು ಘಟಕ ಅಸ್ತಿತ್ವಕ್ಕೆ ಬಂದಿದ್ದು, ಅಶೋಕ ಕಲ್ಲಿಕರೆಣ್ಣನವರ(ಗೌರವಾಧ್ಯಕ್ಷ ), ಫಕ್ಕೀರೇಶ ಮಲಗುಂದ (ಅಧ್ಯಕ್ಷ ), ಚಂದ್ರಪ್ಪ ಚೌಡಣ್ಣನವರ (ಉಪಾಧ್ಯಕ್ಷ ), ಹನುಮಂತಪ್ಪ ಅಗಡಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
Vijaya Karnataka Web the farmer associations haggala taluk unit is in existence
ರೈತ ಸಂಘದ ಹಾನಗಲ್ಲ ತಾಲೂಕು ಘಟಕ ಅಸ್ತಿತ್ವಕ್ಕೆ


ಸಮೀಪದ ಗಿರಿಸಿನಕೊಪ್ಪದಲ್ಲಿ ನಡೆದ ಸಭೆಯಲ್ಲಿ ತಾಲೂಕು ಘಟಕದ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಉತ್ತರ ಕರ್ನಾಟಕ ರೈತ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರಾಜಶೇಖರ ದೂದಿಹಳ್ಳಿ ಮಾತನಾಡಿ, ಉತ್ತರ ಕರ್ನಾಟಕದ ಬಗ್ಗೆ ಮೊದಲಿನಿಂದಲೂ ನಿರ್ಲಕ್ಷ ್ಯ ಧೋರಣೆ ಅನುಸರಿಸಲಾಗುತ್ತಿದೆ. ಇದೀಗ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರವೂ ನಿರ್ಲಕ್ಷ ್ಯ ಮಾಡುತ್ತಿದೆ. ಇದೇ ರೀತಿ ಮುಂದುವರೆದರೆ ಹೋರಾಟ ಅನಿವಾರ್ಯ, ಇದಕ್ಕೆ ಅವಕಾಶ ನೀಡದೇ ಸರಕಾರ ಜಾಗೃತಿ ವಹಿಸಿ ಉತ್ತರ ಕರ್ನಾಟಕದ ಏಳಿಗೆಗೂ ಕಾಳಜಿ ವಹಿಸಬೇಕಿದೆ ಎಂದರು.

ಜಿಲ್ಲಾ ಘಟಕ ಅಧ್ಯಕ್ಷ ಹನುಮಂತಪ್ಪ ದೀವಿಗಿಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಫಕ್ಕೀರಗೌಡ ಹಾವೇರಿ, ಜಗದೀಶ್‌ ಕುಸಗಾರ, ರಾಮನಗೌಡ ತರ್ಲಘಟ್ಟ, ಫಕ್ಕೀರೇಶ ಕಾಳೆ, ಹನುಮಂತಪ್ಪ ಸುಣಗಾರ, ಸಂತೋಷ್‌ ಕತ್ತಿ, ಪ್ರಭು ಬಿದರಕೊಪ್ಪ, ಪರಶುರಾಮ್‌ ಗಂಟನವರ, ಮಾರುತಿ ಮರೆಕ್ಕನವರ, ಬಸವರಾಜ್‌ ತಳವಾರ, ಈರಪ್ಪ ಕೊಂಡೋಜಿ, ಫಕ್ಕೀರೇಶ ಭಜಂತ್ರಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ