ಅಕ್ಕಿಆಲೂರು: ರಂಗಭೂಮಿ ಹಲವು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲ ಪರಿಣಾಮಕಾರಿ ಮಾಧ್ಯಮವಾಗಿದೆ. ಜೀವಂತಿಕೆ ಹೊಂದಿರುವ ಈ ಮಾಧ್ಯಮ ಆಧುನಿಕತೆಯ ಅಬ್ಬರಕ್ಕೆ ಸಿಲುಕಿ ಅವನತಿಯ ಹಾದಿಯಲ್ಲಿರುವುದು ನೋವಿನ ಸಂಗತಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ್ ಮಾನೆ ಕಳವಳ ವ್ಯಕ್ತಪಡಿಸಿದರು.
ಕಲಕೇರಿ ತಾಂಡಾದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಸಂತ ಸೇವಾಲಾಲ ಕಲಾ ನಾಟ್ಯ ಸಂಘದ ಆಶ್ರಯದಲ್ಲಿ ಊರಿಗೆ ಕಾಲಿಟ್ಟ ಹುಲಿ ಸಾಮಾಜಿಕ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಸಂದರ್ಭದಲ್ಲಿ ಕ್ರೌರ್ಯ, ಹಿಂಸೆ ಮಾರ್ಧನಿಸುತ್ತಿದೆ. ಮಾನವೀಯ ಸಂಬಂಧ ಪರಸ್ಪರ ಬೆಲೆ ಕಳೆದುಕೊಳ್ಳುತ್ತಿವೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ರಂಗಭೂಮಿ ಚಟುವಟಿಕೆ ಮೂಲಕ ಸಂಬಂಧ ಗಟ್ಟಿಗೊಳಿಸುವ ಕಾರ್ಯ ನಡೆಯಬೇಕಿದೆ. ಆಧುನಿಕತೆ ಅಬ್ಬರದ ಮಧ್ಯೆಯೂ ರಂಗಭೂಮಿ ಕಳೆದು ಹೋಗಲು ಬಿಡದೇ ಸಂರಕ್ಷಿಸುವಲ್ಲಿ ಯುವ ಸಮೂಹ ಗಮನ ಹರಿಸಬೇಕಿದೆ ಎಂದ ಅವರು, ಸೂಕ್ತ ಪ್ರೋತ್ಸಾಹ ಕೊರತೆಯಿಂದ ರಂಗಭೂಮಿ ಕಲಾವಿದರು ಸಂಕಷ್ಟದ ಸ್ಥಿತಿಯಲ್ಲಿದ್ದು, ಅಂಥ ಕಲಾವಿದರ ನೆರವಿಗೆ ಸ್ಪಂದಿಸುವಂತೆ ಕರೆ ನೀಡಿದರು.
ಹೇರೂರಿನ ಗುಬ್ಬಿ ನಂಜುಂಡೇಶ್ವರ ಮಠದ ನಂಜುಂಡ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಸಾಮರಸ್ಯದ ವಾತಾವರಣ ನಿರ್ಮಿಸುವಲ್ಲಿ ರಂಗ ಚಟುವಟಿಕೆ ಪೂರಕವಾಗಿವೆ. ಜತೆಗೆ ಹಳಸಿ ಹೋಗಿರುವ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲಿವೆ. ನಿತ್ಯದ ಜಂಜಾಟಗಳಿಂದ ಬಸವಳಿದಿರುವ ಮನಸ್ಸುಗಳಿಗೆ ನವೋಲ್ಲಾಸ ನೀಡಲಿವೆ ಎಂದು ಹೇಳಿದರು.
ಜಿಪಂ ಸದಸ್ಯೆ ಗೌರಮ್ಮ ಶೇತಸನದಿ, ಮುಖಂಡರಾದ ಮಹದೇವಪ್ಪ ಬಾಗಸರ, ಅಜ್ಜಪ್ಪ ಶಿರಳ್ಳಿ, ಭೀಮಣ್ಣ ಲಮಾಣಿ, ಡಾ.ಸುನೀಲ್ ಹಿರೇಮಠ, ಆದರ್ಶ ಶೆಟ್ಟಿ, ಅನಂತವಿಕಾಸ್ ನಿಂಗೋಜಿ, ಯಲ್ಲಪ್ಪ ಆಲೂರ, ಚಂದ್ರಪ್ಪ ದೊಡ್ಡಮನಿ, ರವಿ ಕಾರಬಾರಿ, ಭೀಮಪ್ಪ ಬಣಕಾರ, ಈರಪ್ಪ ಮಲ್ಲಿಗಾರ, ಚನ್ನಪ್ಪ ಕರೆಕ್ಯಾತನಹಳ್ಳಿ, ರಾಮಪ್ಪ ಕರೆಕ್ಯಾತನಹಳ್ಳಿ, ಮಲ್ಲಪ್ಪ ಬ್ಯಾಗವಾದಿ, ಭೋಜಪ್ಪ ಮಳವಳ್ಳಿ, ಜಾನಕವ್ವ ದೊಡ್ಡಮನಿ, ಯಂಕಪ್ಪ ಕರೆಕ್ಯಾತನಹಳ್ಳಿ, ಸುಬ್ಬಣ್ಣ ಮಲ್ಲಿಗಾರ, ನಾಗೇಶ ದೊಡ್ಡಮನಿ, ಚಂದ್ರಪ್ಪ ಬಣಕಾರ ಸೇರಿದಂತೆ ಇನ್ನಿತರರಿದ್ದರು.
ಕಲಕೇರಿ ತಾಂಡಾದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಸಂತ ಸೇವಾಲಾಲ ಕಲಾ ನಾಟ್ಯ ಸಂಘದ ಆಶ್ರಯದಲ್ಲಿ ಊರಿಗೆ ಕಾಲಿಟ್ಟ ಹುಲಿ ಸಾಮಾಜಿಕ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಸಂದರ್ಭದಲ್ಲಿ ಕ್ರೌರ್ಯ, ಹಿಂಸೆ ಮಾರ್ಧನಿಸುತ್ತಿದೆ. ಮಾನವೀಯ ಸಂಬಂಧ ಪರಸ್ಪರ ಬೆಲೆ ಕಳೆದುಕೊಳ್ಳುತ್ತಿವೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ರಂಗಭೂಮಿ ಚಟುವಟಿಕೆ ಮೂಲಕ ಸಂಬಂಧ ಗಟ್ಟಿಗೊಳಿಸುವ ಕಾರ್ಯ ನಡೆಯಬೇಕಿದೆ. ಆಧುನಿಕತೆ ಅಬ್ಬರದ ಮಧ್ಯೆಯೂ ರಂಗಭೂಮಿ ಕಳೆದು ಹೋಗಲು ಬಿಡದೇ ಸಂರಕ್ಷಿಸುವಲ್ಲಿ ಯುವ ಸಮೂಹ ಗಮನ ಹರಿಸಬೇಕಿದೆ ಎಂದ ಅವರು, ಸೂಕ್ತ ಪ್ರೋತ್ಸಾಹ ಕೊರತೆಯಿಂದ ರಂಗಭೂಮಿ ಕಲಾವಿದರು ಸಂಕಷ್ಟದ ಸ್ಥಿತಿಯಲ್ಲಿದ್ದು, ಅಂಥ ಕಲಾವಿದರ ನೆರವಿಗೆ ಸ್ಪಂದಿಸುವಂತೆ ಕರೆ ನೀಡಿದರು.
ಹೇರೂರಿನ ಗುಬ್ಬಿ ನಂಜುಂಡೇಶ್ವರ ಮಠದ ನಂಜುಂಡ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಸಾಮರಸ್ಯದ ವಾತಾವರಣ ನಿರ್ಮಿಸುವಲ್ಲಿ ರಂಗ ಚಟುವಟಿಕೆ ಪೂರಕವಾಗಿವೆ. ಜತೆಗೆ ಹಳಸಿ ಹೋಗಿರುವ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲಿವೆ. ನಿತ್ಯದ ಜಂಜಾಟಗಳಿಂದ ಬಸವಳಿದಿರುವ ಮನಸ್ಸುಗಳಿಗೆ ನವೋಲ್ಲಾಸ ನೀಡಲಿವೆ ಎಂದು ಹೇಳಿದರು.
ಜಿಪಂ ಸದಸ್ಯೆ ಗೌರಮ್ಮ ಶೇತಸನದಿ, ಮುಖಂಡರಾದ ಮಹದೇವಪ್ಪ ಬಾಗಸರ, ಅಜ್ಜಪ್ಪ ಶಿರಳ್ಳಿ, ಭೀಮಣ್ಣ ಲಮಾಣಿ, ಡಾ.ಸುನೀಲ್ ಹಿರೇಮಠ, ಆದರ್ಶ ಶೆಟ್ಟಿ, ಅನಂತವಿಕಾಸ್ ನಿಂಗೋಜಿ, ಯಲ್ಲಪ್ಪ ಆಲೂರ, ಚಂದ್ರಪ್ಪ ದೊಡ್ಡಮನಿ, ರವಿ ಕಾರಬಾರಿ, ಭೀಮಪ್ಪ ಬಣಕಾರ, ಈರಪ್ಪ ಮಲ್ಲಿಗಾರ, ಚನ್ನಪ್ಪ ಕರೆಕ್ಯಾತನಹಳ್ಳಿ, ರಾಮಪ್ಪ ಕರೆಕ್ಯಾತನಹಳ್ಳಿ, ಮಲ್ಲಪ್ಪ ಬ್ಯಾಗವಾದಿ, ಭೋಜಪ್ಪ ಮಳವಳ್ಳಿ, ಜಾನಕವ್ವ ದೊಡ್ಡಮನಿ, ಯಂಕಪ್ಪ ಕರೆಕ್ಯಾತನಹಳ್ಳಿ, ಸುಬ್ಬಣ್ಣ ಮಲ್ಲಿಗಾರ, ನಾಗೇಶ ದೊಡ್ಡಮನಿ, ಚಂದ್ರಪ್ಪ ಬಣಕಾರ ಸೇರಿದಂತೆ ಇನ್ನಿತರರಿದ್ದರು.