ಆ್ಯಪ್ನಗರ

ಮಕ್ಕಳ ಬೆಳವಣಿಗೆಗೆ ತಾಯಂದಿರ ಪಾತ್ರ ಮುಖ್ಯ

ಅಕ್ಕಿಆಲೂರು: ಮಕ್ಕಳ ಉತ್ತಮ ಭವಿಷ್ಯ ನಿರ್ಮಾಣದಲ್ಲಿ ತಾಯಂದಿರ ಪಾತ್ರ ಮಹತ್ವದ್ದಾಗಿದೆ. ಮಕ್ಕಳನ್ನು ಶಾಲೆ, ಕಾಲೇಜುಗಳಿಗೆ ಕಳುಹಿಸಿದ ಮಾತ್ರಕ್ಕೆ ಕರ್ತವ್ಯ ಮುಗಿಯಿತು ಎನ್ನುವ ಭಾವನೆ ಬೇಡ ಎಂದು ಹಾವೇರಿಯ ಡಯಟ್‌ ಹಿರಿಯ ಉಪನ್ಯಾಸಕ ಎಂ.ಬಿ.ಅಂಬಿಗೇರ ಹೇಳಿದರು.

Vijaya Karnataka 23 Jul 2019, 5:00 am
ಅಕ್ಕಿಆಲೂರು: ಮಕ್ಕಳ ಉತ್ತಮ ಭವಿಷ್ಯ ನಿರ್ಮಾಣದಲ್ಲಿ ತಾಯಂದಿರ ಪಾತ್ರ ಮಹತ್ವದ್ದಾಗಿದೆ. ಮಕ್ಕಳನ್ನು ಶಾಲೆ, ಕಾಲೇಜುಗಳಿಗೆ ಕಳುಹಿಸಿದ ಮಾತ್ರಕ್ಕೆ ಕರ್ತವ್ಯ ಮುಗಿಯಿತು ಎನ್ನುವ ಭಾವನೆ ಬೇಡ ಎಂದು ಹಾವೇರಿಯ ಡಯಟ್‌ ಹಿರಿಯ ಉಪನ್ಯಾಸಕ ಎಂ.ಬಿ.ಅಂಬಿಗೇರ ಹೇಳಿದರು.
Vijaya Karnataka Web the role of mothers is important for the development of children
ಮಕ್ಕಳ ಬೆಳವಣಿಗೆಗೆ ತಾಯಂದಿರ ಪಾತ್ರ ಮುಖ್ಯ


ಶಾಡಗುಪ್ಪಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ತಾಯಂದಿರ ಸಭೆ ಉದ್ಘಾಟಿಸಿ ಮಾತನಾಡಿದರು. ಪ್ರಾಥಮಿಕ ಹಂತದಲ್ಲಿ ಮಕ್ಕಳ ಬಗ್ಗೆ ನಿಗಾ ವಹಿಸುವ ಪಾಲಕರು ಪದವಿ ಅಭ್ಯಾಸದ ಸಂದರ್ಭದಲ್ಲಿ ತಮ್ಮ ಮಕ್ಕಳ ಬಗ್ಗೆ ಅಷ್ಟಾಗಿ ಗಮನ ಹರಿಸುವುದಿಲ್ಲ. ಇದು ಮಕ್ಕಳ ಶೈಕ್ಷ ಣಿಕ ಪ್ರಗತಿಯ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪಾಲಕರ ಕಾಳಜಿ ಕೇವಲ ಪ್ರಾಥಮಿಕ ಹಂತಕ್ಕೆ ಸೀಮಿತಗೊಳ್ಳದೇ ಶೈಕ್ಷ ಣಿಕ ಬದುಕು ಪೂರ್ಣಗೊಳ್ಳುವವರೆಗೂ ಅಗತ್ಯವಾಗಿದೆ ಎಂದು ಹೇಳಿದ ಅವರು ಪದವಿ ಹಂತದ ಸಂದರ್ಭದಲ್ಲಿ ಕೆಲ ಯುವಕರು ಸೂಕ್ತ ಮಾರ್ಗದರ್ಶನದ ಕೊರತೆಯಿಂದ ದಾರಿ ತಪ್ಪಿ ನಡೆಯುತ್ತಿದ್ದಾರೆ. ಇಂಥ ವಿದ್ಯಾರ್ಥಿಗಳ ಮನವೊಲಿಸಿ ಪುನಃ ಅವರನ್ನು ಸರಿ ದಾರಿಗೆ ತರುವ ಕಾರ್ಯ ಶಾಲೆಯಲ್ಲಿ ಶಿಕ್ಷ ಕರಿಂದ, ಮನೆಯಲ್ಲಿ ಪಾಲಕರಿಂದ ನಡೆದರೆ ಅವರ ಭವಿಷ್ಯವನ್ನು ಉತ್ತಮವಾಗಿ ನಿರ್ಮಿಸಬಹುದಾಗಿದೆ ಎಂದರು.

ಮುಖ್ಯೋಪಾಧ್ಯಾಯ ಎಂ.ಎಸ್‌.ಗುಂಡಪಲ್ಲಿ ಮಾತನಾಡಿ, ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಶಿಕ್ಷ ಣದ ಅವಶ್ಯಕತೆ ಪ್ರಮುಖವಾದುದು. ಶಿಕ್ಷ ಕರು ಮಕ್ಕಳಿಗೆ ಉತ್ತಮ ಶಿಕ್ಷ ಣವನ್ನು ಕೊಡುವುದರ ಜತೆಗೆ ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಕಾಳಜಿ ವಹಿಸಬೇಕಿದೆ ಎಂದು ಹೇಳಿದರು.

ಎಸ್‌ಡಿಎಂಸಿ ಉಪಾಧ್ಯಕ್ಷ ಚನ್ನವೀರಗೌಡ ಪಾಟೀಲ, ಶ್ರೀಕಾಂತ ಸಾವಕ್ಕನವರ, ಎಸ್‌.ಎಸ್‌.ಮೂರಮಟ್ಟಿ, ದೇವೇಂದ್ರಪ್ಪ ಸಾವಕ್ಕನವರ, ಮಹಲಿಂಗಪ್ಪ ಮೂಲಿಕೇರಿ, ಮಂಜುಗೌಡ, ಫಡ್ನವಿಸ್‌, ಡಾ.ಅಕ್ಕಿ, ನಾಗರಾಜ್‌ ಸುರಳೇಶ್ವರ, ಪ್ರವೀಣ ಕರ್ಜಗಿ, ಗೌರಮ್ಮ ಕಡ್ಲಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ