ಆ್ಯಪ್ನಗರ

ಕನ್ನಡಿಗರೆಂದರೆ ಜಗತ್ತಿಗೆ ಮೆಚ್ಚುಗೆ: ಉದಾಸಿ

ಹಾನಗಲ್ಲ: ಕನ್ನಡದ ಶಕ್ತಿ ಕುಂದಲು ಸಾಧ್ಯವಿಲ್ಲ, ಕನ್ನಡಿಗರ ಜೀವನ ಶೈಲಿ ಇಡೀ ಜಗತ್ತಿಗೆ ಮೆಚ್ಚಿಗೆಯಾಗಿದೆ, ಬೆಂಗಳೂರು ಪರಭಾಷಿಕರನ್ನು ಆಕರ್ಷಿಸುತ್ತಿದೆ ಎಂದು ಶಾಸಕ ಸಿ.ಎಂ.ಉದಾಸಿ ನುಡಿದರು.

Vijaya Karnataka 2 Nov 2019, 5:00 am
ಹಾನಗಲ್ಲ: ಕನ್ನಡದ ಶಕ್ತಿ ಕುಂದಲು ಸಾಧ್ಯವಿಲ್ಲ, ಕನ್ನಡಿಗರ ಜೀವನ ಶೈಲಿ ಇಡೀ ಜಗತ್ತಿಗೆ ಮೆಚ್ಚಿಗೆಯಾಗಿದೆ, ಬೆಂಗಳೂರು ಪರಭಾಷಿಕರನ್ನು ಆಕರ್ಷಿಸುತ್ತಿದೆ ಎಂದು ಶಾಸಕ ಸಿ.ಎಂ.ಉದಾಸಿ ನುಡಿದರು.
Vijaya Karnataka Web 01HGL1_23
ಹಾನಗಲ್ಲತಾಲೂಕು ಕ್ರೀಡಾಂಗಣದಲ್ಲಿನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿಶಾಸಕ ಸಿ.ಎಂ.ಉದಾಸಿ, ವಿ.ಪ ಸದಸ್ಯ ಶ್ರೀನಿವಾಸ ಮಾನೆ ಮತ್ತು ಗಣ್ಯರು ಭಾಗಹಿಸಿದ್ದರು.


ಶುಕ್ರವಾರ ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿತಾಲೂಕು ಆಡಳಿತ ಆಯೋಜಿಸಿದ ಕನ್ನಡ ರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಾನಗಲ್ಲತಾಲೂಕಿನ ರೈತ ಸಮುದಾಯದ ಬಹು ದಿನಗಳ ಬೇಡಿಕೆಯನ್ನು ಬಾಳಂಬೀಡ ಹಾಗೂ ಹಿರೇಕಾಂಸಿ ಏತ ನೀರಾವರಿ ಯೋಜನೆಗಳ ಮೂಲಕ ಸಾಕಾರಗೊಳಿಸಲು ಸಾಧ್ಯವಾಗಿದೆ. ಜಿಟಿಟಿಸಿ ತಾಂತ್ರಿಕ ಶಿಕ್ಷಣ ಆರಂಭಿಸುವ ಮೂಲಕ ಹಾನಗಲ್ಲತಾಲೂಕಿನ ಪ್ರತಿಭಾವಂತರಿಗೆ ಕೌಶಲ್ಯ ಶಿಕ್ಷಣಕ್ಕೆ ಶೀಘ್ರ ಚಾಲನೆ ನೀಡಲಾಗುತ್ತಿದೆ. ಕನ್ನಡಿಗರಿಗಾಗಿ ಶಕ್ತಿ ಮೀರಿ ಸೇವೆ ಸಲ್ಲಿಸುವ ಮೂಲಕ ಕನ್ನಡದ ಸೇವೆ ಸಲ್ಲಿಸುವುದು ನಮ್ಮ ಆಧ್ಯತೆ ಎಂದರು.

ತಹಶೀಲ್ದಾರ್‌ ಗಂಗಪ್ಪ ಎಂ. ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕನ್ನಡ ರಾಜ್ಯೋತ್ಸವ ನಮ್ಮ ಸಂಭ್ರಮದ ದಿನ. ಕನ್ನಡ ಪರ ಚಿಂತಕರು ಹೋರಾಟಗಾರರ ಅವಿರತ ಶ್ರಮದಿಂದ ಕನ್ನಡ ನಾಡು ನಿರ್ಮಾಣವಾಗಿದೆ ಎಂದರು.

ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ ಮುಖ್ಯ ಅತಿಥಿಯಾಗಿ ಮಾತನಾಡಿ, ಅಖಂಡ ಕರ್ನಾಟಕದ ಕನಸು ಇನ್ನೂ ನನಸಾಗಬೇಕಾಗಿದೆ. ಕನ್ನಡಕ್ಕಾಗಿ ತ್ಯಾಗ ಮಾಡಿದ ಮಹನಿಯರನ್ನು ನೆನೆಯಬೇಕು ಎಂದರು.

ಸಾಹಿತಿ ಮಾರುತಿ ಶಿಡ್ಲಾಪುರ ರಾಜ್ಯೋತ್ಸವ ಸಂದರ್ಭದ ಉಪನ್ಯಾಸ ನೀಡಿದರು. ಎಪಿಎಂಸಿ ಅಧ್ಯಕ್ಷ ಶೇಕಪ್ಪ ಮಹಾರಾಜಪೇಟ, ತಾಪಂ ಇಒ ಚನ್ನಪ್ಪ ರಾಯಣ್ಣನವರ, ಪೊಲೀಸ್‌ ವೃತ್ತ ನಿರೀಕ್ಷಕ ಪ್ರವೀಣ ನೀಲಮ್ಮನವರ, ಬಿಇಒ ಎಚ್‌.ಶ್ರೀನಿವಾಸ, ಗುರುರಾಜ ನಿಂಗೋಜಿ, ರಾಜು ಗುಡಿ, ಎನ್‌.ಐ.ಸವಣೂರ, ರಾಜು ಗೌಳಿ, ದಾನಪ್ಪ ಗಂಟೇರ, ಬಸವರಾಜ ಬೂದಿಹಾಳ, ಮಹಾಲಿಂಗಪ್ಪ ಬಿದರಮಳಿ, ತಮ್ಮಣ್ಣ ಆರೆಗೊಪ್ಪ, ರವಿ ದೇಶಪಾಂಡೆ, ಬಿ.ಎಂ.ಬೇವಿನಮರದ ಪಾಲ್ಗೊಂಡಿದ್ದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿಶೇಕಡಾ ನೂರರಷ್ಟು ಅಂಕ ಪಡೆದ ವಿದ್ಯಾರ್ಥಿಗಳು, ಪಿಯುಸಿ ಪರೀಕ್ಷೆಯಲ್ಲಿಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ