ಆ್ಯಪ್ನಗರ

ಕುಸಿದು ವರ್ಷ ಆತು, ಇಲ್ಲ ದುರಸ್ತಿ ಮಾತು

ಹಾವೇರಿ :ಈ ಎರಡೂ ಪಾದಚಾರಿ ಸೇತುವೆಗಳು ಕುಸಿದು ಒಂದು ವರ್ಷ ಗತಿಸಲಿದೆ. ಅಪಾಯಕ್ಕೆ ಆಹ್ವಾನ ನೀಡುವ ಆತಂಕದ ಸ್ಥಿತಿ ಇದ್ದರೂ, ಈ ವರೆಗೂ ದುರಸ್ತಿ ಭಾಗ್ಯ ಕಾಣದಿರುವುದು ಇಲಾಖೆ ದಿವ್ಯ ನಿರ್ಲಕ್ಷ್ಯಕ್ಕೆ ತಾಜಾ ಉದಾಹರಣೆ.

Vijaya Karnataka 13 Sep 2018, 5:00 am
ಹಾವೇರಿ :ಈ ಎರಡೂ ಪಾದಚಾರಿ ಸೇತುವೆಗಳು ಕುಸಿದು ಒಂದು ವರ್ಷ ಗತಿಸಲಿದೆ. ಅಪಾಯಕ್ಕೆ ಆಹ್ವಾನ ನೀಡುವ ಆತಂಕದ ಸ್ಥಿತಿ ಇದ್ದರೂ, ಈ ವರೆಗೂ ದುರಸ್ತಿ ಭಾಗ್ಯ ಕಾಣದಿರುವುದು ಇಲಾಖೆ ದಿವ್ಯ ನಿರ್ಲಕ್ಷ್ಯಕ್ಕೆ ತಾಜಾ ಉದಾಹರಣೆ.
Vijaya Karnataka Web the year is collapsing no repair speech
ಕುಸಿದು ವರ್ಷ ಆತು, ಇಲ್ಲ ದುರಸ್ತಿ ಮಾತು


ರಾಣೇಬೆನ್ನೂರ ತಾಲೂಕು ಮೆಡ್ಲೇರಿ-ಅರೇಮಲ್ಲಾಪುರ ಮತ್ತು ಕೋಣನತಂಬಿಗಿ-ಹಿರೇಬಿದರಿ ಮಾರ್ಗದ ರಸ್ತೆಗಳಲ್ಲಿ ನಿರ್ಮಿಸಿರುವ ಪಾದಚಾರಿ ಸೇತುವೆಗಳು ಕುಸಿದಿವೆ. ಈ ಮಾರ್ಗವಾಗಿ ನಿತ್ಯ ಸಂಚರಿಸುವ ಜನರು ಜೀವ ಭಯದಲ್ಲೇ ದಾಟುವುದು ಅನಿವಾರ್ಯವಾಗಿದೆ. ಇಂಥ ದುಸ್ಥಿತಿಯಲ್ಲಿರುವ ರಸ್ತೆಗಳನ್ನು ದುರಸ್ತಿಗೊಳಿಸಲು ಮುಂದಾಗದ ಕ್ಷೇತ್ರದ ಶಾಸಕ ಮತ್ತು ರಾಜ್ಯದ ಅರಣ್ಯ ಸಚಿವ ಆರ್‌.ಶಂಕರ, ತಾಲೂಕ ಆಡಳಿತ ಹಾಗೂ ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ಹಿಡಿ ಶಾಪ ಹಾಕುತ್ತಿದ್ದಾರೆ.

ಕೆರೆ ಒಡೆದು ಸೇತುವೆ ಕುಸಿತ

ಕಳೆದ ವರ್ಷ ಅಕ್ಟೋಬರ್‌ 14ರಂದು ಸುರಿದ ವರ್ಷಧಾರೆಗೆ ಮೆಡ್ಲೇರಿ-ಅರೇಮಲ್ಲಾಪುರ ಮಧ್ಯದ ಅರೆಮಲ್ಲಾಪುರದ ಕೆರೆ ಭರ್ತಿಯಾಗಿದೆ. ನೀರಿನ ರಭಸಕ್ಕೆ ಒಡ್ಡು ಒಡೆದ ಪರಿಣಾಮ ಈ ಸೇತುವೆ ಅರ್ಧ ಕೊಚ್ಚಿ ಹೋಗಿ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಇದೇ ಸಂದರ್ಭದಲ್ಲಿ ಕೋಣನತಂಬಿಗಿ-ಹಿರೇಬಿದರಿ ರಸ್ತೆಯಲ್ಲಿರುವ ಪಾದಚಾರಿ ಸೇತುವೆಯ ಅಂಚಿನ ಭಾಗ ಕುಸಿದಿದೆ. ಭಾರದ ವಾಹನ ಸಂಚರಿಸಿದರೆ ಸೇತುವೆ ಸಂಪೂರ್ಣ ಕುಸಿಯುವ ಆತಂಕ ಇದ್ದೇ ಇದೆ. ಹಗಲು ಹೊತ್ತಲ್ಲೇ ಸಂಚರಿಸಲು ಪ್ರಯಾಣಿಕರು ಭಯ ಪಡುವಂತಾಗಿದೆ. ರಾತ್ರಿ ಯಾರೂ ಧೈರ್ಯ ತೋರುವುದಿಲ್ಲ.

ರಸ್ತೆ ಗೊಂದಲ

ಈ ಎರಡೂ ರಸ್ತೆಗಳು ಜಿಲ್ಲಾ ಪಂಚಾಯಿತಿಗೆ ಸೇರಿವೆಯೇ? ಅಥವಾ ಲೋಕೋಪಯೋಗಿ ಇಲಾಖೆಯದ್ದೇ? ಎನ್ನುವ ಪ್ರಶ್ನೆಗೆ ಗ್ರಾಮಸ್ಥರಲ್ಲಿ ಉತ್ತರವಿಲ್ಲ. ಈ ಎರಡೂ ಇಲಾಖೆ ಎಂಜನಿಯರ್‌ಗೆ ದೂರವಾಣಿ ಮೂಲಕ ಸಂಪರ್ಕಿಸಿದರೂ, ಯಾರೊಬ್ಬರ ಬಳಿಯಲ್ಲೂ ಉತ್ತರವಿಲ್ಲದಿದ್ದುದು ಅಚ್ಚರಿ ಜತೆಗೆ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.

ಹಣವೇ ಇಲ್ಲ

ಈ ಸೇತುವೆಗಳು ಕುಸಿದು ವರ್ಷ ಗತಿಸಿದೆ. ವಿಪತ್ತು ನಿರ್ವಹಣೆ ಅನುದಾನದಡಿ ಕಾಮಗಾರಿ ಕೈಗೆತ್ತಿಕೊಳ್ಳಲು ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಜಿಲ್ಲಾಡಳಿತ ಅಗತ್ಯ ಅನುದಾನ ನೀಡದಿರುವ ಕಾರಣ ನನೆಗುದಿಗೆ ಬಿದ್ದಿದೆ ಎನ್ನುವ ಅಸಹಾಯಕತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳದ್ದು. ನಿತ್ಯ ಅಪಾಯದ ಗಂಟೆ ಬಾರಿಸುವ ಪಾದಚಾರಿ ಸೇತುವೆಗಳ ದುರಸ್ತಿಗೆ ಆದ್ಯತೆ ನೀಡದಿರುವುದು ಗ್ರಾಮಸ್ಥರ ಆಕ್ರೋಶಕ್ಕೂ ಕಾರಣವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ