ಆ್ಯಪ್ನಗರ

ಪ್ರೀತಿ, ಬಾಂಧವ್ಯ ಬೆಸೆಯುವಲ್ಲಿ ವಿಜ್ಞಾನ ಹಬ್ಬ ಸಹಕಾರಿ

ಅಕ್ಕಿಆಲೂರು: ಮಕ್ಕಳಲ್ಲಿಪರಸ್ಪರ ಸಹೋದರತ್ವ, ಸಮಾನತೆ, ಪ್ರೀತಿ, ಬಾಂಧವ್ಯ ಬೆಸೆಯುವಲ್ಲಿಮಕ್ಕಳ ವಿಜ್ಞಾನ ಹಬ್ಬ ಸಹಕಾರಿಯಾಗಿದೆ. ಪಠ್ಯದ ಹೊರತಾಗಿ ವಿಜ್ಞಾನದ ಆಗುಹೋಗುಗಳ ಬಗೆಗೆ ಈ ಹಬ್ಬದ ಮೂಲಕ ಅರಿವು ಮೂಡಲಿದೆ ಎಂದು ಡಿಡಿಪಿಐ ಅಂದಾನೆಪ್ಪ ವಡಗೇರಿ ಹೇಳಿದರು.

Vijaya Karnataka 22 Dec 2019, 5:00 am
ಅಕ್ಕಿಆಲೂರು: ಮಕ್ಕಳಲ್ಲಿಪರಸ್ಪರ ಸಹೋದರತ್ವ, ಸಮಾನತೆ, ಪ್ರೀತಿ, ಬಾಂಧವ್ಯ ಬೆಸೆಯುವಲ್ಲಿಮಕ್ಕಳ ವಿಜ್ಞಾನ ಹಬ್ಬ ಸಹಕಾರಿಯಾಗಿದೆ. ಪಠ್ಯದ ಹೊರತಾಗಿ ವಿಜ್ಞಾನದ ಆಗುಹೋಗುಗಳ ಬಗೆಗೆ ಈ ಹಬ್ಬದ ಮೂಲಕ ಅರಿವು ಮೂಡಲಿದೆ ಎಂದು ಡಿಡಿಪಿಐ ಅಂದಾನೆಪ್ಪ ವಡಗೇರಿ ಹೇಳಿದರು.
Vijaya Karnataka Web the science festival is a fusion of love and attachment
ಪ್ರೀತಿ, ಬಾಂಧವ್ಯ ಬೆಸೆಯುವಲ್ಲಿ ವಿಜ್ಞಾನ ಹಬ್ಬ ಸಹಕಾರಿ


ದೇವರ ಹೊಸಪೇಟೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಆಯೋಜಿಸಲಾಗಿದ್ದ ಮಕ್ಕಳ ವಿಜ್ಞಾನ ಹಬ್ಬ ಉದ್ಘಾಟಿಸಿ ಮಾತನಾಡಿದರು. ಹಬ್ಬದ ನೆಪದಲ್ಲಿಮಕ್ಕಳು ಸ್ವಯಂಪ್ರೇರಣೆಯಿಂದ ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನದಲ್ಲಿವಿಜ್ಞಾನ ಮಾದರಿ ಮತ್ತು ಪರಿಕಲ್ಪನೆಗಳು ಅರಿವು ಮೂಡಿಸಿಕೊಂಡಿದ್ದಾರೆ. ಭಾರತ ಜ್ಞಾನ ವಿಜ್ಞಾನ ಸಮಿತಿ ಆಶ್ರಯದಲ್ಲಿರಾಜ್ಯಾದ್ಯಂತ ಈ ಹಬ್ಬ ಆಚರಿಸಲಾಗುತ್ತಿದ್ದು, ಮಕ್ಕಳಲ್ಲಿಹೊಸ ಉತ್ಸಾಹ ಮೂಡುತ್ತಿದೆ. ಸಮುದಾಯದಲ್ಲಿನ ಮೂಢನಂಬಿಕೆ, ಅಂಧಶ್ರದ್ಧೆ, ಭಯಾನಕ ವಿಷಯಗಳು ಬಿತ್ತನೆಯಾಗುತ್ತಿವೆ. ಇದನ್ನು ಹೋಗಲಾಡಿಸಿ ನವ ಸಮಾಜ ನಿರ್ಮಾಣದ ಕನಸು ಇಂಥ ವಿನೂತನ ಕಾರ್ಯಕ್ರಮ, ಸಂಗತಿಗಳಿಂದ ಸಾಧ್ಯವಾಗಲಿದೆ ಎಂದರು.

ಬಿಇಒ ಎಚ್‌.ಶ್ರೀನಿವಾಸ್‌ ಮಾತನಾಡಿ, ಕ್ರಿಯಾಶೀಲ ಮನಸ್ಸುಗಳೊಂದಿಗೆ ವಿಜ್ಞಾನವನ್ನು ಜನರ ಬಳಿಗೆ ತೆಗೆದುಕೊಂಡು ಹೋಗುವ ಉದ್ದೇಶವನ್ನು ಈ ಮಕ್ಕಳ ವಿಜ್ಞಾನ ಹಬ್ಬ ಹೊಂದಿದೆ. ಕಲಿಕೆ ಒಂದು ಸಾಮಾಜಿಕ ಪ್ರಕ್ರಿಯೆಯಾಗಿದ್ದು, ಮಗುವಿನ ಕಲಿಕೆಯ ಅಡಿಪಾಯವಿರುವುದು ಆ ಮಗು ತನ್ನ ಸುತ್ತಲಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂವಹನಗಳಲ್ಲಿಹೇಗೆ ಮತ್ತು ಎಷ್ಟು ಭಾಗವಹಿಸಲಿದೆ ಎನ್ನುವುದರ ಮೇಲೆ ಎನ್ನುವುದನ್ನು ನಾವಿಂದು ಅರಿತುಕೊಳ್ಳಬೇಕಿದೆ ಎಂದರು.

ಎಸ್‌ಡಿಎಂಸಿ ಉಪಾಧ್ಯಕ್ಷೆ ಸುಜಾತಾ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಡಾ.ಬಿ.ಎಂ.ಬೇವಿನಮರದ, ಮೋಹನಕುಮಾರ, ಶೇಖರ್‌ ಹಂಚಿನಮನಿ, ಆನಂದ ಕುರಮಿ, ಡಿ.ಎಂ.ನಾಯಕ, ಉಮೇಶ ಅಂಗಡಿ, ಗೌರಮ್ಮ ಸೀಮಿ, ಮಾಲಾ ಹರಿಜನ, ಕಲಾವತಿ, ಸದ್ಗುರು ಭಟ್‌, ಎಫ್‌.ಆರ್‌.ಈಳಿಗೇರ, ಎಸ್‌.ಪಿ.ಪೂಜಾರ, ದಾವಲ್‌ಮಲಿಕ್‌ ಇಂಗಳಗಿ, ಆರ್‌.ಬಿ.ರೆಡ್ಡಿ, ನಾಗರಾಜ್‌ ಕ್ಯಾಬಳ್ಳಿ ಸೇರಿದಂತೆ ಇನ್ನಿತರರು ಇದ್ದರು. ಮುಖ್ಯಶಿಕ್ಷಕ ಕೆ.ಎಂ.ಗುರನಳ್ಳಿ ಸ್ವಾಗತಿಸಿದರು. ಸಂತೋಷ್‌ ಬಿದರಗಡ್ಡೆ ನಿರೂಪಿಸಿದರು. ಅಚ್ಯುತ್‌ ನಾಯ್ಕ ವಂದಿಸಿದರು. ಇದೇ ಸಂದರ್ಭದಲ್ಲಿಗ್ರಾಮದ ಪ್ರಮುಖ ಬೀದಿಗಳಲ್ಲಿಮೆರವಣಿಗೆ ನಡೆಯಿತು. ವಿದ್ಯಾರ್ಥಿನಿಯರು ಪೂರ್ಣಕುಂಭ ಹೊತ್ತು ಸಾಗಿ, ಗಮನ ಸೆಳೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ