ಆ್ಯಪ್ನಗರ

ಕಾನೂನು ಬೇಡ ಮಾನವೀಯತೆ ಇರಲಿ: ಶಾಸಕ ಬೊಮ್ಮಾಯಿ

ಶಿಗ್ಗಾವಿ: ಎಲ್ಲಿ ಕಾನೂನು ಹಿಡಿದು ಕೆಲಸ ಮಾಡಬೇಕೊ ಅಲ್ಲಿ ಕಾನೂನು ಹಿಡಿದು ಕೆಲಸ ಮಾಡಲ್ಲ. ಕಣ್ಣು ಮುಚ್ಚಿ ಕುಳಿತೀರಿ.. ಎಲ್ಲಿ ಮಾನವೀಯತೆ ದೃಷ್ಟಿಯಿಂದ ಉದಾರವಾದ ಕೆಲಸ ಮಾಡಬೇಕು ಅಲ್ಲಿ ಕಾನೂನಿನ ಅಳತೆಗೋಲನ್ನು ಹಾಕುತ್ತೀರಿ. ಪ್ರಕೃತಿ ವಿಕೋಪಕ್ಕೆ ನಲುಗಿದ ಬಡವರ ಕಷ್ಟ, ನಷ್ಟವನ್ನು ಕಣ್ಣಾರೆ ಕಂಡು ಕರುಳು ಕಿತ್ತು ಬರುತ್ತಿದೆ ಎಂದು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ವಿರುದ್ಧ ಶಾಸಕ ಬಸವರಾಜ ಬೊಮ್ಮಾಯಿ ಅಕ್ರೋಶ ವ್ಯಕ್ತಪಡಿಸಿದರು.

Vijaya Karnataka 11 Aug 2019, 5:00 am
ಶಿಗ್ಗಾವಿ: ಎಲ್ಲಿ ಕಾನೂನು ಹಿಡಿದು ಕೆಲಸ ಮಾಡಬೇಕೊ ಅಲ್ಲಿ ಕಾನೂನು ಹಿಡಿದು ಕೆಲಸ ಮಾಡಲ್ಲ. ಕಣ್ಣು ಮುಚ್ಚಿ ಕುಳಿತೀರಿ.. ಎಲ್ಲಿ ಮಾನವೀಯತೆ ದೃಷ್ಟಿಯಿಂದ ಉದಾರವಾದ ಕೆಲಸ ಮಾಡಬೇಕು ಅಲ್ಲಿ ಕಾನೂನಿನ ಅಳತೆಗೋಲನ್ನು ಹಾಕುತ್ತೀರಿ. ಪ್ರಕೃತಿ ವಿಕೋಪಕ್ಕೆ ನಲುಗಿದ ಬಡವರ ಕಷ್ಟ, ನಷ್ಟವನ್ನು ಕಣ್ಣಾರೆ ಕಂಡು ಕರುಳು ಕಿತ್ತು ಬರುತ್ತಿದೆ ಎಂದು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ವಿರುದ್ಧ ಶಾಸಕ ಬಸವರಾಜ ಬೊಮ್ಮಾಯಿ ಅಕ್ರೋಶ ವ್ಯಕ್ತಪಡಿಸಿದರು.
Vijaya Karnataka Web HVR-9SGN-1


ಶನಿವಾರ ತಹಸೀಲ್ದಾರ ಕಚೇರಿ ಆಡಳಿತ ಭವನದಲ್ಲಿ ನಡೆದ ಶಿಗ್ಗಾವಿ-ಸವಣೂರು ತಾಲೂಕು ಮಟ್ಟದ ಅತೀವೃಷ್ಟಿ ಮತ್ತು ವಿಪತ್ತು ಸಮಿತಿ ಅಧಿಕಾರಿಗಳ ಸಭೆಯಲ್ಲಿ ಅಕ್ರೋಶ ವ್ಯಕ್ತಪಡಿಸಿದ ಅವರು, ಜಿಲ್ಲೆಯಲ್ಲಿ ಹೆಚ್ಚು ಮಳೆ ಮತ್ತು ಹಾನಿ ಶಿಗ್ಗಾವಿ-ಸವಣೂರು ತಾಲೂಕಿನಲ್ಲಿಯಾಗಿದ್ದರೂ ಇದನ್ನು ಒಪ್ಪಿಕೊಳ್ಳುವ ಮನಸ್ಥಿತಿ ತಾಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳಲ್ಲಿದೆ. ಅಷ್ಟೇ ಕೃಷ್ಣ ನದಿಯ ಪ್ರವಾಹದಿಂದ ಬೆಳಗಾವಿ, ಬಾಗಲಕೋಟಿ ಜಿಲ್ಲೆಯಲ್ಲಾದ ಹಾನಿಗಿಂತಲೂ ಇಲ್ಲಿ ಹೆಚ್ಚಾಗಿದೆ ಎಂದರು.

ಶೇ.75ರಷ್ಟು ಬಡವರು, ರೈತರಿಗೆ ತೊಂದರೆಯಾಗಿದೆ. ಅಧಿಕಾರಿಗಳು ಇದನ್ನು ಮನಗೊಂಡು ಮಾನವೀಯತೆ ದೃಷ್ಟಿಯಿಂದ ಕೆಲಸ ಮಾಡಿ. ಜನರ ಸಮಸ್ಯೆಗೆ ಕಿವಿಗೊಡಿ. ನಿಮ್ಮಿಂದ ಆಗಲ್ಲ ಎನ್ನುವುದಾದರೇ ಹೇಳಿ, ನಾವು ಜನರಿಗೆ ತಿಳಿಸುತ್ತೇವೆ. ಸರಕಾರ ಇದರ ಬಗ್ಗೆ ನಿಮಗೆ ಏನು ಹೇಳುತ್ತದೆ ನೋಡೋÜಣ ಎಂದು ಗುಡುಗಿದರು.

ಎರಡ್ಮೂರು ದಿನಗಳಿಂದ 50 ನೆರೆ ಪ್ರದೇಶ, ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿದ್ದೇನೆ. ಅಲ್ಲಿ ಕಷ್ಟ, ನಷ್ಟವನ್ನು ಕಣ್ಣಾರೆ ನೋಡಿದ್ದೇನೆ. ಜನರ ಸಮಸ್ಯೆ ಆಲಿಸಿದ್ದೇನೆ. ಹೀಗಾಗಿ ತುರ್ತಾಗಿ ಪರಿಹಾರ ವಿತರಿಸಬೇಕು. ಬಡವರ ಮನೆ ಎರಡು ಗೋಡೆಗಳು ಬಿದ್ದು ಹೋಗಿವೆ. ಅವನ್ನು ಸಂಪೂರ್ಣ ಹಾನಿ ಎಂದು ಪರಿಗಣಿಸಿ ವರದಿ ಸಲ್ಲಿಸಬೇಕು. ಸಾರ್ವಜನಿಕ ಮಠ, ಮಂದಿರ, ಮಸೀದಿ, ಆಸ್ತಿ ಅಂಗನವಾಡಿ, ಶಾಲೆ ಕೊಠಡಿ ಹಾನಿ ಸರ್ವೇ ಮಾಡಬೇಕು.

ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಶೇ.90 ರಷ್ಟು ಬೆಳೆ ಹಾನಿಯಾಗಿದೆ. ಅಧಿಕಾರಿಗಳು ಸರ್ವೇ ಕೈಗೊಳ್ಳಬೇಕು. ನೀರಲ್ಲಿ ನಿಂತ ಮನೆಗಳನ್ನು ಶಿಥಿಲಗೊಂಡಿವೆ ಎಂದು ಪರಿಗಣಿಸಿ ಹಾನಿಗೊಳಗಾದ ಸರ್ವೇಯಲ್ಲಿ ಸೇರಿಸಿ ಎಂದು ಸೂಚಿಸಿದರು. ಕುಡಿಯವ ನೀರಿನ ಸಮಸ್ಯೆ ಎದುರಿಸುವ ಗ್ರಾಮಗಳಿಗೆ ತ್ವರಿತ ಪರಿಹಾರ ಕಲ್ಪಿಸಿ. ಮಳೆಗೆ ಕಿತ್ತು ಹೋದ ಪಿಡಬ್ಲುಡಿ, ಜಿಪಂ.ರಸ್ತೆಗಳ ಪಟ್ಟಿ ಮಾಡಿ ಅಭಿವೃದ್ಧಿಗೆ ಕ್ರೀಯಾ ಯೋಜನೆ ಸಿದ್ಧಗೊಳಿಸಿ ಒಪ್ಪಿಗೆ ಪಡೆಯವಂತೆ ಸಲಹೆ ನೀಡಿದರು.

ಜಿಪಂ ಸಿಇಒ ಕೆ.ಲೀಲಾವತಿ, ಸವಣೂರ ಉಪ ವಿಭಾಗಾಧಿಕಾರಿ ಬೋಯಾರ್‌ ಹರ್ಷಲ್‌ ನಾರಾಯಣರಾವ್‌, ತಹಸೀಲ್ದಾರ ಚಂದ್ರಶೇಖರ ಗಾಳಿ, ಜಿಪಂ.ಸದಸ್ಯ ಬಸನಗೌಡ ದೇಸಾಯಿ, ಸವಣೂರ ತಹಸೀಲ್ದಾರ ಸಜ್ಜನ ಮತ್ತಿತರರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ