ಹಾವೇರಿ: ಧುಮ್ಮುಕ್ಕುವ ಜಲ ಪ್ರವಾಹ ಜಿಲ್ಲೆಯ 30 ಗ್ರಾಮಗಳನ್ನು ಕತ್ತಲ ಕೂಪಕ್ಕೆ ತಳ್ಳಿದೆ. 2503 ವಿದ್ಯುತ್ ಕಂಬಗಳು ಸಂಪೂರ್ಣ ಹಾಳಾಗಿವೆ. 389 ಟಿ.ಸಿ.ಗಳು ಜಲಾವೃತಗೊಂಡು ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. 58 ಕಿ.ಮೀ.ವರೆಗೆ ವಿದ್ಯುತ್ ತಂತಿ ನೆಲಕ್ಕುರುಳಿ ಹಾವೇರಿ ಹೆಸ್ಕಾಂ ವೃತ್ತಕ್ಕೆ ಬರೋಬ್ಬರಿ 6.11 ಕೋಟಿ ನಷ್ಟ ಸಂಭವಿಸಿದೆ.
ಜಿಲ್ಲಾದ್ಯಂತ ಆಗಸ್ಟ್ 6 ರಿಂದ ಆರಂಭಗೊಂಡಿರುವ ಜಡಿ ಮಳೆ ಐದು ದಿನಗಳಲ್ಲಿ ಜನ ಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ. ಅಹೋರಾತ್ರಿ ಎಡೆಬಿಡದೇ ಸುರಿದ ಧಾರಾಕಾರ ಮಳೆಗೆ ಸುಮಾರು 30 ಹಳ್ಳಿಗಳಿಗೆ ಕಳೆದ ಮೂರು ದಿನಗಳಿಂದ ವಿದ್ಯುತ್ ಸಂಚಾರ ಸ್ಥಗಿತಗೊಂಡು ಗ್ರಾಮಸ್ಥರು ಕತ್ತಲಲ್ಲೇ ಕಾಲ ಕಳೆಯುವಂತಾಗಿದೆ.
ಯಾವ ಹಳ್ಳಿಗಳು?
ಹಾವೇರಿ ಉಪ ವಿಭಾಗ: ವರದಾಹಳ್ಳಿ, ದಿಡಗೂರು, ಚಿಕ್ಕಹುಲ್ಲಾಳ, ಹಿರೇಹುಲ್ಲಾಳ, ತುಮರಿಕೊಪ್ಪ, ಅರೇಲಕ್ಮಾಪುರ, ಇನಾಮ ಲಕ್ಮಾಪುರ, ನೀರಲಗಿ, ಕಾಲವೇ ಕಲ್ಲಾಪುರ, ನೆಲ್ಲಿಬೀಡು, ಮನ್ನಂಗಿ, ಮೆಳ್ಳಾಗಟ್ಟಿ, ಕುಣಿಮೆಳ್ಳಳ್ಳಿ ಹಲಸೂರು, ನದಿ ನೀರಲಗಿ, ಹರಳಳ್ಳಿ, ಚಿಕ್ಕಮುಗದೂರು, ಹಿರೇಮುಗದೂರ, ಹಿರೇಮೆಳ್ಳಳ್ಳಿ ಮತ್ತು ಡೊಂಬರಮತ್ತೂರ.
ರಾಣೇಬೆನ್ನೂರ ಉಪ ವಿಭಾಗ: ಬೈರನಪಾದ, ಕಿರಿಗೇರಿ, ಕುಡಪಲಿ, ಹಳ್ಳೂರ, ಚಟ್ನಳ್ಳಿ, ಪುರದಕೇರಿ, ಕೋಡಮಗ್ಗಿ, ಮಾಸೂರ
ತಿಪ್ಪಾಯಿಕೊಪ್ಪ ಮತ್ತು ಬೈರನಪಾದ: 2503 ವಿದ್ಯುತ್ ಕಂಬ ನೆಲಕ್ಕೆ: ಹಾವೇರಿ ಹೆಸ್ಕಾಂ ವೃತ್ತದ ರಾಣೇಬೆನ್ನೂರ ಉಪ ವಿಭಾಗದಲ್ಲಿ 364 ಮತ್ತು ಹಾವೇರಿ ಉಪ ವಿಭಾಗದಲ್ಲಿ 369 ಸೇರಿದಂತೆ ಬರೋಬ್ಬರಿ 733 ವಿದ್ಯುತ್ ಕಂಬಗಳು ಸಂಪೂರ್ಣ ಹಾಳಾಗಿವೆ ರಾಣೇಬೆನ್ನೂರ ಉಪ ವಿಭಾಗದಲ್ಲಿ 277 ಮತ್ತು ಹಾವೇರಿ ಉಪ ವಿಭಾಗದಲ್ಲಿ 1493 ಸೇರಿದಂತೆ ಬರೋಬ್ಬರಿ 1770 ವಿದ್ಯುತ್ ಕಂಬಗಳು ನೀರಲ್ಲಿವೆ.
387 ಟಿ.ಸಿ.ಹಾನಿ: ಜಲ ಪ್ರವಾಹ ಕಾರಣಕ್ಕೆ ರಾಣೇಬೆನ್ನೂರ ಉಪ ವಿಭಾಗದಲ್ಲಿ 34 ಮತ್ತು ಹಾವೇರಿ ಉಪ ವಿಭಾಗದಲ್ಲಿ 14 ಸೇರಿದಂತೆ ಬರೋಬ್ಬರಿ 48 ಟಿ.ಸಿ.ಗಳು ಸಂಪೂರ್ಣ ಹಾಳಾಗಿವೆ. ಇದೇ ಸಂದರ್ಭದಲ್ಲಿ ರಾಣೇಬೆನ್ನೂರ ಉಪ ವಿಭಾಗದಲ್ಲಿ 43 ಮತ್ತು ಹಾವೇರಿ ಉಪ ವಿಭಾಗದಲ್ಲಿ 296 ಸೇರಿದಂತೆ ಒಟ್ಟು 339 ಟಿ.ಸಿ.ಗಳು ನೀರಲ್ಲಿರುವ ಕಾರಣಕ್ಕೆ ಸಂಪರ್ಕ ಕಡಿತಗೊಂಡಿದೆ.
58 ಕಿ.ಮೀ. ವಿದ್ಯುತ್ ತಂತಿ ನಷ್ಟ: ಸತತ ಮಳೆಯ ಕಾರಣ ಮತ್ತು ನೀರಿನ ರಭಸಕ್ಕೆ ವಿದ್ಯುತ್ ಕಂಬಗಳು ನೆಲಕಚ್ಚಿದ ಹಿನ್ನೆಲೆಯಲ್ಲಿ ಒಟ್ಟು 58 ಕಿ.ಮೀ. ಅಧಿಕ ವಿಸ್ತೀರ್ಣದಲ್ಲಿ ವಿದ್ಯುತ್ ತಂತಿ ನೆಲಕ್ಕೆ ಬಿದ್ದಿವೆ. ಈ ಪೈಕಿ ಹಾವೇರಿ ಉಪ ವಿಭಾಗದಲ್ಲಿ 2.95 ಕಿ.ಮೀ. ವಿದ್ಯುತ್ ತಂತಿ ನೆಲಕ್ಕುರುಳಿ ಸಂಪೂರ್ಣ ಹಾಳಾಗಿವೆ. ಇದೇ ರೀತಿ ರಾಣೇಬೆನ್ನೂರ ಉಪ ವಿಭಾಗದಲ್ಲಿ 2.4 ಕಿ.ಮೀ. ಮತ್ತು ಹಾವೇರಿ ಉಪ ವಿಭಾಗ ದಲ್ಲಿ 53.4 ಕಿ.ಮೀ. ಸೇರಿದಂತೆ ಬರೋಬ್ಬರಿ 55.8 ಕಿ.ಮೀ. ವಿಸ್ತೀರ್ಣದಲ್ಲಿ ವಿದ್ಯುತ್ ತಂತಿ ನೀರಲ್ಲೇ ಇವೆ.
6.11 ಕೋಟಿ ರೂ. ನಷ್ಟ: ಆಗಸ್ಟ್ 6 ರಿಂದ 10 ರ ವರೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ವಿವಿಧ ಕಾರಣಗಳಿಗಾಗಿ ಹಾವೇರಿ ವಿದ್ಯುತ್ ಪ್ರಸರಣಾ ನಿಗಮದ ಹಾವೇರಿ ವೃತ್ತಕ್ಕೆ ಬರೋಬ್ಬರಿ 6 ಕೋಟಿ 11 ಲಕ್ಷ ರೂ. ಸಂಭವಿಸಿದೆ ಎಂದು ವಿಭಾಗೀಯ ವೃತ್ತ ಅಧೀಕ್ಷಕ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
ಜಿಲ್ಲಾದ್ಯಂತ ಆಗಸ್ಟ್ 6 ರಿಂದ ಆರಂಭಗೊಂಡಿರುವ ಜಡಿ ಮಳೆ ಐದು ದಿನಗಳಲ್ಲಿ ಜನ ಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ. ಅಹೋರಾತ್ರಿ ಎಡೆಬಿಡದೇ ಸುರಿದ ಧಾರಾಕಾರ ಮಳೆಗೆ ಸುಮಾರು 30 ಹಳ್ಳಿಗಳಿಗೆ ಕಳೆದ ಮೂರು ದಿನಗಳಿಂದ ವಿದ್ಯುತ್ ಸಂಚಾರ ಸ್ಥಗಿತಗೊಂಡು ಗ್ರಾಮಸ್ಥರು ಕತ್ತಲಲ್ಲೇ ಕಾಲ ಕಳೆಯುವಂತಾಗಿದೆ.
ಯಾವ ಹಳ್ಳಿಗಳು?
ಹಾವೇರಿ ಉಪ ವಿಭಾಗ: ವರದಾಹಳ್ಳಿ, ದಿಡಗೂರು, ಚಿಕ್ಕಹುಲ್ಲಾಳ, ಹಿರೇಹುಲ್ಲಾಳ, ತುಮರಿಕೊಪ್ಪ, ಅರೇಲಕ್ಮಾಪುರ, ಇನಾಮ ಲಕ್ಮಾಪುರ, ನೀರಲಗಿ, ಕಾಲವೇ ಕಲ್ಲಾಪುರ, ನೆಲ್ಲಿಬೀಡು, ಮನ್ನಂಗಿ, ಮೆಳ್ಳಾಗಟ್ಟಿ, ಕುಣಿಮೆಳ್ಳಳ್ಳಿ ಹಲಸೂರು, ನದಿ ನೀರಲಗಿ, ಹರಳಳ್ಳಿ, ಚಿಕ್ಕಮುಗದೂರು, ಹಿರೇಮುಗದೂರ, ಹಿರೇಮೆಳ್ಳಳ್ಳಿ ಮತ್ತು ಡೊಂಬರಮತ್ತೂರ.
ರಾಣೇಬೆನ್ನೂರ ಉಪ ವಿಭಾಗ: ಬೈರನಪಾದ, ಕಿರಿಗೇರಿ, ಕುಡಪಲಿ, ಹಳ್ಳೂರ, ಚಟ್ನಳ್ಳಿ, ಪುರದಕೇರಿ, ಕೋಡಮಗ್ಗಿ, ಮಾಸೂರ
ತಿಪ್ಪಾಯಿಕೊಪ್ಪ ಮತ್ತು ಬೈರನಪಾದ: 2503 ವಿದ್ಯುತ್ ಕಂಬ ನೆಲಕ್ಕೆ: ಹಾವೇರಿ ಹೆಸ್ಕಾಂ ವೃತ್ತದ ರಾಣೇಬೆನ್ನೂರ ಉಪ ವಿಭಾಗದಲ್ಲಿ 364 ಮತ್ತು ಹಾವೇರಿ ಉಪ ವಿಭಾಗದಲ್ಲಿ 369 ಸೇರಿದಂತೆ ಬರೋಬ್ಬರಿ 733 ವಿದ್ಯುತ್ ಕಂಬಗಳು ಸಂಪೂರ್ಣ ಹಾಳಾಗಿವೆ ರಾಣೇಬೆನ್ನೂರ ಉಪ ವಿಭಾಗದಲ್ಲಿ 277 ಮತ್ತು ಹಾವೇರಿ ಉಪ ವಿಭಾಗದಲ್ಲಿ 1493 ಸೇರಿದಂತೆ ಬರೋಬ್ಬರಿ 1770 ವಿದ್ಯುತ್ ಕಂಬಗಳು ನೀರಲ್ಲಿವೆ.
387 ಟಿ.ಸಿ.ಹಾನಿ: ಜಲ ಪ್ರವಾಹ ಕಾರಣಕ್ಕೆ ರಾಣೇಬೆನ್ನೂರ ಉಪ ವಿಭಾಗದಲ್ಲಿ 34 ಮತ್ತು ಹಾವೇರಿ ಉಪ ವಿಭಾಗದಲ್ಲಿ 14 ಸೇರಿದಂತೆ ಬರೋಬ್ಬರಿ 48 ಟಿ.ಸಿ.ಗಳು ಸಂಪೂರ್ಣ ಹಾಳಾಗಿವೆ. ಇದೇ ಸಂದರ್ಭದಲ್ಲಿ ರಾಣೇಬೆನ್ನೂರ ಉಪ ವಿಭಾಗದಲ್ಲಿ 43 ಮತ್ತು ಹಾವೇರಿ ಉಪ ವಿಭಾಗದಲ್ಲಿ 296 ಸೇರಿದಂತೆ ಒಟ್ಟು 339 ಟಿ.ಸಿ.ಗಳು ನೀರಲ್ಲಿರುವ ಕಾರಣಕ್ಕೆ ಸಂಪರ್ಕ ಕಡಿತಗೊಂಡಿದೆ.
58 ಕಿ.ಮೀ. ವಿದ್ಯುತ್ ತಂತಿ ನಷ್ಟ: ಸತತ ಮಳೆಯ ಕಾರಣ ಮತ್ತು ನೀರಿನ ರಭಸಕ್ಕೆ ವಿದ್ಯುತ್ ಕಂಬಗಳು ನೆಲಕಚ್ಚಿದ ಹಿನ್ನೆಲೆಯಲ್ಲಿ ಒಟ್ಟು 58 ಕಿ.ಮೀ. ಅಧಿಕ ವಿಸ್ತೀರ್ಣದಲ್ಲಿ ವಿದ್ಯುತ್ ತಂತಿ ನೆಲಕ್ಕೆ ಬಿದ್ದಿವೆ. ಈ ಪೈಕಿ ಹಾವೇರಿ ಉಪ ವಿಭಾಗದಲ್ಲಿ 2.95 ಕಿ.ಮೀ. ವಿದ್ಯುತ್ ತಂತಿ ನೆಲಕ್ಕುರುಳಿ ಸಂಪೂರ್ಣ ಹಾಳಾಗಿವೆ. ಇದೇ ರೀತಿ ರಾಣೇಬೆನ್ನೂರ ಉಪ ವಿಭಾಗದಲ್ಲಿ 2.4 ಕಿ.ಮೀ. ಮತ್ತು ಹಾವೇರಿ ಉಪ ವಿಭಾಗ ದಲ್ಲಿ 53.4 ಕಿ.ಮೀ. ಸೇರಿದಂತೆ ಬರೋಬ್ಬರಿ 55.8 ಕಿ.ಮೀ. ವಿಸ್ತೀರ್ಣದಲ್ಲಿ ವಿದ್ಯುತ್ ತಂತಿ ನೀರಲ್ಲೇ ಇವೆ.
6.11 ಕೋಟಿ ರೂ. ನಷ್ಟ: ಆಗಸ್ಟ್ 6 ರಿಂದ 10 ರ ವರೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ವಿವಿಧ ಕಾರಣಗಳಿಗಾಗಿ ಹಾವೇರಿ ವಿದ್ಯುತ್ ಪ್ರಸರಣಾ ನಿಗಮದ ಹಾವೇರಿ ವೃತ್ತಕ್ಕೆ ಬರೋಬ್ಬರಿ 6 ಕೋಟಿ 11 ಲಕ್ಷ ರೂ. ಸಂಭವಿಸಿದೆ ಎಂದು ವಿಭಾಗೀಯ ವೃತ್ತ ಅಧೀಕ್ಷಕ ಎಂ.ಬಿ. ಪಾಟೀಲ ತಿಳಿಸಿದ್ದಾರೆ.