ಆ್ಯಪ್ನಗರ

ಹಾವೇರಿಯಲ್ಲಿ ಅದ್ದೂರಿ ವಿಜಯೋತ್ಸವ

ಹಾವೇರಿ : ಹಾವೇರಿ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನೆಹರು ಓಲೇಕಾರ ಅವರು ಗೆಲವು ಸಾಧಿಸಿದ್ದರಿಂದ ನಗರದಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಅದ್ಧೂರಿಯಾಗಿ ವಿಜಯೋತ್ಸವವನ್ನು ಆಚರಿಸಿದರು.

Vijaya Karnataka 16 May 2018, 5:00 am
ಹಾವೇರಿ : ಹಾವೇರಿ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನೆಹರು ಓಲೇಕಾರ ಅವರು ಗೆಲವು ಸಾಧಿಸಿದ್ದರಿಂದ ನಗರದಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಅದ್ಧೂರಿಯಾಗಿ ವಿಜಯೋತ್ಸವವನ್ನು ಆಚರಿಸಿದರು.
Vijaya Karnataka Web the grand triumph in haveri
ಹಾವೇರಿಯಲ್ಲಿ ಅದ್ದೂರಿ ವಿಜಯೋತ್ಸವ


ನಗರದ ದೇವಗಿರಿಯ ಎಂಜನಿಯರ್‌ ಕಾಲೇಜಿನಲ್ಲಿ ಮಂಗಳವಾರ ಮತ ಎಣಿಕೆ ಕೇಂದ್ರದಿಂದ ಕಾರ್ಯಕರ್ತರು ಮತ್ತು ಅಭಿಮಾನಗಳು ಬಿಜೆಪಿ ಅಭ್ಯರ್ಥಿ ನೆಹರೂ ಓಲೇಕಾರ ಅವರನ್ನು ಹೊತ್ತು ಸಂಭ್ರಮಿಸಿ, ನಂತರ ಬೈಕ್‌ ರಾರ‍ಯಲಿ ಮೂಲಕ ನಗರದಲ್ಲಿ ಸಂಚರಿಸಿ ವಿಜಯೋತ್ಸವವನ್ನು ಆಚರಿಸಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿ ಮುಂಭಾಗ, ಜೆ.ಎಚ್‌.ಪಟೇಲ್‌, ಗಾಂಧಿ ವೃತ್ತ, ಹೊಸಮನಿ ಸಿದ್ಧಪ್ಪ ವೃತ್ತ, ಸುಭಾಸ್‌ ಸರ್ಕಲ್‌, ಎಂ.ಜಿ. ವೃತ್ತದಲ್ಲಿ ಪಟಾಕಿ ಸಿಡಿಸಿ ಕೇಕೆ ಹೊಡೆಯುವ ಮೂಲಕ ಕಾರ್ಯಕರ್ತರು ಸಂಭ್ರಮಿಸಿದರು.

ನಗರದ ವಾರ್ಡ್‌ ವಾರ್ಡ್‌ಗಳಲ್ಲಿ ಗ್ರಾಮೀಣ ಭಾಗದ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಪಟಾಕಿ ಹಂಚಿ ಬಣ್ಣ ಎರಚಿ ಕೊಂಡು ವಿಜಯೋತ್ಸವ ಆಚರಿಸಿದರು.

ನೆಹರೂ ಓಲೇಕಾರ ಅವರು ಹುಕ್ಕೇರಿಮಠಕ್ಕೆ ಭೇಟಿ ನೀಡಿ ಶಿವಲಿಂಗ ಶ್ರೀಗಳ ಮತ್ತು ಶಿವಬಸವ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿ ನಂತರ ಶ್ರೀಗಳ ಆಶೀರ್ವಾದ ಪಡೆದುಕೊಂಡರು.

ಮುತ್ತಯ್ಯ ಕಿತ್ತೂರಮಠ, ಚಂದ್ರಣ್ಣ ಪಟ್ಟಣಶೆಟ್ಟಿ, ಮಹೇಶ ಚಿನ್ನಿಕಟ್ಟಿ, ಮಲ್ಲಣ್ಣ ಹಂದ್ರಾಳ, ಮಲ್ಲಣ್ಣ ಸಾತೇನಹಳ್ಳಿ, ಜಗದೀಶ ಮಲಗೋಡ, ಗಿರೀಶ ತುಪ್ಪದ, ಕಲ್ಲಮ್ಮನವರ ಇಂಜನೀಯರ್‌, ಸಿ. ಎಸ್‌. ರಾಮನಗೌಡ್ರ, ಶಿವಕುಮಾರ ಸಂಗೂರ, ಮಾಣಿಕಚಂದ ಲಾಡರ, ವಿಜಯಕುಮಾರ ಚಿನ್ನಿಕಟ್ಟಿ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ