ಆ್ಯಪ್ನಗರ

ಪಕ್ಷ ಗೆಲ್ಲಿಸುವುದೇ ಮುಖ್ಯ ಉದ್ದೇಶ

ಹಾವೇರಿ: ತಂದೆ ಸ್ಥಾನದಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪ, ತಾಯಿ ಸ್ಥಾನದಲ್ಲಿರುವ ಕಾರ್ಯಕರ್ತರು ಇಬ್ಬರೂ ನನಗೆ ಮುಖ್ಯ ಅವರನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ. ಹಿರೇಕೆರೂರು ತಾಲೂಕಿನಲ್ಲಿಬಿಜೆಪಿಯನ್ನು ಗೆಲ್ಲಿಸುವುದೇ ನಮ್ಮ ಮುಖ್ಯ ಉದ್ದೇಶ ಎಂದು ಮಾಜಿ ಶಾಸಕ ಯು.ಬಿ. ಬಣಕಾರ ಹೇಳಿದರು.

Vijaya Karnataka 16 Oct 2019, 5:00 am
ಹಾವೇರಿ: ತಂದೆ ಸ್ಥಾನದಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪ, ತಾಯಿ ಸ್ಥಾನದಲ್ಲಿರುವ ಕಾರ್ಯಕರ್ತರು ಇಬ್ಬರೂ ನನಗೆ ಮುಖ್ಯ ಅವರನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ. ಹಿರೇಕೆರೂರು ತಾಲೂಕಿನಲ್ಲಿಬಿಜೆಪಿಯನ್ನು ಗೆಲ್ಲಿಸುವುದೇ ನಮ್ಮ ಮುಖ್ಯ ಉದ್ದೇಶ ಎಂದು ಮಾಜಿ ಶಾಸಕ ಯು.ಬಿ. ಬಣಕಾರ ಹೇಳಿದರು.
Vijaya Karnataka Web the main objective is to win the party
ಪಕ್ಷ ಗೆಲ್ಲಿಸುವುದೇ ಮುಖ್ಯ ಉದ್ದೇಶ


ಹಾವೇರಿಯಲ್ಲಿಮಾಧ್ಯಮದವರೊಂದಿಗೆ ಮಾತನಾಡಿ, ನಾನೂ ಚುನಾವಣೆಯಲ್ಲಿಸ್ಪರ್ಧೆ ಮಾಡುತ್ತೇನೆ ಎಂದು ಹೇಳಿಲ್ಲ. ನಾನು ಎಲ್ಲಿಯೂ ಪ್ರಚಾರಕ್ಕೆ ಹೋಗಿಲ್ಲ. ಕಾರ್ಯಕರ್ತರು ಮತ್ತು ಅಭಿಮಾನಿಗಳು ಮನೆಗೆ ಬಂದು ಚರ್ಚಿಸುತ್ತಿದ್ದಾರೆ ಎಂದ ಅವರು, ನಿಗಮ ಮಂಡಳಿ ಅಧ್ಯಕ್ಷರಾಗಿ ಮಾಡಿರುವುದರ ಉದ್ದೇಶ ಅನರ್ಹರ ಸ್ಪರ್ಧೆಗೆ ಅವಕಾಶ ಕಲ್ಪಿಸಿಕೊಡುವುದಾಗಿದೆ. ತಂದೆಗೆ ಗೌರವ ಕೊಡುವ ಜತೆಗೆ ತಾಯಿಗೆ ಅಂದರೆ ಕಾರ್ಯಕರ್ತರನ್ನು ಅಭಿಮಾನಿಗಳನ್ನು ಮನವೊಲಿಸುವ ಕೆಲಸ ಮಾಡುತ್ತೇನೆ ಎಂದರು.

ಬಿಜೆಪಿ ಮುಖಂಡ ಮಾ.ನಾಗರಾಜ ಮಾತನಾಡಿ, ರಾಣೆಬೆನ್ನೂರು ಮಾಜಿ ಶಾಸಕ ಆರ್‌. ಶಂಕರ್‌ ಅವರ ಪಕ್ಷವನ್ನು ಕಾಂಗ್ರೆಸ್‌ ಪಕ್ಷದಲ್ಲಿವಿಲೀನ ಮಾಡುವುದಕ್ಕೆ, ರಾಷ್ಟ್ರೀಯ ನಾಯಕರಿಂದ ಪತ್ರ ತರುವಂತೆ ಸ್ಪೀಕರ್‌ ಅವರು ಸೂಚಿಸಿದ್ದರು. ಅವರು ಪತ್ರ ಕೊಡದಿರುವುದರಿಂದ ಅವರ ಅನರ್ಹತೆ ಮಾಡುವ ಪ್ರಶ್ನೆ ಬರುವುದಿಲ್ಲ. ತೀರ್ಪು ಆರ್‌.ಶಂಕರ್‌ ಪರವಾಗಿ ಬರುತ್ತದೆ ಎಂಬ ನಂಬಿಕೆ ಇದೆ. ಅಲ್ಲಿಚುನಾವಣೆ ನಡೆಯುವುದು ಅನುಮಾನವಾಗಿದೆ ಎಂದು ಪ್ರಶ್ನೆಗೆ ಉತ್ತರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ