ಆ್ಯಪ್ನಗರ

ಸಿದ್ಧರಾಮೇಶ್ವರ ಸಮುದಾಯ ಭವನ ಉದ್ಘಾಟನೆ 7ಕ್ಕೆ

ಹಾವೇರಿ: ಹಾವೇರಿ ಹೊರವಲಯದಲ್ಲಿನಿರ್ಮಿಸಲಾಗಿರುವ ಶ್ರೀ ಸಿದ್ಧರಾಮೇಶ್ವರ ಸಮುದಾಯ ಭವನದ ಸಭಾಂಗಣ ಹಾಗೂ ಹುತಾತ್ಮ ಮೆಣಸಿನಹಾಳ ತಿಮ್ಮೇಗೌಡ ವಿದ್ಯಾರ್ಥಿ ನಿಲಯದ ಮೊದಲ ಮಹಡಿ ಕಟ್ಟಡದ ಉದ್ಘಾಟನೆಯನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನ.7 ರಂದು ನೆರವೇರಿಸಲಿದ್ದಾರೆ ಎಂದು ನೊಳಂಬ ಲಿಂಗಾಯತ ಸಮಿತಿ ಉಪಾಧ್ಯಕ್ಷ ಎಸ್‌.ಆರ್‌.ಪಾಟೀಲ ಹೇಳಿದರು.

Vijaya Karnataka 4 Nov 2019, 5:00 am
ಹಾವೇರಿ: ಹಾವೇರಿ ಹೊರವಲಯದಲ್ಲಿನಿರ್ಮಿಸಲಾಗಿರುವ ಶ್ರೀ ಸಿದ್ಧರಾಮೇಶ್ವರ ಸಮುದಾಯ ಭವನದ ಸಭಾಂಗಣ ಹಾಗೂ ಹುತಾತ್ಮ ಮೆಣಸಿನಹಾಳ ತಿಮ್ಮೇಗೌಡ ವಿದ್ಯಾರ್ಥಿ ನಿಲಯದ ಮೊದಲ ಮಹಡಿ ಕಟ್ಟಡದ ಉದ್ಘಾಟನೆಯನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನ.7 ರಂದು ನೆರವೇರಿಸಲಿದ್ದಾರೆ ಎಂದು ನೊಳಂಬ ಲಿಂಗಾಯತ ಸಮಿತಿ ಉಪಾಧ್ಯಕ್ಷ ಎಸ್‌.ಆರ್‌.ಪಾಟೀಲ ಹೇಳಿದರು.
Vijaya Karnataka Web the inauguration of siddarameshwara community house at 7th
ಸಿದ್ಧರಾಮೇಶ್ವರ ಸಮುದಾಯ ಭವನ ಉದ್ಘಾಟನೆ 7ಕ್ಕೆ


ಭಾನುವಾರ ಹಾವೇರಿಯಲ್ಲಿನಡೆದ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು. ಪಟ್ಟಣದ ಆರ್‌ಟಿಓ ಖಚೇರಿಯ ಬಳಿ ನಿರ್ಮಿಸಲಾಗಿರುವ ಸಮುದಾಯ ಭವನದ ಸಭಾಂಗಣ ಹಾಗೂ ವಸತಿ ನಿಲಯ ನ.7 ರಂದು ಲೋಕಾರ್ಪಣೆಗೊಳ್ಳಲಿದೆ. ಕಾರ‍್ಯಕ್ರಮದ ಸಾನ್ನಿಧ್ಯವನ್ನು ಹರಿಹರದ ಬೃಹನ್ಮಠ ನಂದಿಗುಡಿ ವೃಷಭಪೂರಿ ಮಹಾ ಸಂಸ್ಥಾನದ ಸಿದ್ಧರಾಮೇಶ್ವರ ಶಿವಾಚಾರ‍್ಯರು ವಹಿಸಲಿದ್ದು, ಹುಕ್ಕೇರಿಮಠದ ಚೆನ್ನಮಲ್ಲಿಕಾರ್ಜುನ ಶ್ರೀ ಸಮ್ಮುಖ ವಹಿಸಿಕೊಳ್ಳಲಿದ್ದಾರೆ. ಪ್ರಸಾದಾಲಯ ಉದ್ಘಾಟನೆಯನ್ನು ಸಚಿವ ಜೆ.ಸಿ.ಮಾಧುಸ್ವಾಮಿ, ವಿದ್ಯಾರ್ಥಿ ನಿಲಯ ಹಾಗೂ ಪ್ರಸಾದಾಲಯವನ್ನು ಸಚಿವ ಬಸವರಾಜ ಬೊಮ್ಮಾಯಿ, ಸಂಸದ ಶಿವಕುಮಾರ ಉದಾಸಿ, ದಾನಿಗಳ ಭಾವಚಿತ್ರ ಹಾಗೂ ಶಿಲಾಫಲಕದ ಉದ್ಘಾಟನೆಯನ್ನು ತುಮಕೂರ ಸಂಸದ ಜಿ.ಎಸ್‌. ಬಸವರಾಜ, ಮಾಜಿ ಸಚಿವ ಬಸವರಾಜ ಶಿವಣ್ಣನವರ ನೆರವರೇರಿಸಲಿದ್ದು, ಮಾಜಿ ಸಚಿವ ಸಿ.ಎಂ.ಉದಾಸಿ ಸೇರಿದಂತೆ ಜಿಲ್ಲೆಯ ಎಲ್ಲಶಾಸಕರು ಭಾಗವಹಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿಎಸ್‌.ಕೆ.ಮೆಣಸಿನಕಾಯಿ, ಬಸವರಾಜ ಕುಲ್ಮಿ, ಶಂಭಣ್ಣ ಮತ್ತುಹಳ್ಳಿ, ಜಗದೀಶ ಕಣಗಲಬಾವಿ, ಚಂದ್ರ ಶೇಖರ ಹುರಳಿ, ಅಜ್ಜಪ್ಪ ಯಮನೂರ, ಬಿ.ಎಸ್‌.ಅಕ್ಕಿವಳ್ಳಿ, ಎನ್‌,ಎಚ್‌.ಸಣ್ಣಗೌಡ್ರ, ಶೇಖರಪ್ಪ ಹಂಚಿನಮನಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ