ಹಾವೇರಿ : ವಾಲ್ಮೀಕಿ ಸಮಾಜಕ್ಕೆ ಶೇ.7.5 ಮೀಸಲು ನೀಡಲು ಸರಕಾರ ನ್ಯಾಯಮೂರ್ತಿ ನಾಗಮೋಹನ ದಾಸ ಸಮಿತಿ ರಚಿಸಿದೆ. ಈ ಸಮಿತಿ ಅಹವಾಲು ಆಲಿಸಲು ಜಿಲ್ಲೆಗೆ ಬಂದ ಸಂದರ್ಭದಲ್ಲಿಸರಿಯಾದ ಮಾಹಿತಿ ನೀಡಿದಲ್ಲಿವಾಲ್ಮೀಕಿ ಸಮಾಜಕ್ಕೆ ಸಾಮಾಜಿಕ ನ್ಯಾಯ ಕೊಡಿಸಲು ಸಾಧ್ಯವಾಗುತ್ತದೆ ಎಂದು ಗೃಹ, ಸಹಕಾರ ಮತ್ತು ಜಿಲ್ಲಾಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಹಾವೇರಿ ಶಿವಶಕ್ತಿ ಪ್ಯಾಲೇಸ್ನಲ್ಲಿಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾವಾಲ್ಮೀಕಿ ನಾಯಕ ನೌಕರರ ಸಂಘ(ರಿ)ದ ಉದ್ಘಾಟನೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ವಾಲ್ಮೀಕಿ ಸಮಾಜದ ನೌಕರರು ಸಮಾಜದ ಬಡ ವಿದ್ಯಾರ್ಥಿಗಳನ್ನು ದತ್ತು ತಗೆದುಕೊಂಡು ಅವರ ಶಿಕ್ಷಣದ ಜವಾಬ್ದಾರಿಯನ್ನು ನಿರ್ವಹಿಸಬೇಕು, ನೌಕರರು ಸಂಘಟಿತರಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ತಾವೂ ಸಹ ನೌಕರರ ಬೆಂಬಲಿಕ್ಕಿರುವುದಾಗಿ ಸಚಿವರು ಭರವಸೆ ನೀಡಿದರು.
ಮಹರ್ಷಿ ವಾಲ್ಮೀಕಿ ಬರೆದಿರುವ ಮೂಲ ರಾಮಾಯಣ ಎಲ್ಲರಿಗೂ ಪ್ರೇರಣೆಯಾಗಿದೆ. ರಾಮಾಯಣದಲ್ಲಿಮನುಷ್ಯ ಸಂಬಂಧಗಳ ಬೆಸುಗೆಯಿದೆ ಎಂದು ಸಚಿವ ಬೊಮ್ಮಾಯಿ, ಸಣ್ಣ ಸಣ್ಣ ಸಮಾಜಗಳನ್ನು ಹಿಂದುಳಿದ ವರ್ಗಕ್ಕೆ ಸೇರಿಸಿ ಅವರಿಗೆ ಸ್ಥಾನ, ಮಾನ, ಸ್ವಾಭಿಮಾನ ಕೊಟ್ಟವರು ಹಾವನೂರು ಅವರು ಎಂದು ಹೇಳಿದರು.
ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿ, ಲಕ್ಷ್ಮಿ(ಹಣ) ಗಿಂತ ಸರಸ್ವತಿ ಶ್ರೇಷ್ಠ, ಈ ಸತ್ಯವನ್ನು ಸಮಾಜದ ನೌಕರರ ಬಾಂಧವರು ಲಕ್ಷ್ಮಿಯ ಹಿಂದೆ ಬೀಳುವ ಬದಲು ಮಕ್ಕಳಿಗೆ ವಿದ್ಯೆ ಕೊಡಿಸುವ ಮೂಲಕ ಮುಖ್ಯವಾಹಿನಿಗೆ ತರಬೇಕು ಎಂದರು.
ಕಲಬುರ್ಗಿ ಜಿಲ್ಲಾಡಳಿತ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿನಿಷೇಧಿತ ಪುಸ್ತಕ ನೀಡಲಾಗಿದೆ. ಈ ಕೃತಿ ನಿಷೇಧವಾಗಿದ್ದರೂ ಅಧಿಕಾರಿಗಳು ಎಲ್ಲಿಂದ ತಂದಿದ್ದಾರೆ? ಎಂದು ಪ್ರಶ್ನಿಸಿದ ಉಗ್ರಪ್ಪ, ರಾಜ್ಯ ಸರಕಾರ ತಕ್ಷಣ ಈ ಕುರಿತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮಾಜಿ ಸಚಿವ ಮತ್ತು ಶಾಸಕ ಸತೀಶ ಜಾರಕಿಹೊಳಿ ಮಾತನಾಡಿ, ಸರಕಾರಿ ಉದ್ಯೋಗ ಅವಲಂಬಿಸದೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ನೆರವು ಪಡೆದು ಸ್ವಯಂ ಉದ್ಯೋಗಗಳನ್ನು ಸ್ಥಾಪಿಸುವ ಮೂಲಕ ಉದ್ಯೋಗಪತಿಗಳಾಗಿ ಜನರಿಗೆ ಕೆಲಸ ಕೊಡುವಂತಾಗಬೇಕು ಎಂದು ಕರೆ ಹೇಳಿದರು.
ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಗುರು ಮತ್ತು ಗುರಿ ಇರಬೇಕು. ನಾವು ಯಾರ ಹಕ್ಕನ್ನೂ ಕಸಿದುಕೊಳ್ಳುತ್ತಿಲ್ಲ. ಸಂವಿಧಾನ ಬದ್ಧ ಹಕ್ಕನ್ನು ಕೇಳುತ್ತಿದ್ದೇವೆ. ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸರಕಾರ ಶೇ.7.5 ಮೀಸಲು ಹೆಚ್ಚಿಸಲೇಬೇಕು ಎಂದರು.
ಸನ್ಮಾನಿತರ ಪರವಾಗಿ ಐಎಎಸ್ ಅಧಿಕಾರಿ ಪವನಕುಮಾರ ಗಿರಿಯಪ್ಪನವರ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಸಂಸದ ಶಿವಕುಮಾರ ಉದಾಸಿ, ಡಿ.ಎಂ.ಸಾಲಿ, ಜಿ.ಟಿ.ಚಂದ್ರಶೇಖರಪ್ಪ, ಕವಿವಿ ಕುಲಸಚಿವ ಎನ್.ಎಂ.ಸಾಲಿ, ನಿವೃತ್ತ ಡಿಸಿ ಬಿ.ಶಿವಪ್ಪ, ಕೆ.ಮಂಜಣ್ಣ ಮುಂತಾದವರು ಹಾಜರಿದ್ದರು.
ಜಿಲ್ಲಾವಾಲ್ಮೀಕಿ ನಾಯಕ ನೌಕರರ ಸಂಘದ ಅಧ್ಯಕ್ಷ ಪ್ರಮೋದ ನಲವಾಗಲ ಅಧ್ಯಕ್ಷತೆ ವಹಿಸಿದ್ದರು. ಆಂಜನೇಯ ಹುಲ್ಲಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ರಮೇಶ ತೆವರಿ ಸ್ವಾಗತಿಸಿದರು. ಅನಿಲಕುಮಾರ ಮರೋಳ ವಂದಿಸಿದರು.
ಹಾವೇರಿ ಶಿವಶಕ್ತಿ ಪ್ಯಾಲೇಸ್ನಲ್ಲಿಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾವಾಲ್ಮೀಕಿ ನಾಯಕ ನೌಕರರ ಸಂಘ(ರಿ)ದ ಉದ್ಘಾಟನೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ವಾಲ್ಮೀಕಿ ಸಮಾಜದ ನೌಕರರು ಸಮಾಜದ ಬಡ ವಿದ್ಯಾರ್ಥಿಗಳನ್ನು ದತ್ತು ತಗೆದುಕೊಂಡು ಅವರ ಶಿಕ್ಷಣದ ಜವಾಬ್ದಾರಿಯನ್ನು ನಿರ್ವಹಿಸಬೇಕು, ನೌಕರರು ಸಂಘಟಿತರಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ತಾವೂ ಸಹ ನೌಕರರ ಬೆಂಬಲಿಕ್ಕಿರುವುದಾಗಿ ಸಚಿವರು ಭರವಸೆ ನೀಡಿದರು.
ಮಹರ್ಷಿ ವಾಲ್ಮೀಕಿ ಬರೆದಿರುವ ಮೂಲ ರಾಮಾಯಣ ಎಲ್ಲರಿಗೂ ಪ್ರೇರಣೆಯಾಗಿದೆ. ರಾಮಾಯಣದಲ್ಲಿಮನುಷ್ಯ ಸಂಬಂಧಗಳ ಬೆಸುಗೆಯಿದೆ ಎಂದು ಸಚಿವ ಬೊಮ್ಮಾಯಿ, ಸಣ್ಣ ಸಣ್ಣ ಸಮಾಜಗಳನ್ನು ಹಿಂದುಳಿದ ವರ್ಗಕ್ಕೆ ಸೇರಿಸಿ ಅವರಿಗೆ ಸ್ಥಾನ, ಮಾನ, ಸ್ವಾಭಿಮಾನ ಕೊಟ್ಟವರು ಹಾವನೂರು ಅವರು ಎಂದು ಹೇಳಿದರು.
ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿ, ಲಕ್ಷ್ಮಿ(ಹಣ) ಗಿಂತ ಸರಸ್ವತಿ ಶ್ರೇಷ್ಠ, ಈ ಸತ್ಯವನ್ನು ಸಮಾಜದ ನೌಕರರ ಬಾಂಧವರು ಲಕ್ಷ್ಮಿಯ ಹಿಂದೆ ಬೀಳುವ ಬದಲು ಮಕ್ಕಳಿಗೆ ವಿದ್ಯೆ ಕೊಡಿಸುವ ಮೂಲಕ ಮುಖ್ಯವಾಹಿನಿಗೆ ತರಬೇಕು ಎಂದರು.
ಕಲಬುರ್ಗಿ ಜಿಲ್ಲಾಡಳಿತ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿನಿಷೇಧಿತ ಪುಸ್ತಕ ನೀಡಲಾಗಿದೆ. ಈ ಕೃತಿ ನಿಷೇಧವಾಗಿದ್ದರೂ ಅಧಿಕಾರಿಗಳು ಎಲ್ಲಿಂದ ತಂದಿದ್ದಾರೆ? ಎಂದು ಪ್ರಶ್ನಿಸಿದ ಉಗ್ರಪ್ಪ, ರಾಜ್ಯ ಸರಕಾರ ತಕ್ಷಣ ಈ ಕುರಿತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮಾಜಿ ಸಚಿವ ಮತ್ತು ಶಾಸಕ ಸತೀಶ ಜಾರಕಿಹೊಳಿ ಮಾತನಾಡಿ, ಸರಕಾರಿ ಉದ್ಯೋಗ ಅವಲಂಬಿಸದೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ನೆರವು ಪಡೆದು ಸ್ವಯಂ ಉದ್ಯೋಗಗಳನ್ನು ಸ್ಥಾಪಿಸುವ ಮೂಲಕ ಉದ್ಯೋಗಪತಿಗಳಾಗಿ ಜನರಿಗೆ ಕೆಲಸ ಕೊಡುವಂತಾಗಬೇಕು ಎಂದು ಕರೆ ಹೇಳಿದರು.
ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಗುರು ಮತ್ತು ಗುರಿ ಇರಬೇಕು. ನಾವು ಯಾರ ಹಕ್ಕನ್ನೂ ಕಸಿದುಕೊಳ್ಳುತ್ತಿಲ್ಲ. ಸಂವಿಧಾನ ಬದ್ಧ ಹಕ್ಕನ್ನು ಕೇಳುತ್ತಿದ್ದೇವೆ. ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸರಕಾರ ಶೇ.7.5 ಮೀಸಲು ಹೆಚ್ಚಿಸಲೇಬೇಕು ಎಂದರು.
ಸನ್ಮಾನಿತರ ಪರವಾಗಿ ಐಎಎಸ್ ಅಧಿಕಾರಿ ಪವನಕುಮಾರ ಗಿರಿಯಪ್ಪನವರ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಸಂಸದ ಶಿವಕುಮಾರ ಉದಾಸಿ, ಡಿ.ಎಂ.ಸಾಲಿ, ಜಿ.ಟಿ.ಚಂದ್ರಶೇಖರಪ್ಪ, ಕವಿವಿ ಕುಲಸಚಿವ ಎನ್.ಎಂ.ಸಾಲಿ, ನಿವೃತ್ತ ಡಿಸಿ ಬಿ.ಶಿವಪ್ಪ, ಕೆ.ಮಂಜಣ್ಣ ಮುಂತಾದವರು ಹಾಜರಿದ್ದರು.
ಜಿಲ್ಲಾವಾಲ್ಮೀಕಿ ನಾಯಕ ನೌಕರರ ಸಂಘದ ಅಧ್ಯಕ್ಷ ಪ್ರಮೋದ ನಲವಾಗಲ ಅಧ್ಯಕ್ಷತೆ ವಹಿಸಿದ್ದರು. ಆಂಜನೇಯ ಹುಲ್ಲಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ರಮೇಶ ತೆವರಿ ಸ್ವಾಗತಿಸಿದರು. ಅನಿಲಕುಮಾರ ಮರೋಳ ವಂದಿಸಿದರು.