ಆ್ಯಪ್ನಗರ

ಇನ್ನೂ ಕುಸಿಯುತ್ತಿವೆ ಮನೆ

ಹಾವೇರಿ: ಜಿಲ್ಲಾದ್ಯಂತ ಮಳೆ ಪ್ರಮಾಣದಲ್ಲಿ ಇಳಿಮುಖವಾಗುತ್ತಿದ್ದರೂ ಮನೆ ಕುಸಿತದ ಪ್ರಮಾಣ ದಿನ ದಿನಕ್ಕೂ ಹೆಚ್ಚಳಗೊಳ್ಳುತ್ತಲೇ ಇದೆ. ನೆರೆ ಪರಿಸ್ಥಿತಿ ಸುಧಾರಣೆಯಾಗುತ್ತಿರುವ ಕಾರಣಕ್ಕೆ ಸಂತ್ರಸ್ತ ಕುಟುಂಬಗಳು ಅಳಿದುಳಿದ ಮನೆಯತ್ತ ಮರಳುತ್ತಿರುವ ಹಿನ್ನೆಲೆಯಲ್ಲಿ ಕಾಳಜಿ ಕೇಂದ್ರ ಸಂಖ್ಯೆ 91 ಕ್ಕೆ ಇಳಿಕೆಯಾಗಿದೆ.

Vijaya Karnataka 14 Aug 2019, 5:00 am
ಹಾವೇರಿ: ಜಿಲ್ಲಾದ್ಯಂತ ಮಳೆ ಪ್ರಮಾಣದಲ್ಲಿ ಇಳಿಮುಖವಾಗುತ್ತಿದ್ದರೂ ಮನೆ ಕುಸಿತದ ಪ್ರಮಾಣ ದಿನ ದಿನಕ್ಕೂ ಹೆಚ್ಚಳಗೊಳ್ಳುತ್ತಲೇ ಇದೆ. ನೆರೆ ಪರಿಸ್ಥಿತಿ ಸುಧಾರಣೆಯಾಗುತ್ತಿರುವ ಕಾರಣಕ್ಕೆ ಸಂತ್ರಸ್ತ ಕುಟುಂಬಗಳು ಅಳಿದುಳಿದ ಮನೆಯತ್ತ ಮರಳುತ್ತಿರುವ ಹಿನ್ನೆಲೆಯಲ್ಲಿ ಕಾಳಜಿ ಕೇಂದ್ರ ಸಂಖ್ಯೆ 91 ಕ್ಕೆ ಇಳಿಕೆಯಾಗಿದೆ.
Vijaya Karnataka Web the house is still falling
ಇನ್ನೂ ಕುಸಿಯುತ್ತಿವೆ ಮನೆ


ಜಿಲ್ಲಾದ್ಯಂತ ಅಲ್ಲಲ್ಲಿ ಜಿಟಿ ಜಿಟಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ 33.2 ಮಳೆ ಪ್ರಮಾಣ ದಾಖಲಾಗಿದೆ. ಹಾನಗಲ್ಲ ತಾಲೂಕಿನಲ್ಲಿ ಅತಿ ಹೆಚ್ಚು (8.8) ಮತ್ತು ರಾಣೇಬೆನ್ನೂರ ತಾಲೂಕಿನಲ್ಲಿ ಅತಿ ಕಡಿಮೆ (1.2), ಇನ್ನುಳಿದಂತೆ ಹಾವೇರಿ (3.8), ಬ್ಯಾಡಗಿ (5.2), ಹಿರೇಕೇರೂರ (3.2), ಸವಣೂರ (5.2) ಹಾಗೂ ಶಿಗ್ಗಾವ (5.8) ಮಿ.ಮೀ. ಮಳೆಯಾಗಿದೆ.

ಒಟ್ಟು 8,332 ಮನೆ ಕುಸಿತ: ಜಿಟಿ ಜಿಟಿ ಮಳೆ ಕಾರಣಕ್ಕೆ ಮನೆ ಕುಸಿತದ ಪ್ರಮಾಣ ಹೆಚ್ಚುತ್ತಲೇ ಇದೆ. ಸೋಮವಾರದವರೆಗೆ 7384 ಮನೆ ಕುಸಿತವಾಗಿವೆ. ಮಂಗಳವಾರದ ವೇಳೆಗೆ 948 ಮನೆ ಭಾಗಶಃ ಕುಸಿದಿವೆ. ಮಂಗಳವಾರ ಒಂದೇ ದಿನಕ್ಕೆ ರಾಣೇಬೆನ್ನೂರ ತಾಲೂಕಿನಲ್ಲಿ ಅತಿ ಹೆಚ್ಚು (690) ಮನೆ ಬಿದ್ದಿವೆ. ಹಾನಗಲ್ಲ, ಶಿಗ್ಗಾವಿಯಲ್ಲಿ ಮನೆ ಕುಸಿದಿರುವ ಮಾಹಿತಿ ಲಭ್ಯವಾಗಿಲ್ಲ. ಇನ್ನುಳಿದಂತೆ ಬ್ಯಾಡಗಿ (128), ಸವಣೂರ (60), ಹಾವೇರಿ (50) ಹಾಗೂ ಹಿರೇಕೇರೂರ ತಾಲೂಕಿನಲ್ಲಿ (20) ಮನೆಗಳು ಕುಸಿಯುವ ಮೂಲಕ ಜಿಲ್ಲೆಯಲ್ಲಿ ಒಟ್ಟು ಮನೆ ಕುಸಿತದ ಸಂಖ್ಯೆ 8332 ಕ್ಕೆ ಏರಿಕೆ ಕಂಡಿದೆ.

ಎಮ್ಮೆ ಸಾವು: ಆಗಸ್ಟ್‌ 6 ರಿಂದ 12 ರವರೆಗೆ ಜಿಲ್ಲಾದ್ಯಂತ ಒಟ್ಟು 773 ಜಾನುವಾರು ಸಾವಿನ ಸಂಖ್ಯೆ ಇತ್ತು. ಮಂಗಳವಾರ ಸವಣೂರ ತಾಲೂಕಿನಲ್ಲಿ ಒಂದು ಎಮ್ಮೆ ಸಾವನ್ನಪ್ಪಿದ ಕಾರಣಕ್ಕೆ ಜಾನುವಾರು ಸಾವಿನ ಸಂಖ್ಯೆ 774 ಕ್ಕೆ ತಲುಪಿದೆ.

91 ಕೇಂದ್ರಕ್ಕೆ ಫುಡ್‌ ಕಿಟ್‌: ಜಿಲ್ಲಾದ್ಯಂತ ಆಗಸ್ಟ್‌ 6 ರಿಂದ 12 ರ ವರೆಗೆ ತೆರೆಯಲ್ಪಟ್ಟಿದ್ದ 130 ಕಾಳಜಿ ಕೇಂದ್ರಗಳ ಸಂಖ್ಯೆ ಮಂಗಳವಾರ 91 ಕ್ಕೆ ಇಳಿಕೆಯಾಗಿದೆ. 15,249 ನೆರೆ ಸಂತ್ರಸ್ತರ ಸಂಖ್ಯೆ ಕಡಿಮೆಯಾಗುತ್ತಲೇ ಸುಮಾರು 4 ಸಾವಿರ ಹಂತಕ್ಕೆ ತಲುಪಿದೆ. ಸದ್ಯಕ್ಕೆ ಬ್ಯಾಡಗಿ ಮತ್ತು ಹಿರೇಕೇರೂರಲ್ಲಿ ತೆರೆಯಲಾಗಿದ್ದ ಕಾಳಜಿ ಕೇಂದ್ರಗಳಲ್ಲಿನ ಸಂತ್ರಸ್ತರು ಮನೆಗೆ ಹೋದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿವೆ. ಇನ್ನುಳಿದಂತೆ ಹಾವೇರಿ ತಾಲೂಕಿನಲ್ಲಿ (29), ರಾಣೇಬೆನ್ನೂರಲ್ಲಿ (5), ಸವಣೂರ ತಾಲೂಕಿನಲ್ಲಿ (15), ಶಿಗ್ಗಾವ (24) ಮತ್ತು ಹಾನಗಲ್ಲ ತಾಲೂಕಿನಲ್ಲಿ (18) ಕಾಳಜಿ ಕೇಂದ್ರಗಳು ನೆರೆ ಸಂತ್ರಸ್ತರಿಗೆ ಆಶ್ರಯ ನೀಡಿವೆ.

ಪುಡ್‌ ಕಿಟ್‌ ರೆಡಿ: ನೆರೆ ಸಂತ್ರಸ್ತರಿಗೆ ಫುಡ್‌ ಕಿಟ್‌ ಪೂರೈಸಲು ಸಿದ್ಧಪಡಿಸುವ ಕೆಲಸ ಸಮರೋಪಾದಿಯಲ್ಲಿ ನಡೆದಿದ್ದು ಬುಧವಾರ ಜಿಲ್ಲೆಯ ಹಾನಗಲ್ಲ, ಹಾವೇರಿ, ಶಿಗ್ಗಾವ ಮತ್ತು ಸವಣೂರ ತಾಲೂಕುಗಳ ಕಾಳಜಿ ಕೇಂದ್ರಕ್ಕೆ ತಲುಪಿಸಲು ಅಂತಿಮ ಹಂತದ ಸಿದ್ಧತೆ ನಡೆದಿದೆ.

ದಾನಿಗಳ ಮಹಾಪೂರ: ನೆರೆ ಇಳಿಮುಖಗೊಳ್ಳುತ್ತಿದ್ದಂತೆ ಸಂತ್ರಸ್ತರಿಗೆ ನೆರವಿನ ಮಹಾಪೂರವೇ ಜಿಲ್ಲೆ ಮತ್ತು ಹೊರ ಜಿಲ್ಲೆಯಿಂದ ಹರಿದು ಬರುತ್ತಿದೆ. ಅಕ್ಕಿ, ಬೇಳೆ, ಬೆಲ್ಲ, ಸಕ್ಕರೆ, ಸೀರೆ, ಪ್ಯಾಂಟ್‌, ಶರ್ಟ್‌, ಬಿಸ್ಕಿಟ್‌, ಪಾತ್ರೆ ಹಾಗೂ ತಗಡುಗಳನ್ನು ಸಹ ಕೊಡುಗೆ ನೀಡುವ ದಾನಿಗಳ ಸಂಖ್ಯೆ ಹೆಚ್ಚಳಗೊಳ್ಳುತ್ತಲೇ ಇದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ