ಆ್ಯಪ್ನಗರ

ಕಾರ‍್ಯಕರ್ತರೇ ಪಕ್ಷ ಗಳ ಶಕ್ತಿ

ಬ್ಯಾಡಗಿ: ಕಾರ‍್ಯಕರ್ತರೇ ಪಕ್ಷ ಗಳ ಶಕ್ತಿಯಾಗಿದ್ದು ಅವರನ್ನು ಕಡೆಗಣಿಸಿದ ಯಾವ ಪಕ್ಷ ಗಳು ಉಳಿದ ಉದಾಹರಣೆಗಳಿಲ್ಲ, ಆದ್ದರಿಂದ ಬ್ಯಾಡಗಿ ಕ್ಷೇತ್ರದಲ್ಲಿನ ಮುಖಂಡರು ಪ್ರಾಮಾಣಿಕವಾಗಿ ಪಕ್ಷ ಸಂಘಟನೆಯಲ್ಲಿ ತೊಡಗುವಂತೆ ಮಾಜಿ ಶಾಸಕ ಬಸವರಾಜ ಶಿವಣ್ಣನನ ಕರೆ ನೀಡಿದರು.

Vijaya Karnataka 29 Aug 2019, 5:00 am
ಬ್ಯಾಡಗಿ: ಕಾರ‍್ಯಕರ್ತರೇ ಪಕ್ಷ ಗಳ ಶಕ್ತಿಯಾಗಿದ್ದು ಅವರನ್ನು ಕಡೆಗಣಿಸಿದ ಯಾವ ಪಕ್ಷ ಗಳು ಉಳಿದ ಉದಾಹರಣೆಗಳಿಲ್ಲ, ಆದ್ದರಿಂದ ಬ್ಯಾಡಗಿ ಕ್ಷೇತ್ರದಲ್ಲಿನ ಮುಖಂಡರು ಪ್ರಾಮಾಣಿಕವಾಗಿ ಪಕ್ಷ ಸಂಘಟನೆಯಲ್ಲಿ ತೊಡಗುವಂತೆ ಮಾಜಿ ಶಾಸಕ ಬಸವರಾಜ ಶಿವಣ್ಣನನ ಕರೆ ನೀಡಿದರು.
Vijaya Karnataka Web HVR-28BYD4


ಪಟ್ಟಣದ ಕಾಂಗ್ರೆಸ್‌ ಕಾರ್ಯಾಲಯದಲ್ಲಿ ನಡೆದ ಬ್ಯಾಡಗಿ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್‌ ಬ್ಲಾ ಕ್‌ ಕಮಿಟಿ ಸಭೆಯಲ್ಲಿ ಮಾತನಾಡಿದರು.

ತಾಲೂಕಾ ಕಾಂಗ್ರೆಸ್‌ ಪಕ್ಷ ದಲ್ಲಿ ಹಲವಾರು ದಿನಗಳಿಂದ ಗೊಂದಲದ ವಾತವರಣ ನಿರ್ಮಾಣವಾಗಿದ್ದು, ಇದರಿಂದಾಗಿ ಪಕ್ಷ ದ ನಿಷ್ಠಾವಂತ ಕಾರ್ಯಕರ್ತರು ಬೇಸರಗೊಂಡಿದ್ದಾರೆ. ಅವರ ಸುಖ ದುಖಃಗಳಲ್ಲಿ ಭಾಗವಹಿಸಿ ಅವರನ್ನು ಮತ್ತೆ ಪಕ್ಷ ಸಂಘಟನೆಯಲ್ಲಿ ತೊಡಗುವಂತೆ ಉತ್ತೇಜಿಸುವ ಕಾರ‍್ಯಕ್ಕೆ ನಾವೇಲ್ಲರೂ ಮುಂದಾಗಬೇಕಿದೆ ಎಂದರು.

ಜಿಲ್ಲಾಧ್ಯಕ್ಷ ಎಂ.ಎಂ.ಹಿರೇಮಠ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿರುವ ಬೂತ್‌ ಕಮೀಟಿಗಳಲ್ಲಿ ಉತ್ಸಾಹಿ ಯುವಕರನ್ನು ನೇಮಕ ಮಾಡಿ ಪಕ್ಷ ಸಂಘಟನೆ ಮಾಡಬೇಕಿದೆ ಎಂದರು.

ಕಾಗಿನೆಲೆ ಬ್ಲಾಕ್‌ ಕಾಂಗ್ರೆಸ್‌ ಅಧಕ್ಷ ಎಚ್‌.ಎಚ್‌.ಕಟ್ಟೆಗೌಡ್ರ, ಶಂಕ್ರಗೌಡ್ರ ಪಾಟೀಲ, ಮಂಜುನಾಥ ಭೋವಿ, ರಾಜು ಕಳ್ಯಾಳ, ದಾನಪ್ಪ ಚೂರಿ, ಸುಭಾಸ ಸವಣೂರ ಸೇರಿದಂತೆ ಇನ್ನಿತರರು ಪಕ್ಷ ಸಂಘ ಟನೆಯ ಬಗ್ಗೆ ಮಾತನಾಡಿದರು.

ಸಭೆಯ ಅಧ್ಯಕ್ಷ ತೆಯನ್ನು ಬ್ಯಾಡಗಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಕರಿಲಿಂಗಪ್ಪನವರ ವಹಿಸಿದ್ದರು. ಸಭೆಯಲ್ಲಿ ಜಿ.ಪಂ. ಸದಸ್ಯ ಅಬ್ದುಲ್‌ಮುನಾಫ ಯಲಿಗಾರ, ಬೀರಪ್ಪ ಬಣಕಾರ, ಖಾದ ರಸಾಬ ದೊಡ್ಡಮನಿ, ಜಗದೀಶ ಪೂಜಾರ, ಶಂಕರ ಕುಸಗೂರ, ಚೆನ್ನಮ್ಮ ಎಮ್ಮೇರ, ಪ್ರೇಮಾ ಅಂಗಡಿ, ಹನುಮಂತಪ್ಪ ಲಮಾಣಿ, ರುದ್ರಣ್ಣ ಹೊಂಕಣದ ಸೇರಿದಂತೆ ಇನ್ನಿತರರಿದ್ದರು. ಪ್ರಧಾನ ಕಾರ್ಯದರ್ಶಿ ರಮೇಶ ಸುತ್ತಕೋಟಿ ಸ್ವಾಗತಿಸಿದರು. ಯುಥ್‌ ಕಾಂಗ್ರೆಸ್‌ ಅಧ್ಯಕ್ಷ ಡಿ.ಎಚ್‌.ಬುಡ್ಡನಗೌಡ್ರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ