ಆ್ಯಪ್ನಗರ

ಲಾರಿ ಹಾಯ್ದು 12 ಕುರಿ ಸಾವು

ಕಾಕೋಳ : ರಾಣೇಬೆನ್ನೂರ ತಾಲೂಕಿನ ಹುಲಿಹಳ್ಳಿ ಸಮೀಪ ವೇಗವಾಗಿ ಬರುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ರಸ್ತೆ ದಾಟುತ್ತಿದ್ದ ಕುರಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ12ಕ್ಕೂ ಹೆಚ್ಚೂ ಕುರಿಗಳು ಸಾವನ್ನಪ್ಪಿದ್ದು, ಐದಾರು ಕುರಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದ ಘಟನೆ ಶನಿವಾರ ನಡೆದಿದೆ.

Vijaya Karnataka 27 Jan 2019, 5:00 am
ಕಾಕೋಳ : ರಾಣೇಬೆನ್ನೂರ ತಾಲೂಕಿನ ಹುಲಿಹಳ್ಳಿ ಸಮೀಪ ವೇಗವಾಗಿ ಬರುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ರಸ್ತೆ ದಾಟುತ್ತಿದ್ದ ಕುರಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ12ಕ್ಕೂ ಹೆಚ್ಚೂ ಕುರಿಗಳು ಸಾವನ್ನಪ್ಪಿದ್ದು, ಐದಾರು ಕುರಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದ ಘಟನೆ ಶನಿವಾರ ನಡೆದಿದೆ.
Vijaya Karnataka Web the lorry passes 12 sheep dead
ಲಾರಿ ಹಾಯ್ದು 12 ಕುರಿ ಸಾವು


ಬೆಳಗಾವಿ ಜಿಲ್ಲೆಯ ಕಡಕಲಾಟ ಗ್ರಾಮದ ವಾಸು ಮಲ್ಲಪ್ಪ ಅವಡಕಾನ ಎಂಬುವರಿಗೆ ಸೇರಿದ ಕುರಿಗಳಾಗಿವೆ. ಹನುಮನಮಟ್ಟಿಯ ಹತ್ತಿರ ಹೊಲವೊಂದರಲ್ಲಿ ಕುರಿಗಳು ತರಬಿದ್ದು ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಜೆಸಿಬಿ ಹೇರಿಕೊಂಡು ರಾಣೆಬೆನ್ನೂರ ಕಡೆ ಹೋಗುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಕುರಿಗಳ ಮೇಲೆ ಹೊಡೆದುಕೊಂಡು ಹೋಗಿದೆ. ಅಪಘಾತವಾದ ಸ್ಥಳಕ್ಕೆ ಗ್ರಾಮೀಣ ಪೊಲೀಸ್‌ ಠಾಣೆ ಪಿಎಸ್‌ಐ ಸುನಿಲಕುಮಾರ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ, ಕುರಿಗಾಹಿಗೆ ಸಾಂತ್ವನ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ