ಆ್ಯಪ್ನಗರ

ಶಿಕ್ಷಣದಲ್ಲಿದೆ ವಿದ್ಯಾರ್ಥಿಗಳ ಭವಿಷ್ಯ

ರಟ್ಟೀಹಳ್ಳಿ: ನಮ್ಮ ಭವಿಷ್ಯವನ್ನು ಮತ್ತೊಬ್ಬರು ತಿದ್ದುವುದಕ್ಕೆ ಬರುವುದಿಲ್ಲ. ನಮ್ಮ ಭವಿಷ್ಯವನ್ನು ನಾವೇ ನೋಡಿಕೊಳ್ಳಬೇಕು. ವಿದ್ಯಾರ್ಥಿಗಳ ಭವಿಷ್ಯ ನೀವು ಪಡೆಯುವ ಶಿಕ್ಷ ಣದ ಮೇಲೆ ನಿಂತಿದೆ ಎಂದು ಮಾಸೂರು ಸರ್ವಜ್ಞ ವಿದ್ಯಾಪೀಠದ ಅಧ್ಯಕ್ಷ ಎ.ಕೆ.ಪಾಟೀಲ ಹೇಳಿದರು.

Vijaya Karnataka 26 Aug 2019, 5:00 am
ರಟ್ಟೀಹಳ್ಳಿ: ನಮ್ಮ ಭವಿಷ್ಯವನ್ನು ಮತ್ತೊಬ್ಬರು ತಿದ್ದುವುದಕ್ಕೆ ಬರುವುದಿಲ್ಲ. ನಮ್ಮ ಭವಿಷ್ಯವನ್ನು ನಾವೇ ನೋಡಿಕೊಳ್ಳಬೇಕು. ವಿದ್ಯಾರ್ಥಿಗಳ ಭವಿಷ್ಯ ನೀವು ಪಡೆಯುವ ಶಿಕ್ಷ ಣದ ಮೇಲೆ ನಿಂತಿದೆ ಎಂದು ಮಾಸೂರು ಸರ್ವಜ್ಞ ವಿದ್ಯಾಪೀಠದ ಅಧ್ಯಕ್ಷ ಎ.ಕೆ.ಪಾಟೀಲ ಹೇಳಿದರು.
Vijaya Karnataka Web HVR-25 RATTIHALLI  5


ತಾಲೂಕಿನ ಮಾಸೂರು ಗ್ರಾಮದ ಸಿದ್ದಮ್ಮ ಬಸನಗೌಡ ಪಾಟೀಲ ಪದವಿ ಮಹಾವಿದ್ಯಾಲಯದ ಬಿ.ಎ. ಹಾಗೂ ಬಿ.ಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಮತ್ತು 2019-20ನೇ ಸಾಲಿನ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಸಾಮಾಜಿಕ ಬದುಕಿನಲ್ಲಿ ಮಾನವೀಯ ಮೌಲ್ಯಗಳು ಕಳೆದುಹೋಗುತ್ತಿವೆ. ಅವುಗಳಿಗೆ ಮತ್ತೆ ಸುಭದ್ರ ನೆಲೆಗಟ್ಟನ್ನು ಒದಗಿಸಬೇಕಾದರೆ ವಿದ್ಯಾರ್ಥಿಗಳಿಂದ ಮಾತ್ರ ಸಾಧÜ್ಯ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಎಷ್ಟು ಕಲಿತರೂ ಕಡಿಮೆಯೇ. ಶಿಕ್ಷ ಣವೆಂಬುವುದು ನಿಂತ ನೀರಲ್ಲ ಸದಾ ಕಲಿಯುತ್ತಾ ಇರಬೇಕು ಎಂದರು.

ರಾಣೇಬೆನ್ನೂರ ಸರ್ಕಾರಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಶೋಭಾ ಸಾಹುಕಾರ ಮಾತನಾಡಿ, ವಿದ್ಯೆ ಎಲ್ಲರ ಬದುಕಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯೆಗೆ ಸರಿಸಮಾನವಾದದು ಯಾವುದು ಇಲ್ಲ. ವಿದ್ಯೆ ಯಾರು ಕಸಿದುಕೊಳ್ಳದ ಆಸ್ತಿ. ಉತ್ತಮ ಶಿಕ್ಷ ಣದ ಜತೆಗೆ ಉತ್ತಮ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ವಿದ್ಯೆಗೆ ಗೌರವ ಬರುತ್ತದೆ ಎಂದು ಹೇಳಿದರು.

ನಿವೃತ್ತ ಉಪನ್ಯಾಸಕ ಎಂ.ಬಿ.ಸಾವಜ್ಜಿಯವರು, ಟಿ.ಎಸ್‌.ಪಾಟೀಲ, ಬಿ.ಟಿ.ಪಿ.ಪ್ರೌಢ ಶಾಲೆಯ ಹಿರಿಯ ಶಿಕ್ಷ ಕ ಶಿವಕುಮಾರ ಡಮ್ಮಳ್ಳಿ, ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಆರ್‌.ಕೋಣ್ತಿ ಮಾತನಾಡಿದರು.

ಸಾಂಸ್ಕೃತಿಕ ವಿಭಾಗದ ಮಾರ್ಗದರ್ಶಕ ಉಪನ್ಯಾಸಕರಾದ ರಾಜೀವಗಾಂಧಿ ತಾವರಗಿ, ಎಸ್‌.ಎಸ್‌.ಹುಲ್ಲಿನಕೊಪ್ಪ, ರೇಣುಕಾ ಚಳಗೇರಿ, ಕ್ರೀಡಾ ವಿಭಾಗದ ಸಂತೋಷ ತಡಕನಹಳ್ಳಿ, ರೂಪ ರಾಂಪೂರೆ, ಚರ್ಚಾ ವಿಭಾಗದ ಜೆ.ಎಂ. ತೋಟದ, ಬೀಮೇಶ ಎಂ.ಬಿ,ರೆಡಕ್ರಾಸ್‌ ಸಂಚಾಲಕ ನಾಗರಾಜ್‌ ಎಚ್‌,ವಿ, ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಉಮೇಶ ಎನ್‌.ಕೆ, ವಿದ್ಯಾರ್ಥಿಗಳ ಕಿರಕುಳ ವಿರೋದಿ ಸಮಿತಿಯ ಬಿ.ಎಸ್‌.ಮಲ್ಲೂರ, ಪರೀಕ್ಷಾ ಸಂಯೋಜಕ ನಸರುಲ್ಲಾ ದೊಡ್ಡಮನಿ, ಶಿಸ್ತು ಸಮಿತಿ ಸಂಚಾಲಕರಾದ ಸುನೀಲ ದೊಡ್ಡಮನಿ, ಶಿವಕುಮಾರ ವಿ. ನಾಯಕ, ಶಿವರಾಜ ರೋತಿ, ಎಂ.ಎಂ. ರಟ್ಟೀಹಳ್ಳಿ ಉಪಸ್ಥಿತರಿದ್ದರು.

ಉಷಾ ಶಿರಗೇರಿ ಪ್ರಾರ್ಥಿಸಿದರು, ಉಪನ್ಯಾಸಕ ಕುಮಾರ ತೀರ್ಥಪ್ಪಳವರ ಸ್ವಾಗತಸಿದರು, ಉಮೇಶ ಕೆ.ಎನ್‌ ನಿರೂಪಿಸದರು, ನಾಗರಾಜ ವಿ.ಎಚ್‌ ವಂದಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ