ಆ್ಯಪ್ನಗರ

ಈ ಸಲ ಎಸ್ಸೆಸ್ಸೆಲ್ಸಿ ನಂ.1 ಪಟ್ಟ ಬಹಳ ಕಷ್ಟ

ಬ್ಯಾಡಗಿ: ಇನ್ನೇನೂ ಕೆಲವೇ ದಿನಗಳಲ್ಲಿ ಎಸ್ಸೆಸ್ಸಲ್ಸಿ ಪರೀಕ್ಷೆ ಆರಂಭವಾಗಲಿದ್ದು, ಶಿಕ್ಷ ಣ ಇಲಾಖೆ ಅಧಿಕಾರಿಗಳು ಸಮರ್ಪಕ ತರಬೇತಿ ಹಾಗೂ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಬಗ್ಗೆ ವಿಶೇಷ ಕಾರಾರ‍ಯಗಾರಗಳನ್ನು ನಡೆಸಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದ್ದು, ಜಿಲ್ಲೆಯಲ್ಲಿ ಕಳೆದ ಬಾರಿ ಪಡೆದಿದ್ದ ನಂ.1 ಸ್ಥಾನ ಪಟ್ಟವನ್ನು ಬ್ಯಾಡಗಿ ಉಳಿಸಿಕೊಳ್ಳುತ್ತಾ ಎಂಬ ಸಂಶಯ ಕಾಡುತ್ತಿದೆ.

Vijaya Karnataka 15 Mar 2019, 5:00 am
ಬ್ಯಾಡಗಿ: ಇನ್ನೇನೂ ಕೆಲವೇ ದಿನಗಳಲ್ಲಿ ಎಸ್ಸೆಸ್ಸಲ್ಸಿ ಪರೀಕ್ಷೆ ಆರಂಭವಾಗಲಿದ್ದು, ಶಿಕ್ಷ ಣ ಇಲಾಖೆ ಅಧಿಕಾರಿಗಳು ಸಮರ್ಪಕ ತರಬೇತಿ ಹಾಗೂ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಬಗ್ಗೆ ವಿಶೇಷ ಕಾರಾರ‍ಯಗಾರಗಳನ್ನು ನಡೆಸಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದ್ದು, ಜಿಲ್ಲೆಯಲ್ಲಿ ಕಳೆದ ಬಾರಿ ಪಡೆದಿದ್ದ ನಂ.1 ಸ್ಥಾನ ಪಟ್ಟವನ್ನು ಬ್ಯಾಡಗಿ ಉಳಿಸಿಕೊಳ್ಳುತ್ತಾ ಎಂಬ ಸಂಶಯ ಕಾಡುತ್ತಿದೆ.
Vijaya Karnataka Web this time the essexesse no 1 is very difficult
ಈ ಸಲ ಎಸ್ಸೆಸ್ಸೆಲ್ಸಿ ನಂ.1 ಪಟ್ಟ ಬಹಳ ಕಷ್ಟ


ಇದೇ ತಿಂಗಳ 21 ರಿಂದ ಪ್ರಾರಂಭವಾಗಲಿರುವ ಎಸ್ಸೆಸ್ಸಲ್ಸಿ ಪರೀಕ್ಷೆಗೆ ಸಾವಿರಾರು ವಿದ್ಯಾರ್ಥಿಗಳು ತಯಾರಿ ನಡೆಸಿದ್ದಾರೆ. ಆದರೆ ಪರೀಕ್ಷೆಗೆ ಬೇಕಾದ ಸೂಕ್ತ ತರಬೇತಿ ಹಾಗೂ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪೂರ್ವ ಸಿದ್ಧತೆ ಕುರಿತಂತೆ ಕಾರಾರ‍ಯಗಾರಗಳನ್ನು ಇಲಾಖೆ ನಡೆಸಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

ನಂ.1 ಸ್ಥಾನ ಆಕಸ್ಮಿಕವೇ? :
ಶೈಕ್ಷ ಣಿಕವಾಗಿ ಬ್ಯಾಡಗಿ ತಾಲೂಕು ಕಳೆದ 4 ವರ್ಷಗಳಿಂದ ಉತ್ತಮ ಪಲಿತಾಂಶ ಕಂಡಿರಲಿಲ್ಲ. 2016-17 ರಲ್ಲಿ ಸಾಕಷ್ಟು ತರಬೇತಿ, ವಿಶೇಷ ತರಗತಿ ಸೇರಿದಂತೆ ಹಲವಾರು ತಯಾರಿ ನಡುವೆಯೂ ಬ್ಯಾಡಗಿ ತಾಲೂಕು ಜಿಲ್ಲೆಗೆ 2 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿತ್ತು. 2015-16 ರಲ್ಲಿ ಮೂರನೇ ಸ್ಥಾನಕ್ಕೆ ಸಮಾಧಾನ ಪಡುವಂತಾಗಿತ್ತು. ಆದರೆ ಕೆಲ ಬದಲಾವಣೆ ತಂದು ಕಳೆದ ಬಾರಿ ಜಿಲ್ಲೆಯಲ್ಲಿ ನಂ.1 ಸ್ಥಾನ ಪಡೆದಿತ್ತು. ಆದರೆ ಈ ಬಾರಿ ಜಿಲ್ಲೆಯಲ್ಲಿ ಆರೋಗ್ಯಕರ ಸ್ಪರ್ಧೆ ಏರ್ಪಟ್ಟಿದ್ದು ಇಲಾಖೆ ನಿರ್ಲಕ್ಷ ್ಯ ಧೋರಣೆಗೆ ನಂ.1 ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆಗಳಿವೆ ಎಂದು ತಜ್ಞರು ಹೇಳುತ್ತಿದ್ದಾರೆ.

1 ವರ್ಷ ಅವಧಿಯ ಬಿಇಒ: ಕಳೆದ ಬಾರಿ ಪರೀಕ್ಷೆಗೆ ಕೆಲವೇ ದಿನ ಬಾಕಿ ಇರುವಾಗ ಶಿಕ್ಷ ಣಾಧಿಕಾರಿ ಝಡ್‌.ಎಂ.ಖಾಜಿ ಡಯಟ್‌ಗೆ ವರ್ಗಾವಣೆಗೊಂಡರು. ಅವರ ಸ್ಥಾನಕ್ಕೆ ದಾವಣಗೆರೆಯ ಎಂ.ಮಂಜುನಾಥಸ್ವಾಮಿ ಹಾಜರಾಗಿದ್ದರು. ಅಲ್ಲಿಂದ ಮುಂದಿನ 15 ದಿನಗಳಲ್ಲಿ ಪರೀಕ್ಷೆ ನಡೆದು ಶಿಕ್ಷ ಕ ವರ್ಗದ ಶ್ರಮದಿಂದ ತಾಲೂಕು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿತ್ತು.

ಮಿಶನ್‌-10 ಬಿಇಒ ವರ್ಗಾವಣೆ: ಕಳೆದ ಒಂದು ವರ್ಷದಿಂದ ತಾಲೂಕನ್ನು ರಾಜ್ಯದಲ್ಲಿಯೇ 10ನೇ ಸ್ಥಾನದ ಒಳಗೆ ತರಲು 'ಮಿಶನ್‌-10' ಯೋಜನೆ ರೂಪಿಸಿದ್ದಾಗಿ ಬಿಇಒ ಎಂ.ಮಂಜುನಾಥಸ್ವಾಮಿ ಘೋಷಿಸಿದ್ದರು. ಆದರೆ, ನಂತರದ ದಿನಗಳಲ್ಲಿ ಮಂಜುನಾಥಸ್ವಾಮಿ ಹರಪನಹಳ್ಳಿಗೆ ವರ್ಗಾವಣೆಗೊಂಡಿದ್ದು, ಮಿಶನ್‌-10 ಉದ್ದೇಶ ಈಡೇರಿದೆಯೇ ಎಂಬುದು ಎಂಬುದು ಚರ್ಚೆಗೆ ಗ್ರಾಸವಾಗಿದೆ.

ಸರಣಿ ಪರೀಕ್ಷೆಯಲ್ಲಿ ಹಿನ್ನಡೆ? : ಎಸ್ಸೆಸ್ಸೆಲ್ಸಿ ಪರೀಕ್ಷೆಗೂ ಮುನ್ನ ಮಕ್ಕಳಲ್ಲಿನ ಗೊಂದಲ ನಿವಾರಿಸುವ ಮತ್ತು ಕಲಿಕಾ ಮಟ್ಟ ತಿಳಿಯುವ ನಿಟ್ಟಿನಲ್ಲಿ ಸರಣಿ ಪರೀಕ್ಷೆಗಳನ್ನು ಇಲಾಖೆ ನಡೆಸುತ್ತದೆ. ಆದರೆ ಆ ಪರೀಕ್ಷೆಯಲ್ಲಿ ಹಿನ್ನಡೆಯಾಗಿರುವ ಕುರಿತಂತೆ ಇಲಾಖೆಯ ಕೆಲವರು ಮಾತನಾಡಿಕೊಳ್ಳುತ್ತಿದ್ದು ಮಿಶನ್‌-10 ಯಶಸ್ವಿಯಾಗುವುದೇ ಎಂಬ ಸಂಶಯ ಮೂಡಿಸಿದೆ.

7 ಕೇಂದ್ರ 2006 ವಿದ್ಯಾರ್ಥಿಗಳು: ತಾಲೂಕಿನಾದ್ಯಂತ ಒಟ್ಟು 7 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು ಪಟ್ಟಣದ ಎಸ್‌ಜೆಜೆಎಂ ಹಾಗೂ ನೂತನ ಪೌಢಶಾಲೆ 2 ಕೇಂದ್ರದಲ್ಲಿ ಒಟ್ಟು 650 ವಿದ್ಯಾರ್ಥಿಗಳು ಹಾಗೂ ಚಿಕ್ಕಬಾಸೂರ, ಕಾಗಿನೆಲೆ, ಬಿಸಲಹಳ್ಳಿ, ಛತ್ರ, ಶಿಡೆನೂರಿನ ಗ್ರಾಮದಲ್ಲಿ ಅಂಬೇಡ್ಕರ ಪ್ರೌಢ ಶಾಲೆಯಲ್ಲಿ ಒಟ್ಟು 1356 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ