ಹಿರೇಕೆರೂರ: ಸಮಾಜದಲ್ಲಿ ಆಗಿ ಹೋಗಿರುವ ಶಿವಶರಣ ಮಹಾವ್ಯಕ್ತಿಗಳ ಜನ್ಮ ದಿನವನ್ನು ಪ್ರೀತಿ, ಭಕ್ತಿ, ಗೌರವಗಳಿಂದ ಆಚರಿಸುವ ಮೂಲಕ ಶಿವಶರಣರ ವಚನಗಳನ್ನು ಪಾಲಿಸುವುದರಿಂದ ಸಮಾಜದಲ್ಲಿ ನಮ್ಮ ನೈತಿಕ ಮೌಲ್ಯ ಹೆಚ್ಚಿಸಿಕೊಳ್ಳಲು ಸಾಧ್ಯ ಎಂದು ತಹಸೀಲ್ದಾರ್ ಆರ್.ಎಚ್.ಭಾಗವಾನ್ ಹೇಳಿದರು.
ಬುಧವಾರ ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಸಭಾ ಭವನದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಸಮಿತಿ ಆಶ್ರಯದಲ್ಲಿ ಏರ್ಪಡಿಸಿದ್ದ ದೇವರ ದಾಸಿಮಯ್ಯ ಜಯಂತ್ಯುತ್ಸವ ಸಮಾರಂಭದ ಅಧ್ಯಕ್ಷ ತೆ ವಹಿಸಿ ಮಾತನಾಡಿ, ಮಹಾಗುರಿ ಸಾಧನೆ, ಮಾನವತೆಗಾಗಿ ದುಡಿದು, ಈ ನಾಡಿಗೆ ದಿವ್ಯ ಸಂದೇಶ ನೀಡಿದ ಮಹಾವ್ಯಕ್ತಿಗಳ ಸ್ಮರಣೆ ಮಾಡಿಕೊಳ್ಳುವುದು ಜಯಂತ್ಯುತ್ಸವಗಳ ಉದ್ದೇಶವಾಗಿದೆ. ಜಯಂತಿಗಳು ಕೇವಲ ರೂಡಿಯ ಆಚರಣೆಗಳಾದರೆ ಸಾಲದು. ದೇವರ ದಾಸೀಮಯ್ಯ ಸೇರಿದಂತೆ ಶಿವಶರಣರ ಜೀವನಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಬದುಕು ಸುಂದರವಾಗಿರುತ್ತದೆ ಎಂದು ಹೇಳಿದರು.
ದೇವರ ದಾಸಿಮಯ್ಯನವರು ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಮೌಢ್ಯ, ಮೂಡನಂಬಿಕೆಗಳನ್ನು ದೂರ ಮಾಡಿ ಬದುಕಲು ತಿಳಿಸಿದ್ದಾರೆ. ಇಂತಹ ಮಹನೀಯರ ಜಯಂತ್ಯುತ್ಸವಗಳು ಹಾಗೂ ಆಚರಣೆಗಳು ಯಾವುದೇ ಒಂದು ಜಾತಿಗೆ ಸೀಮಿತವಾಗದೇ ಎಲ್ಲ ಸಮುದಾಯದವರು ಪಾಲ್ಗೊಂಡು ಆಚರಿಸಿದರೆ ಜಯಂತಿಗಳ ಉದ್ದೇಶ ಸಾರ್ಥಕವಾಗುತ್ತದೆ ಎಂದರು.
ಶಿರೆಸ್ತೆದಾರ ವಿ.ಕೆ.ಬೆಂಡಲಗಟ್ಟಿ, ಶಕುಂತಲಾ ಪಾಟೀಲ್, ಶೋಭಾ ಚೌವ್ಹಾಣ, ಶಶಿಕಲಾ ಬಲಮುರಿ, ಸಾಕಮ್ಮ ವಾಲ್ಮೀಕಿ, ಮಂಜುನಾಥ ಸವಣೂರ, ಜೆ.ಯತೀಶಬಾಬು, ನಾಗರಾಜ ಕಟ್ಟೀಮನಿ, ಸ್ಟಿವನ ಅಂಗಡಿ, ರವಿ ಪೂಜಾರ, ಮಲ್ಲೇಶ ಗುತ್ತಲ, ರಾಮಚಂದ್ರ ಬಿಜಾಪುರ, ಅನೀಲ ಬಾಗಲಕೋಟ, ಕಲ್ಲಪ್ಪ ಲಮಾಣಿ ಉಪಸ್ಥಿತರಿದ್ದರು.
ಬುಧವಾರ ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಸಭಾ ಭವನದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಸಮಿತಿ ಆಶ್ರಯದಲ್ಲಿ ಏರ್ಪಡಿಸಿದ್ದ ದೇವರ ದಾಸಿಮಯ್ಯ ಜಯಂತ್ಯುತ್ಸವ ಸಮಾರಂಭದ ಅಧ್ಯಕ್ಷ ತೆ ವಹಿಸಿ ಮಾತನಾಡಿ, ಮಹಾಗುರಿ ಸಾಧನೆ, ಮಾನವತೆಗಾಗಿ ದುಡಿದು, ಈ ನಾಡಿಗೆ ದಿವ್ಯ ಸಂದೇಶ ನೀಡಿದ ಮಹಾವ್ಯಕ್ತಿಗಳ ಸ್ಮರಣೆ ಮಾಡಿಕೊಳ್ಳುವುದು ಜಯಂತ್ಯುತ್ಸವಗಳ ಉದ್ದೇಶವಾಗಿದೆ. ಜಯಂತಿಗಳು ಕೇವಲ ರೂಡಿಯ ಆಚರಣೆಗಳಾದರೆ ಸಾಲದು. ದೇವರ ದಾಸೀಮಯ್ಯ ಸೇರಿದಂತೆ ಶಿವಶರಣರ ಜೀವನಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಬದುಕು ಸುಂದರವಾಗಿರುತ್ತದೆ ಎಂದು ಹೇಳಿದರು.
ದೇವರ ದಾಸಿಮಯ್ಯನವರು ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಮೌಢ್ಯ, ಮೂಡನಂಬಿಕೆಗಳನ್ನು ದೂರ ಮಾಡಿ ಬದುಕಲು ತಿಳಿಸಿದ್ದಾರೆ. ಇಂತಹ ಮಹನೀಯರ ಜಯಂತ್ಯುತ್ಸವಗಳು ಹಾಗೂ ಆಚರಣೆಗಳು ಯಾವುದೇ ಒಂದು ಜಾತಿಗೆ ಸೀಮಿತವಾಗದೇ ಎಲ್ಲ ಸಮುದಾಯದವರು ಪಾಲ್ಗೊಂಡು ಆಚರಿಸಿದರೆ ಜಯಂತಿಗಳ ಉದ್ದೇಶ ಸಾರ್ಥಕವಾಗುತ್ತದೆ ಎಂದರು.
ಶಿರೆಸ್ತೆದಾರ ವಿ.ಕೆ.ಬೆಂಡಲಗಟ್ಟಿ, ಶಕುಂತಲಾ ಪಾಟೀಲ್, ಶೋಭಾ ಚೌವ್ಹಾಣ, ಶಶಿಕಲಾ ಬಲಮುರಿ, ಸಾಕಮ್ಮ ವಾಲ್ಮೀಕಿ, ಮಂಜುನಾಥ ಸವಣೂರ, ಜೆ.ಯತೀಶಬಾಬು, ನಾಗರಾಜ ಕಟ್ಟೀಮನಿ, ಸ್ಟಿವನ ಅಂಗಡಿ, ರವಿ ಪೂಜಾರ, ಮಲ್ಲೇಶ ಗುತ್ತಲ, ರಾಮಚಂದ್ರ ಬಿಜಾಪುರ, ಅನೀಲ ಬಾಗಲಕೋಟ, ಕಲ್ಲಪ್ಪ ಲಮಾಣಿ ಉಪಸ್ಥಿತರಿದ್ದರು.