ಆ್ಯಪ್ನಗರ

ಅಧಿಕಾರ ತಿರಸ್ಕರಿಸಿದ ನಿಮಗೆ ಜನತೆ ತಕ್ಕಪಾಠ: ಬಿ.ಎಚ್‌.ಬನ್ನಿಕೋಡ್‌

ಹಿರೇಕೆರೂರು : ಬಿ.ಸಿ.ಪಾಟೀಲರೆ ನಿಮಗೆ ತಾಲೂಕಿನ ಮತದಾರರು ಮತ ನೀಡಿ ಶಾಸಕರನ್ನಾಗಿ ಆಯ್ಕೆಮಾಡಿದ್ದರು. ಅಧಿಕಾರ ತಿರಸ್ಕರಿಸಿದ ನಿಮಗೆ ಜನತೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಮಾಜಿ ಶಾಸಕ ರಾಜ್ಯ ಅಪೆಕ್ಸ್‌ ಬ್ಯಾಂಕ್‌ ಮಾಜಿ ಉಪಾಧ್ಯಕ್ಷ ಬಿ.ಎಚ್‌.ಬನ್ನಿಕೋಡ್‌ ಅವರು ಮಾಜಿ ಶಾಸಕ ಬಿ.ಸಿ.ಪಾಟೀಲರಿಗೆ ಎಚ್ಚರಿಸಿದರು.

Vijaya Karnataka 28 Sep 2019, 5:00 am
ಹಿರೇಕೆರೂರು : ಬಿ.ಸಿ.ಪಾಟೀಲರೆ ನಿಮಗೆ ತಾಲೂಕಿನ ಮತದಾರರು ಮತ ನೀಡಿ ಶಾಸಕರನ್ನಾಗಿ ಆಯ್ಕೆಮಾಡಿದ್ದರು. ಅಧಿಕಾರ ತಿರಸ್ಕರಿಸಿದ ನಿಮಗೆ ಜನತೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಮಾಜಿ ಶಾಸಕ ರಾಜ್ಯ ಅಪೆಕ್ಸ್‌ ಬ್ಯಾಂಕ್‌ ಮಾಜಿ ಉಪಾಧ್ಯಕ್ಷ ಬಿ.ಎಚ್‌.ಬನ್ನಿಕೋಡ್‌ ಅವರು ಮಾಜಿ ಶಾಸಕ ಬಿ.ಸಿ.ಪಾಟೀಲರಿಗೆ ಎಚ್ಚರಿಸಿದರು.
Vijaya Karnataka Web the people you despise are those who rejected the authority bh bannikode
ಅಧಿಕಾರ ತಿರಸ್ಕರಿಸಿದ ನಿಮಗೆ ಜನತೆ ತಕ್ಕಪಾಠ: ಬಿ.ಎಚ್‌.ಬನ್ನಿಕೋಡ್‌


ಶುಕ್ರವಾರ ಪಟ್ಟಣದ ಹಿರಿಯ ನ್ಯಾಯವಾದಿ ಎನ್‌.ಜಿ.ಬಣಕಾರ ನಿವಾಸದ ಆವರಣದಲ್ಲಿಜರುಗಿದ ಕಾಂಗ್ರೆಸ್‌ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಸಭೆ ನಡೆಸಿ ನಂತರ ಸುದ್ಧಿಗಾರರೊಂದಿಗೆ ಮಾತನಾಡಿ, ಮಂತ್ರಿ ಸ್ಥಾನದ ಆಸೆಗಾಗಿ ಜನರು ಕೊಟ್ಟ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತದಾರರನ್ನು ನಡುದಾರಿಯಲ್ಲಿಬಿಟ್ಟಿದ್ದಾರೆ ಎಂದು ಬಿ.ಸಿ.ಪಾಟೀಲ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಶಾಸಕರ ಅಧಿಕಾರಾವಧಿ ಮುಗಿದ ನಂತರ ಬೇರೆ ಯಾವ ಪಕ್ಷಕ್ಕೆ ಹೋಗಿದ್ದರೂ ಇವರನ್ನು ಯಾರು ಏನು ? ಎನ್ನುತ್ತಿದ್ದಿಲ್ಲ. ಆದರೆ, ಅಧಿಕಾರ ಇದ್ದಾಗಲೆ ಅದನ್ನು ತಿರಸ್ಕರಿಸಿ ಮತದಾರ ಪ್ರಭುಗಳಿಗೆ ದ್ರೋಹ ಬಗೆದಿದ್ದು ಅಲ್ಲದೆ ನೋವನ್ನುಂಟು ಮಾಡಿದ್ದಾರೆ ಎಂದು ಭಾವುಕರಾದರು.

ರಟ್ಟೀಹಳ್ಳಿ ತಾಲೂಕು ಕೇಂದ್ರ: ರಾಜ್ಯದಲ್ಲಿಕಾಂಗ್ರೆಸ್‌ ಪಕ್ಷದ ಅಧಿಕಾರದ ಸಂದರ್ಭದಲ್ಲಿಅಂದಿನ ಸಿಎಂ ಸಿದ್ದರಾಮಯ್ಯ ರಟ್ಟೀಹಳ್ಳಿಯನ್ನು ತಾಲೂಕು ಕೇಂದ್ರ ಎಂದು ಘೋಷಣೆ ಮಾಡಿದ್ದಾರೆ. ನಾಲ್ಕು ಏತ ನೀರಾವರಿ ಯೋಜನೆಗಳಿಗೆ ಅನುದಾನ ನೀಡಿದ್ದಾರೆ. ಯೋಜನೆಗಳು ಈಗಾಗಲೇ ಪೂರ್ಣಗೊಂಡಿವೆ. ರಸ್ತೆ, ಕೆರೆ ಅಭಿವೃದ್ದಿಗಳಿಗೆ ಅನುದಾನ ನೀಡಿದ್ದಾರೆ ಎಂದು ಸ್ವತಃ ಮಾಜಿ ಶಾಸಕ ಬಿ.ಸಿ.ಪಾಟೀಲರೆ ಈ ಹಿಂದೆ ಹೇಳಿದ್ದರು. ಆದರೆ ಸಮ್ಮಿಶ್ರ ಸರಕಾರ ಅನುದಾನ ನೀಡಿಲ್ಲಎಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಸರಿಯೇ ? ಎಂದು ಪಾಟೀಲರನ್ನು ಪ್ರಶ್ನೆ ಮಾಡಿದರು.

ಅಭ್ಯರ್ಥಿಯನ್ನಾಗಿ ಆಯ್ಕೆ: ಕಾಂಗ್ರೆಸ್‌ ಪಕ್ಷದ ರಾಜ್ಯ ಹಾಗೂ ರಾಷ್ಟ್ರಮಟ್ಟದ ಮುಖಂಡರು ಕ್ಷೇತ್ರಕ್ಕೆ ಸ್ಪರ್ಧಿಸಲು ಪಕ್ಷದ ಅಭ್ಯರ್ಥಿಯನ್ನಾಗಿ ಈಗಾಗಲೆ ಆಯ್ಕೆ ಮಾಡಿದ್ದಾರೆ. ಕ್ಷೇತ್ರದಲ್ಲಿಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲಲೇಬೇಕೆಂದು ಮುಖಂರು ಪಣ ತೊಟ್ಟಿದ್ದಾರೆ. ಈ ಹಿನ್ನಲೆಯಲ್ಲಿಬೂತ್‌ ಮಟ್ಟದಿಂದ ಇಂದಿನಿಂದಲೇ ಪಕ್ಷವನ್ನು ಎಲ್ಲಮುಖಂಡರು, ಕಾರ್ಯಕರ್ತರೊಂದಿಗೆ ಆಯಾ ಗ್ರಾಮಗಳಿಗೆ ತೆರಳಿ ಸಂಘಟಿಸುವುದಾಗಿ ಹೇಳಿದರು.

ಜಿ.ಪಂ ಅಧ್ಯಕ್ಷ ಎಸ್‌.ಕೆ.ಕರಿಯಣ್ಣನವರ ಮಾತನಾಡಿ, ತಾಲೂಕಿನಲ್ಲಿಕಾಂಗ್ರೆಸ್‌ ಪಕ್ಷಕ್ಕೆ ಈಗ ಸ್ವಾತಂತ್ರ್ಯ ಸಿಕ್ಕಿದೆ. ನಾವು ಹತ್ತು ಜನ ಟಿಕೇಟ್‌ ಆಕಾಂಕ್ಷಿಗಳು ಅರ್ಜಿ ಹಾಕಿದ್ದೇವು. ಪಕ್ಷ ಮಾಜಿ ಶಾಸಕ ಬಿ.ಎಚ್‌.ಬನ್ನಿಕೋಡ್‌ ಅವರಿಗೆ ಸ್ಪರ್ಧೆ ಮಾಡಲು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ. ನಮ್ಮಲ್ಲಿಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಅಭ್ಯರ್ಥಿಯನ್ನು ಗೆಲ್ಲಿಸುವುದೇ ನಮ್ಮ ಮುಂದಿನ ಗುರಿ ಎಂದು ಘೋಷಣೆ ಮಾಡಿದರು.

ಬ್ಲಾಕ್‌ ಅಧ್ಯಕ್ಷ ಪಿ.ಡಿ.ಬಸನಗೌಡ್ರ, ರಮೇಶ ಮಡಿವಾಳರ, ಮಾಜಿ ಅಧ್ಯಕ್ಷ ಎಸ್‌.ಬಿ.ತಿಪ್ಪಣ್ಣನವರ, ಜಿ.ಪಂ ಸದಸ್ಯ ಪ್ರಕಾಶ ಬನ್ನಿಕೋಡ್‌, ಮಾಜಿ ಜಿ.ಪಂ ಸದಸ್ಯ ಬಿ.ಎನ್‌.ಬನಕಾರ, ಎಸ್‌.ಎನ್‌.ಮುಲ್ಲಾ, ಶೇಖಪ್ಪ ಉಕ್ಕುಂದ, ಹನುಮಂತಪ್ಪ ಹಡಗದ, ಈರಣ್ಣ ಮಸ್ವಳ್ಳಿ, ಆರ್‌.ಎಸ್‌.ಪಾಟೀಲ್‌ ಹಾಗೂ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ