ಆ್ಯಪ್ನಗರ

ಸಿರಿಗೆರೆಗ ಸಾವಿರಾರು ಭಕ್ತರ ಪ್ರಯಾಣ

ರಟ್ಟೀಹಳ್ಳಿ: ಶ್ರೀ ಮದ್ದುಜ್ಜಯಿನಿ ಸದ್ದರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಲಿಂ.ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳ 27 ನೇ ವರ್ಷದ ಶ್ರದ್ಧಾಂಜಲಿ ಕಾರ್ಯಕ್ರಮ ಸೆ.24 ರಂದು ಸಿರಿಗೆರೆಯಲ್ಲಿನಡೆಯಲಿದ್ದು ಸಮಾರಂಭದ ನಿಮಿತ್ತ ನಡೆಯುವ ಅನ್ನ ದಾಸೋಹ ಮತ್ತಿತರ ಕಾರ‍್ಯಗಳಲ್ಲಿಭಾಗವಹಿಸಲು (ಸೇವೆ ಸಲ್ಲಿಸಲು) ರಟ್ಟೀಹಳ್ಳಿ ಮತ್ತು ಹಿರೇಕೆರೂರು ತಾಲೂಕಿನ ಒಟ್ಟು 26 ಗ್ರಾಮದ ಸಾವಿರಕ್ಕೂ ಹೆಚ್ಚು ಭಕ್ತರು 26 ವಾಹನಗಳಲ್ಲಿರಟ್ಟೀಹಳ್ಳಿಯಿಂದ ಸೋಮವಾರ ಬೆಳಗ್ಗೆ ಪ್ರಯಾಣ ಬೆಳೆಸಿದರು.

Vijaya Karnataka 24 Sep 2019, 5:00 am
ರಟ್ಟೀಹಳ್ಳಿ: ಶ್ರೀ ಮದ್ದುಜ್ಜಯಿನಿ ಸದ್ದರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಲಿಂ.ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳ 27 ನೇ ವರ್ಷದ ಶ್ರದ್ಧಾಂಜಲಿ ಕಾರ್ಯಕ್ರಮ ಸೆ.24 ರಂದು ಸಿರಿಗೆರೆಯಲ್ಲಿನಡೆಯಲಿದ್ದು ಸಮಾರಂಭದ ನಿಮಿತ್ತ ನಡೆಯುವ ಅನ್ನ ದಾಸೋಹ ಮತ್ತಿತರ ಕಾರ‍್ಯಗಳಲ್ಲಿಭಾಗವಹಿಸಲು (ಸೇವೆ ಸಲ್ಲಿಸಲು) ರಟ್ಟೀಹಳ್ಳಿ ಮತ್ತು ಹಿರೇಕೆರೂರು ತಾಲೂಕಿನ ಒಟ್ಟು 26 ಗ್ರಾಮದ ಸಾವಿರಕ್ಕೂ ಹೆಚ್ಚು ಭಕ್ತರು 26 ವಾಹನಗಳಲ್ಲಿರಟ್ಟೀಹಳ್ಳಿಯಿಂದ ಸೋಮವಾರ ಬೆಳಗ್ಗೆ ಪ್ರಯಾಣ ಬೆಳೆಸಿದರು.
Vijaya Karnataka Web 25 RATTIHALLI 1 A_23


ಇದಕ್ಕೂ ಮೊದಲು ರಟ್ಟೀಹಳ್ಳಿಯ ಶ್ರೀ ತರಳಬಾಳು ಶಾಲೆಯ ಆವರಣದಲ್ಲಿಶ್ರೀ ಮದ್ದುಜ್ಜಯಿನಿ ಸದ್ದರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳ 27 ನೇ ವರ್ಷದ ಶ್ರದ್ಧಾಂಜಲಿ ನಿಮಿತ್ತ ಲಿಂಗೈಕ್ಯ ಶ್ರೀಗಳ ಭಾವಚಿತ್ರಕ್ಕೆ ವಿಶೇಷ ಪೂಜೆ ನೆರವೇರಿಸಲಾಯಿತು.

ಬಳಿಕ ನಡೆದ ಕಾರ್ಯಕ್ರಮದಲ್ಲಿಕೇಂದ್ರ ಸಲಹಾ ಸಮಿತಿ ಸದಸ್ಯ, ಸಮಾಜದ ಮುಖಂಡ ಎಸ್‌.ಎಸ್‌.ಪಾಟೀಲ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳ 27 ನೇ ವರ್ಷದ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಹಿರೇಕೆರೂರು, ರಟ್ಟೀಹಳ್ಳಿ ತಾಲೂಕಿನಿಂದ ಸಾವಿರಾರು ಭಕ್ತರು ಸೇವೆ ಸಲ್ಲಿಸಲು ತೆರಳುತ್ತಿದ್ದಾರೆ. ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿಭಕ್ತರು ತಮ್ಮಗೆ ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಪ್ರತಿಯೊಬ್ಬರು ತಮ್ಮ ಕರ್ತವ್ಯ ಅರಿತು ಕೆಲಸ ನಿರ್ವಹಿಸಬೇಕೆಂದರು.

ಸಮಾಜದ ಅಧ್ಯಕ್ಷ ಚಂದ್ರಶೇಖರಪ್ಪ ತುಮ್ಮಿನಕಟ್ಟಿ ಸೇವೆ ಸಲ್ಲಿಸಲು ನಮ್ಮ ತಾಲೂಕಿನಿಂದ ಹೋಗುತ್ತಿರುವ ಭಕ್ತರು ಒಳ್ಳೆಯ ಸೇವೆ ನೀಡಬೇಕು. ಉತ್ತಮವಾದ ಸೇವೆ ಸಲ್ಲಿಸುವ ಮೂಲಕ ಶ್ರೀಗಳ ಆಶೀರ್ವಾದಕ್ಕೆ ಪಾತ್ರರಾಗೋಣ ಎಂದರು.

ಮುಖಂಡರಾದ ಎಸ್‌.ಎಸ್‌.ಪಾಟೀಲ,ಚಂದ್ರಶೇಖರಪ್ಪ ತುಮ್ಮಿನಕಟ್ಟಿ, ಯು.ಯು.ಬಣಕಾರ, ರೇವಣಪ್ಪ ಬಳ್ಳೇರ, ಜಯದೇವ ಹೊಳೆಆನ್ವೇರಿ, ಮಹೇಶ ಗುಬ್ಬಿ, ರವೀಂದ್ರ ಮುದಿಯಪ್ಪನವರ, ಮಾಲತೇಶಗೌಡ ಗಂಗೋಳ, ಜಟ್ಟಪ್ಪ ಮಳಗೊಂಡರ, ಮಂಜಣ್ಣ ಎಲಿವಾಳ, ನಾಗನಗೌಡ ಮರಿಗೌಡ್ರ, ಎಸ್‌.ಬಿ.ತಿಪ್ಪಣ್ಣನವರ, ಏಕೇಶಪ್ಪ ಬಣಕಾರ, ಶಂಕರಗೌಡ ಚನ್ನಗೌಡ್ರ,ವೀರನಗೌಡ ಮಕರಿ, ಮಲ್ಲನಗೌಡ ಸೋರಟೂರು,ವೀರನಗೌಡ ಬಿದರಿ,ಎಸ್‌.ಬಿ.ಚನ್ನಗೌಡ್ರ ಹಲವು ಮುಖಂಡರು ಇದ್ದರು. ಪ್ರಾಚಾರ್ಯ ಎಸ್‌.ಬಿ.ಚನ್ನಗೌಡ್ರ ಸ್ವಾಗತಿಸಿದರು, ದೈಹಿಕ ಶಿಕ್ಷಕ ಕರೇಗೌಡ್ರ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ