ಆ್ಯಪ್ನಗರ

ಗ್ಯಾಸ್‌ ಏಜೆನ್ಸಿಗೆ ಕನ್ನ, ಲಕ್ಷ ರೂ ಮೌಲ್ಯದ ವಸ್ತುಗಳು ಕಳವು

ಬ್ಯಾಡಗಿ: ಕಳ್ಳರ ತಂಡವೊಂದು ಪಟ್ಟಣದಲ್ಲಿಸೋಮವಾರ ರಾತ್ರಿ ಹಲವೆಡೆ ಕದಿಯಲು ಯತ್ನಿಸಿ ಕೊನೆಗೆ ಗ್ಯಾಸ್‌ ಏಜೆನ್ಸಿ ಕಚೇರಿಯೊಂದಕ್ಕೆ ಕನ್ನ ಹಾಕಿ ಸಿಸಿ ಕ್ಯಾಮರಾ, ಕಂಪ್ಯೂಟರ್‌ ಸೇರಿದಂತೆ ಸುಮಾರು ಲಕ್ಷ ರೂ.ಬೆಲೆ ಬಾಳುವ ವಸ್ತುಗಳನ್ನು ಹೊತ್ತೊಯ್ದಿದೆ.

Vijaya Karnataka 23 Sep 2020, 5:00 am
ಬ್ಯಾಡಗಿ: ಕಳ್ಳರ ತಂಡವೊಂದು ಪಟ್ಟಣದಲ್ಲಿಸೋಮವಾರ ರಾತ್ರಿ ಹಲವೆಡೆ ಕದಿಯಲು ಯತ್ನಿಸಿ ಕೊನೆಗೆ ಗ್ಯಾಸ್‌ ಏಜೆನ್ಸಿ ಕಚೇರಿಯೊಂದಕ್ಕೆ ಕನ್ನ ಹಾಕಿ ಸಿಸಿ ಕ್ಯಾಮರಾ, ಕಂಪ್ಯೂಟರ್‌ ಸೇರಿದಂತೆ ಸುಮಾರು ಲಕ್ಷ ರೂ.ಬೆಲೆ ಬಾಳುವ ವಸ್ತುಗಳನ್ನು ಹೊತ್ತೊಯ್ದಿದೆ.
Vijaya Karnataka Web 22BYD1A_23
ಕಳ್ಳರು ಅಬಕಾರಿ ಇಲಾಖೆ ಕಚೇರಿ ಅಲ್ಮೇರಾ ಒಡೆದಿರುವುದು.


ಪಟ್ಟಣದ ನೆಹರು ನಗರದಲ್ಲಿನ ಅಬಕಾರಿ ಇಲಾಖೆ ಕಚೇರಿಗೆ ಕನ್ನ ಹಾಕಿ ಅಲ್ಮೇರಾ ಸೇರಿದಂತೆ ಲಾಕರ್‌ಗಳನ್ನು ತಡಕಾಡಿದೆ. ನಗದು ದೊರೆಯದ ಕಾರಣ ಅಲ್ಲಿಂದ ಎದುರಿಗಿನ ಮನೆಯೊಂದರ ಬಾಗಿಲು ಒಡೆದು ಕಳ್ಳತನಕ್ಕೆ ಯತ್ನಿಸಿದೆ. ಆ ಮನೆ ಖಾಲಿ ಇದ್ದ ಕಾರಣ ಯಾವುದೇ ಬೆಲೆ ಬಾಳು ವಸ್ತುಗಳು ಸಿಕ್ಕಿಲ್ಲ. ಕೊನೆಗೆ ಗ್ಯಾಸ್‌ ಏಜೆನ್ಸಿ ಕಚೇರಿಗೆ ನುಗ್ಗಿದೆ.

ಹಾರ್ಡ್‌ ಡಿಸ್ಕ್‌ ಸಹ ಬಿಟ್ಟಿಲ್ಲ
ಪಟ್ಟಣದ ಕಾಕೋಳ ರಸ್ತೆ ಮಾರ್ಗದ ಅರವಿಂದ ಗ್ಯಾಸ್‌ ಏಜೆನ್ಸಿ ಹಿಂದಿನಿಂದ ಕಂಪೌಂಡ್‌ ದಾಟಿ ಬಂದು ಅಲ್ಲಿನ ಸಿಸಿ ಕ್ಯಾಮರಾಗಳನ್ನು ಮೇಲ್ಮುಖ ಮಾಡಿದೆ. ನಂತರ ರಾಡ್‌ನಿಂದ ಹಿಂಭಾಗದ ಕದ ಒಡೆದು ಒಳ ಪ್ರವೇಶಿಸಿದೆ. ನಂತರ ಒಳಗಿದ್ದ ಸಿಸಿ ಕ್ಯಾಮರಾ, ಕಂಪ್ಯೂಟರ್‌, ಗ್ಯಾಸ್‌ ಒಲೆಗಳು, ಡಿವೈಸರ್‌ ಸೇರಿದಂತೆ ಸುಮಾರು ಲಕ್ಷ ರೂ.ಮೌಲ್ಯದ ವಸ್ತುಗಳನ್ನು ಕದ್ದೊಯ್ದಿದ್ದಾರೆ. ತಮ್ಮ ಗುರುತು ಸಿಗಬಾರದು ಎಂಬ ಕಾರಣಕ್ಕೆ ಒಳಗಿದ್ದ ಸಿಸಿ ಕ್ಯಾಮರಾ ಟಿವಿ ಹಾಗೂ ಹಾಡ್‌Üರ್‍ ಡಿಸ್‌ ಅನ್ನು ಸಹ ಬಿಡದೆ ಹೊತ್ತೊಯ್ದಿರುವುದನ್ನು ನೋಡಿದರೆ ಇದು ಪರಿಣಿತ ಕಳ್ಳರ ತಂಡ ಎಂದು ಶಂಕಿಸಲಾಗಿದೆ.

ಶ್ವಾನದಳದಿಂದ ಪರಿಶೀಲನೆ
ಅಬಕಾರಿ ಇಲಾಖೆ ಕಚೇರಿ ಕಳ್ಳತನ ಸುದ್ದಿ ತಿಳಿದ ನಂತರ ಸ್ಥಳಕ್ಕೆ ಡಿಎಸ್ಪಿ ವಿಜಯಕುಮಾರ ಸಂತೋಷ, ಪಿಎಸೈ ಮಹಾಂತೇಶ ಎಂ.ಎಂ. ಸೇರಿದಂತೆ ಪೊಲೀಸ್‌ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಶ್ವಾನದಳ ಹಾಗೂ ಬೆರಳಚ್ಚುಗಾರರ ತಂಡ ಆಗಮಿಸಿ ಪರೀಕ್ಷೆ ನಡೆಸಿ ಕೆಲ ಬೆರಳಚ್ಚಿನ ಸ್ಯಾಂಪಲ್‌ ಸಂಗ್ರಹಿಸಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ