ಆ್ಯಪ್ನಗರ

ತ್ರಿಕೋನ ಸ್ಪರ್ಧೆ ಜಿದ್ದಾಜಿದ್ದಿ

ಶಿಗ್ಗಾವಿ : ಸ್ಥಳೀಯ ಪುರಸಭೆ ಚುನಾವಣೆಯ ಮತದಾನಕ್ಕೆ ಕೇವಲ 48 ಗಂಟೆಗಳ ಕಾಲ ಬಾಕಿ ಉಳಿದಿರುವಾಗ, ತ್ರಿಕೋನ ಸ್ಪರ್ಧೆ ಏರ್ಪಟ್ಟ ವಾರ್ಡ್‌ನಲ್ಲಿ ಪ್ರಬಲ ಸ್ಪರ್ಧೆವೊಡ್ಡಿದ ಅಭ್ಯರ್ಥಿಗಳನ್ನು ಕಣದಿಂದ ಹಿಂದೆ ಸರಿಸುವ ತೆರೆಮರೆ ಕಸರತ್ತು ತೀವ್ರಗೊಳ್ಳುತ್ತಿದೆ.

Vijaya Karnataka 27 May 2019, 5:00 am
ಶಿಗ್ಗಾವಿ : ಸ್ಥಳೀಯ ಪುರಸಭೆ ಚುನಾವಣೆಯ ಮತದಾನಕ್ಕೆ ಕೇವಲ 48 ಗಂಟೆಗಳ ಕಾಲ ಬಾಕಿ ಉಳಿದಿರುವಾಗ, ತ್ರಿಕೋನ ಸ್ಪರ್ಧೆ ಏರ್ಪಟ್ಟ ವಾರ್ಡ್‌ನಲ್ಲಿ ಪ್ರಬಲ ಸ್ಪರ್ಧೆವೊಡ್ಡಿದ ಅಭ್ಯರ್ಥಿಗಳನ್ನು ಕಣದಿಂದ ಹಿಂದೆ ಸರಿಸುವ ತೆರೆಮರೆ ಕಸರತ್ತು ತೀವ್ರಗೊಳ್ಳುತ್ತಿದೆ.
Vijaya Karnataka Web triangle competition
ತ್ರಿಕೋನ ಸ್ಪರ್ಧೆ ಜಿದ್ದಾಜಿದ್ದಿ


ಬಹುತೇಕ ವಾರ್ಡ್‌ನಲ್ಲಿ ರಾಜಕೀಯ ಪಕ್ಷ ಕ್ಕಿಂತ ಪಕ್ಷೇತರ ಅಭ್ಯರ್ಥಿಗಳ ಗೆಲುವಿನ ಮುನ್ಸೂಚನೆ ಅರಿತು ಪಕ್ಷ ದ ವರಿಷ್ಠರು, ಪಕ್ಷ ದ ಅಭ್ಯರ್ಥಿಗಳ ಗೆಲುವಿಗೆ ಅಡ್ಡಿಯಾಗುವ ಪಕ್ಷೇತರ ಅಭ್ಯರ್ಥಿಗಳನ್ನು ಸ್ಪರ್ಧೆಯಿಂದ ಹಿಂದೆ ಸರಿಸುವ ಕಸರತ್ತು ಗಮನ ಸೆಳೆಯತ್ತಿದೆ. ಇನ್ನೊಂದೆಡೆ ಪಕ್ಷೇತರ ಅಭ್ಯರ್ಥಿ ಗೆಲುವಿಗೆ ಕೊಂಚು ಅಡ್ಡಿಯಾದಂತೆ ಕಾಣಿಸುವ ವಾರ್ಡ್‌ನಲ್ಲಿ ಕಾಂಗ್ರೆಸ್‌-ಬಿಜೆಪಿ ಅಭ್ಯರ್ಥಿಗಳನ್ನೇ ಸ್ಪರ್ಧೆಯಿಂದ ನಿವೃತ್ತಿಗೊಳಿಸುವ ಸಂಚು ಜೋರಾಗುತ್ತಿದೆ.

ರಂಗೇರಿದ ಕಣ: ಪಕ್ಷ ದ ಅಧೀಕೃತ ಅಭ್ಯರ್ಥಿ ಗೆಲುವಿಗೆ ಅಡ್ಡಿಯಾಗಿದ್ದ ಬಂಡಾಯ ಅಭ್ಯರ್ಥಿಗಳನ್ನು ಕೆಲ ಕ್ಷೇತ್ರದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿಸಲು ಕೊಂಚ ಸಫಲವಾದ ರಾಜಕೀಯ ಪಕ್ಷ ದ ವರಿಷ್ಠರು, ಎರಡು ದಿನಗಳಿಂದ ತಮ್ಮ ಪಕ್ಷ ದ ಅಭ್ಯರ್ಥಿಗಳ ಪರ ಬಹಿರಂಗ ಪ್ರಚಾರಕ್ಕೆ ಧುಮುಕಿದ್ದಾರೆ. ಶಾಸಕ ಬಸವರಾಜ ಬೊಮ್ಮಾಯಿ, ಮಾಜಿ ಶಾಸಕ ಸೈಯ್ಯದ ಅಜ್ಜಂಫೀರ ಖಾದ್ರಿ ಪ್ರಚಾರದಿಂದ ಚುನಾವಣೆ ಕಣ ರಂಗೇರಿದೆ.

ತ್ರಿಕೋನ ಸ್ಪರ್ಧೆ: ಹೇಗಾದರೂ ಮಾಡಿ ಶಿಗ್ಗಾವಿ ಪುರಸಭೆ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕು ಎಂಬ ಜಿದ್ದಿಗೆ ಬಿದ್ದಿರುವ ಕಾಂಗ್ರೆಸ್‌-ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿಗಳ ಪ್ರಚಾರದ ಭರಾಟೆ ತೀವ್ರಗೊಂಡಿದೆ. ಕೈ-ಕಮಲ, ಪಕ್ಷೇತರರು ಸೇರಿದಂತೆ 95 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕೆಲ ವಾರ್ಡ್‌ಗಳಲ್ಲಿ ಪಕ್ಷೇತರ, ಬಿಜೆಪಿ, ಕಾಂಗ್ರೆಸ್‌-ಪಕ್ಷೇತರ ಅಭ್ಯರ್ಥಿಗಳ ಮಧೆÜ್ಯ ನೇರ ಸ್ಪರ್ಧೆ, ಮತ್ತೊಂದೆಡೆ ಕಾಂಗ್ರೆಸ್‌-ಬಿಜೆಪಿ, ಪಕ್ಷೇತರ ಅಭ್ಯರ್ಥಿಗಳ ಮಧ್ಯ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಪ್ರಜ್ಞಾವಂತರ ಕ್ಷೇತ್ರ ಎನಿಸಿಕೊಂಡ ವಾರ್ಡ್‌ನಲ್ಲಿ ಬಂಡಾಯದ ಭೀತಿ ಕಾಂಗ್ರೆಸ್‌-ಬಿಜೆಪಿಗೆ ಎದುರಾಗಿದೆ. ಕಾಂಗ್ರೆಸ್‌-ಬಿಜೆಪಿ ಮಣಿಸಲು ಪಕ್ಷೇತರ ಅಭ್ಯರ್ಥಿಗಳು ಪ್ರಬಲ ಸ್ಪರ್ಧೆವೊಡ್ಡಿದ್ದಾರೆ. ಮತದಾರ ಪ್ರಭುಗಳ ಒಲೈಸಿಕೊಳ್ಳಲು ಎಲ್ಲ ರೀತಿ ಪ್ರಯತ್ನ ನಡೆಸಿದ್ದಾರೆ. 23 ವಾರ್ಡ್‌ಗಳಲ್ಲಿ ಪ್ರತಿಷ್ಠೆಯ ವಾರ್ಡ್‌ಗಳು ಎಂದು ಗುರುತಿಸಿಕೊಂಡ 2, 4, 5, 7, 9, 12, 16, 17, 21, 22ನೇ ವಾರ್ಡ್‌ ಗೆಲ್ಲಲೇಬೇಕು ಎಂದು ಪಣ ತೊಟ್ಟಿರುವ ಕೈ -ಕಮಲ, ಪಕ್ಷೇತರ ಅಭ್ಯರ್ಥಿಗಳು ಗೆಲುವಿಗೆ ಇನ್ನಿಲ್ಲದ ಕಸರತ್ತು ಮುಂದುವರೆಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ