ಆ್ಯಪ್ನಗರ

ಸರ್ವಜ್ಞನ ವಚನ ಇಂದಿಗೂ ಅಜರಾಮರ

ಹಿರೇಕೆರೂರ : ಸಮಾಜದ ಅಂಕು ಡೊಂಕುಗಳನ್ನು ತ್ರಿಪದಿ ವಚನಗಳ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡಿದ ವರಕವಿ ಸರ್ವಜ್ಞ ಇಂದಿಗೂ ನಮ್ಮ ಜತೆಗಿದ್ದಾರೆ ಎಂದು ಮಾಜಿ ಶಾಸಕ ಯು.ಬಿ.ಬಣಕಾರ ಹೇಳಿದರು.

Vijaya Karnataka 23 Feb 2019, 5:00 am
ಹಿರೇಕೆರೂರ : ಸಮಾಜದ ಅಂಕು ಡೊಂಕುಗಳನ್ನು ತ್ರಿಪದಿ ವಚನಗಳ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡಿದ ವರಕವಿ ಸರ್ವಜ್ಞ ಇಂದಿಗೂ ನಮ್ಮ ಜತೆಗಿದ್ದಾರೆ ಎಂದು ಮಾಜಿ ಶಾಸಕ ಯು.ಬಿ.ಬಣಕಾರ ಹೇಳಿದರು.
Vijaya Karnataka Web HVR-22HKR 8
ಹಿರೇಕೆರೂರು ತಾಲೂಕಿನ ಅಬಲೂರು ಗ್ರಾಮದಲ್ಲಿ ಸರ್ವಜ್ಞ ಜಯಂತ್ಯುತ್ಸವವನ್ನು ಮಾಜಿ ಶಾಸಕ ಯು.ಬಿ.ಬಣಕಾರ ಉದ್ಘಾಟಿಸಿದರು.


ಅವರು ಶುಕ್ರವಾರ ತಾಲೂಕಿನ ಅಬಲೂರು ಗ್ರಾಮದಲ್ಲಿ ವರಕವಿ ಸರ್ವಜ್ಞ ಯುವಕ ಸಂಘ ಮತ್ತು ಗ್ರಾಮಸ್ಥರ ಆಶ್ರಯದಲ್ಲಿ ಏರ್ಪಡಿಸಿದ್ದ ವರಕವಿ ಸರ್ವಜ್ಞ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿ, ಸರ್ವಜ್ಞ ಒಂದು ಕಡೆ ನಿಲ್ಲದೆ ಎಲ್ಲಾ ಕಡೆ ಸಂಚಾರ ಮಾಡಿ ಎಲ್ಲ ಕ್ಷೇತ್ರಗಳಲ್ಲಿ ಕಂಡ ಸತ್ಯವನ್ನು ನೇರವಾಗಿ ಮೌಲ್ಯ ತುಂಬಿದ ವಚನಗಳ ಮೂಲಕ ಸಮಾಜಕ್ಕೆ ಎಚ್ಚರಿಕೆ ನೀಡಿದ್ದಾರೆ. ಸರ್ವಜ್ಞನ ವಚನಗಳು ಇಂದಿಗೂ-ಮುಂದೆಯೂ ಸಾರ್ವಕಾಲಿಕವಾಗಿವೆ. ತ್ರಿಪದಿಗಳ ಮೂಲಕ ಸರ್ವಜ್ಞ ನೀಡಿದ ಸಂದೇಶಗಳನ್ನು ನಾವು ಅನುಸರಿಸುವ ಮೂಲಕ ಸಮಾಜದಲ್ಲಿ ಅತ್ಯುತ್ತಮವಾದ ಜೀವನ ರೂಪಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.

ಮಾಜಿ ಶಾಸಕ ಬಿ.ಎಚ್‌.ಬನ್ನಿಕೋಡ ಸರ್ವಜ್ಞ ಭಾವಚಿತ್ರದ ಮೆರವಣಿಗೆ ಚಾಲನೆ ನೀಡಿ ಮಾತನಾಡಿ, ಲೋಕದ ಕಣ್ಣು ತೆರಿಸಿದ್ದ ಸರ್ವಜ್ಞನಿಗೆ ನ್ಯಾಯ ಸಿಕ್ಕಿಲ್ಲ, ಸರ್ವಜ್ಞನ ವಚನಗಳು ಸರಕಾರಕ್ಕೆ ಕಾಣುತ್ತಿಲ್ಲ, ಸರಕಾರ ಮತ್ತು ಅಧಿಕಾರಿಗಳು ಎಚ್ಚೆತ್ತುಕೊಂಡು ಪೂರ್ಣ ಪ್ರಮಾಣದ ಸರ್ವಜ್ಞ ಪ್ರಾಧಿಕಾರ ರಚನೆ ಮಾಡಬೇಕು. ಈ ಕುರಿತು ವಿವಿಧ ಸಂಘ ಸಂಸ್ಥೆಗಳು ಪತ್ರಗಳನ್ನು ಬರೆದು ಸರಕಾರವನ್ನು ಎಚ್ಚರಿಸಬೇಕು.

ಸರ್ವಜ್ಞ ತಾನು ರಚಿಸಿದ ತ್ರಿಪದಿ ವಚನಗಳಲ್ಲಿ ಲೋಕಾನುಭವವನ್ನು ಬಹಳ ಸರಳವಾಗಿ ಮತ್ತು ಮಾರ್ಮಿಕವಾಗಿ ಸಮಾಜಕ್ಕೆ ತಿಳಿಸಿದ್ದಾನೆ. ಸುಂದರ ಸಮಾಜ ನಿರ್ಮಾಣಕ್ಕೆ ಸರ್ವಜ್ಞನ ವಚನಗಳು ಮಾರ್ಗದರ್ಶಕಗಳಾಗಿವೆ ಎಂದರು.

ಪ್ರಾಚಾರ್ಯ ಡಾ.ಎಸ್‌.ಬಿ.ಚನ್ನಗೌಡ್ರ ಹಾಗೂ ಉಪನ್ಯಾಸಕ ಪ್ರಮೋದ ನಲವಾಗಲ ಸರ್ವಜ್ಞನ ಕುರಿತು ಉಪನ್ಯಾಸ ನೀಡಿದರು. ಹಿರಿಯ ಸಂಶೋಧಕ ಡಾ.ಭೋಜರಾಜ ಪಾಟೀಲ್‌ ಅಧ್ಯಕ್ಷ ತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಎನ್‌.ಜಿ.ಬಣಕಾರ, ಪ್ರಕಾಶ ಬನ್ನಿಕೋಡ, ಹೇಮಣ್ಣ ಮುದರಡ್ಡೇರ, ಗಿರಿಜವ್ವ ಮುದಿಗೌಡ್ರ, ಚನ್ನಬಸಪ್ಪ ಚಕ್ರಸಾಲಿ, ಬಿ.ಎನ್‌.ಬಣಕಾರ, ಬಸವರಾಜ ಮಳವಳ್ಳಿ, ಸುರೇಶ ಕುರುವತ್ತೇರ, ಲಲಿತಾ ಕಣವೇರ, ವಿಜಯಾ ಮಳವಳ್ಳಿ, ಪ್ರಭಾಕರ ಹುಲ್ಲತ್ತಿ, ಜಗದೀಶ ದಂಡಗೀಹಳ್ಳಿ, ಬಸಲಿಂಗಪ್ಪ ಮುದಗೋಳ, ಶಂಕ್ರಪ್ಪ ಗೌಡ್ರ, ಮಹಾಲಿಂಗಪ್ಪ ಗುಳಲಕಾಯಿ, ಎನ್‌.ಆರ್‌.ಮುದಗೋಳ, ರೂಪಾ ಆಡೂರ, ಉಜ್ಜಪ್ಪ ಮುದಗೋಳ, ಜಗದೀಶ ಮಳವಳ್ಳಿ, ರುದ್ರಮುನಿ ಕಣವೇರ, ನಾಗರಾಜ ಚಕ್ರಸಾಲಿ, ಈರಣ್ಣ ಕರ್ಕಿಕಟ್ಟಿ, ಸಿ.ಎಚ್‌.ಬಾಲಣ್ಣನವರ, ಚಂದ್ರಪ್ಪ ಮಡಿವಾಳರ, ಗ್ರಾಮಸ್ಥರು ಉಪಸ್ಥಿತರಿದ್ದರು. ಪ್ರವೀಣ್‌ ಕುರುವತ್ತೇರ ಸ್ವಾಗತಿಸಿದರು, ವೀರೇಶ ಗೌಡ್ರ ನಿರೂಪಿಸಿ, ವಂದಿಸಿದರು.

ಇದಕ್ಕೂ ಮುನ್ನ ಗ್ರಾಮದ ಪ್ರವಾಸಿ ಮಂದಿರದಿಂದ ಗ್ರಾಮದ ಮುಖ್ಯ ರಾಜಬೀದಿಗಳಲ್ಲಿ ವಿವಿದ ವಾದ್ಯ ವೃಂದಗಳೊಂದಿಗೆ ಸರ್ವಜ್ಞ ಮೂರ್ತಿಯ ಭಾವಚಿತ್ರದ ಮೆರವಣಿಗೆ ಸಂಭ್ರಮದಿಂದ ನೆರವೇರಿತು. ಗ್ರಾಮದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಮತ್ತು ಸರ್ವಜ್ಞನ ವಚನಗಳ ಸ್ಪರ್ಧೆ ಏರ್ಪಡಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ