ಆ್ಯಪ್ನಗರ

ವ್ಯವಹಾರದಲ್ಲಿ ಪಾರದರ್ಶಕತೆ ಬಹುಮುಖ್ಯ

ರಾಣೇಬೆನ್ನೂರ : ಹಣಕಾಸು ಸಂಸ್ಥೆಗಳು ಯಶಸ್ಸು ಸಾಧಿಸಲು ವ್ಯವಹಾರದಲ್ಲಿಪಾರದರ್ಶಕತೆ ಬಹುಮುಖ್ಯ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.

Vijaya Karnataka 30 Dec 2019, 5:00 am
ರಾಣೇಬೆನ್ನೂರ : ಹಣಕಾಸು ಸಂಸ್ಥೆಗಳು ಯಶಸ್ಸು ಸಾಧಿಸಲು ವ್ಯವಹಾರದಲ್ಲಿಪಾರದರ್ಶಕತೆ ಬಹುಮುಖ್ಯ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.
Vijaya Karnataka Web 29RNR2_23
ರಾಣೇಬೆನ್ನೂರಿನ ಮೃತ್ಯುಂಜಯ ಕಲ್ಯಾಣಮಂಟಪದಲ್ಲಿಸುಕೋ ಬ್ಯಾಂಕಿನ ಬೆಳ್ಳಿ ಹಬ್ಬದ ಸಂಭ್ರಮಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಸುಕೋ ಸಂಜೆ ಕಾರ್ಯಕ್ರಮವನ್ನು ಶಾಸಕ ಅರುಣಕುಮಾರ ಪೂಜಾರ ಉದ್ಘಾಟಿಸಿದರು.


ನಗರದ ಮೃತ್ಯುಂಜಯ ಕಲ್ಯಾಣಮಂಟಪದಲ್ಲಿಶನಿವಾರ ರಾತ್ರಿ ಸುಕೋ ಬ್ಯಾಂಕಿನ ಬೆಳ್ಳಿ ಹಬ್ಬದ ಸಂಭ್ರಮಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಸುಕೋ ಸಂಜೆ ಕಾರ್ಯಕ್ರಮದಲ್ಲಿಮಾತನಾಡಿದರು. ಸಾರ್ವಜನಿಕರ ದುಡ್ಡಿನ ಬಗ್ಗೆ ಕಾಳಜಿ ವಹಿಸುವ ಹಾಗೂ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಬ್ಯಾಂಕುಗಳಿಗೆ ಗ್ರಾಹಕರಿಗೆ ಮನ್ನಣೆ ನೀಡುತ್ತಾರೆ. ಈ ನಿಟ್ಟಿನಲ್ಲಿಸುಕೋ ಬ್ಯಾಂಕ್‌ ಸಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಶಾಸಕ ಅರುಣಕುಮಾರ ಪೂಜಾರ ಕಾರ್ಯಕ್ರಮ ಉದ್ಘಾಟಿಸಿದರು. ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷ ಮನೋಹರ ಮಸ್ಕಿ ಅವರು ಬ್ಯಾಂಕ್‌ ಸ್ಥಾಪನೆಗೆ ಕಾರಣವಾದ ಸಂಗತಿ ಹಾಗೂ ಇದುವರೆಗೂ ನಡೆದುಬಂದ ಹಾದಿಯ ಕುರಿತು ಸವಿಸ್ತಾರವಾಗಿ ತಿಳಿಸಿದರು. ಬ್ಯಾಂಕಿನ ಅಧ್ಯಕ್ಷ ಮೋಹಿತ್‌ ಮಸ್ಕಿ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದ ಅಂಗವಾಗಿ ಯಶವಂತ ಸರದೇಶಪಾಂಡೆ ಅವರು ನಡೆಸಿಕೊಟ್ಟ ರಾಶಿಚಕ್ರ ಹಾಸ್ಯ ರಂಗ ಪ್ರಯೋಗ ಸಭೀಕರನ್ನು ನಗೆಗಡಲಲ್ಲಿತೆಲಿಸಿತು. ಕೆ.ವಿ.ಶ್ರೀನಿವಾಸ, ಗದಿಗೆಪ್ಪ ಹೊಟ್ಟಿಗೌಡ್ರ, ಕೆ.ಎನ್‌.ಪಾಟೀಲ, ಮಲ್ಲಿಕಾರ್ಜುನ ಅಂಗಡಿ, ಲಕ್ಷತ್ರ್ಮಣ ಶೆಟ್ಟರ, ಕಾಶಿನಾಥ ಪವಾರ, ಹರ್ಷಾ ಪಾಸ್ತೆ, ಜಗದೀಶ ಅಂಕಲಕೋಟಿ, ಪರಮೇಶಿ ಎಲೇದಹಳ್ಳಿ, ಬಸವರಾಜ ರಾಜೋಳದ, ಮನೋಜ ಹುಲಗಮ್ಮನವರ, ಗಿರೀಶ ಹೊನ್ನಳ್ಳಿ, ಮಾಲತೇಶ ಕುರವತ್ತಿ, ರಮೇಶ ಬಣಕಾರ, ಮೃತ್ಯುಂಜಯ ಯಡಿಯಾಪುರ ಹಾಗೂ ಬ್ಯಾಂಕಿನ ಸಿಬ್ಬಂದಿ ವರ್ಗ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ