ಆ್ಯಪ್ನಗರ

ಕಾರ್ಗಿಲ್‌ ವಿಜಯ ನಮ್ಮ ಹೆಮ್ಮೆ

ಹಿರೇಕೆರೂರ : ಕಾರ್ಗಿಲ್‌ ಕದನ ಭಾರತೀಯ ಇತಿಹಾಸದಲ್ಲಿ ಒಂದು ಮರೆಯಲಾಗದ ಕದನ. ಯುದ್ಧದಲ್ಲಿ ಹುತಾತ್ಮರಾದ ಸೈನಿಕರನ್ನು ಸ್ಮರಿಸುವ ದಿನ ಎಂದು ಸಿಇಎಸ್‌ ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್‌.ಎಸ್‌.ಪಾಟೀಲ ಹೇಳಿದರು.

Vijaya Karnataka 27 Jul 2019, 5:00 am
ಹಿರೇಕೆರೂರ : ಕಾರ್ಗಿಲ್‌ ಕದನ ಭಾರತೀಯ ಇತಿಹಾಸದಲ್ಲಿ ಒಂದು ಮರೆಯಲಾಗದ ಕದನ. ಯುದ್ಧದಲ್ಲಿ ಹುತಾತ್ಮರಾದ ಸೈನಿಕರನ್ನು ಸ್ಮರಿಸುವ ದಿನ ಎಂದು ಸಿಇಎಸ್‌ ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್‌.ಎಸ್‌.ಪಾಟೀಲ ಹೇಳಿದರು.
Vijaya Karnataka Web HVR-26HKR 1
ಹಿರೇಕೆರೂರ ಸಿಇಎಸ್‌ ವಿದ್ಯಾ ಸಂಸ್ಥೆಯ ಆವರಣದಲ್ಲಿ ಕಾರ್ಗಿಲ್‌ ವಿಜಯೋತ್ಸವ ಆಚರಿಸಲಾಯಿತು.


ಅವರು ಪಟ್ಟಣದ ಸಿಇಎಸ್‌ ವಿದ್ಯಾ ಸಂಸ್ಥೆ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ತಾಲೂಕ ಘಟಕ ಹಿರೇಕೆರೂರು ವತಿಯಿಂದ ಸಂಸ್ಥೆಯ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಗಿಲ್‌ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಶತ್ರುಗಳ ಗುಂಡಿಗೆ ನಮ್ಮ ಸೈನಿಕರು ಎದೆವಡ್ಡಿ ತಮ್ಮ ಪ್ರಾಣವನ್ನು ಮುಡಿಪಿಟ್ಟು ಭಾತಕ್ಕೆ ವಿಜಯವನ್ನು ತಂದು ಕೊಟ್ಟ ದಿನ. ಅಂತಹ ಸೈನಿಕರಿಗೆ ಗೌರವ ಸಲ್ಲಿಸುವ ಒಂದು ಸುಸಂದರ್ಭ. ಸರಕಾರಗಳು ಸೈನಿಕರಿಗೆ ಸಲ್ಲುವ ಗೌರವಗಳನ್ನು ಸರಿಯಾದ ರೀತಿಯಲ್ಲಿ ಸಲ್ಲಿಸಬೇಕಾಗಿದೆ. ನಾವು ಸಹ ಹೆಚ್ಚಿನ ಸಂಖ್ಯೆಯಲ್ಲಿ ಸೇನೆಯನ್ನು ಸೇರುವ ಮೂಲಕ ಭಾರತೀಯ ಸೈನ್ಯವನ್ನು ಬಲ ಪಡಿಸಬೇಕಾಗಿದೆ. ನಾವೆಲ್ಲ ಒಂದೇ ನಾವೆಲ್ಲ ಭಾರತೀಯರು ಎಂದು ತಿಳಿದು ಬಾಳಬೇಕು ಎಂದರು.

ಕಾರ್ಗಿಲ್‌ ಯುದ್ಧದಲ್ಲಿ ಭಾಗವಹಿದ್ದ ಮಾಜಿ ಸೈನಿಕ ವೀರನಗೌಡ ಮರಕಳ್ಳಿ ಮಾತನಾಡಿ, ಕಾರ್ಗಿಲ್‌ ಯುದ್ಧದಲ್ಲಿ ಭಾಗವಹಿಸುವ ಅವಕಾಶ ದೊರೆತಿದ್ದು ನಮ್ಮ ಆ ಜನ್ಮ ಪುಣ್ಯ ಅದೊಂದು ರೋಚಕ ಸಂಗತಿ. ಇಂದಿನ ಯುವಕರಿಗೆ ಯುದ್ಧದ ಯಾವುದೇ ಮಾಹಿತಿ ಇಲ್ಲ ಪ್ರತಿಯೊಬ್ಬರೂ ದೇಶಾಭಿಮಾನ ಹೊಂದಿರಬೇಕು. ಯುದ್ದಕ್ಕೆ ಕರೆ ನೀಡಿದಾಗ ಪ್ರತಿಯೊಬ್ಬರೂ ಯೋಧರಾಗಬೇಕು. ದೇಶ, ಸೈನಿಕರ ಬಗ್ಗೆ ಗೌರವ ಬರಬೇಕು. ನಮ್ಮದು ಪವಿತ್ರ ಭೂಮಿ. ಯಾರೊಂದಿಗೂ ನಾವೇ ಜಗಳವಾಡಿದ ಇತಿಹಾಸವಿಲ್ಲ ಆದರೆ ನಮ್ಮ ತಂಟೆಗೆ ಬಂದವರನ್ನು ಬಿಟ್ಟ ಇತಿಹಾಸವೇ ಇಲ್ಲ ಎಂದರು.

ಸಂಸ್ಥೆಯ ಅಧ್ಯಕ್ಷ ಎಸ್‌.ಬಿ.ತಿಪ್ಪಣ್ಣನವರ, ಪ್ರಾಚಾರ್ಯ ಡಾ.ಎಸ್‌.ಬಿ.ಚನ್ನಗೌಡರ, ಬಿ.ಪಿ.ಹಳ್ಳೇರ, ಎಸ್‌.ವೀರಭದ್ರಯ್ಯ, ಮಾಜಿ ಸೈನಿಕರಾದ ಸುರೇಂದ್ರ ಹಲಗೇರಿ, ಸುರೇಶ ಪ್ಯಾಟಿ, ಎಂ.ಎಸ್‌.ನಾಗರಾಜಪ್ಪ, ಎಬಿವಿಪಿ ನಗರ ಕಾರ್ಯದರ್ಶಿ ಹಾಲೇಶರಾವ್‌ ಹಲಗೇರಿ, ಉಪನ್ಯಾಸಕರಾದ ಕೆ.ಎಂ.ಮರಡಿಬಣಕಾರ, ನಾಗರಾಜ ಹೆಚ್‌.ಪಿ, ರೂಪಾ ಮುದಿಗೌಡ್ರ, ಪ್ರದೀಪ್‌ ಕುರ್ಡೇಕರ, ಶಿವನಗೌಡ ಪಾಟೀಲ, ಮೋಹನಕುಮಾರ,ಶಶಾಂಕ ಹಳ್ಳೂರ, ಚಂದ್ರು ಎಮ್‌.ಡಿ, ಸಂತೋಷ ಲಮಾಣಿ, ಚಂದ್ರು ಲಮಾಣಿ, ಸತೀಶ ಗಿರಿಮಲ್ಲಪ್ಪನವರ, ಉದಯ್‌ ಕರಿಯಣ್ಣನವರ, ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪ ಸಮರ್ಪಣೆ ಮಾಡಿ, ದೇಶ, ಸೈನಿಕರ ಪರ ಘೋಷಣೆಗಳನ್ನು ಕೂಗುವ ಮೂಲಕ ವಿಜಯೋತ್ಸವ ಆಚರಿಸಲಾಯಿತು. ನಿವೃತ್ತ ಸೈನಿಕರಿಗೆ ಸನ್ಮಾನಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ