ಆ್ಯಪ್ನಗರ

ಸಂಚಾರಿ ಕುರುಬರಿಂದ ಯುಗಾದಿ ಪೂಜೆ

ರಟ್ಟೀಹಳ್ಳಿ: ರಟ್ಟೀಹಳ್ಳಿ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಯುಗಾದಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. 4-5 ವರ್ಷದಿಂದ ಬರ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಧ್ಯೆಯೂ ಯುಗಾದಿ ಹಬ್ಬದ ಆಚರಣೆಗೆ ಯಾವುದೇ ಕೊರತೆಯಾಗಲಿಲ್ಲ.

Vijaya Karnataka 8 Apr 2019, 5:00 am
ರಟ್ಟೀಹಳ್ಳಿ: ರಟ್ಟೀಹಳ್ಳಿ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಯುಗಾದಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. 4-5 ವರ್ಷದಿಂದ ಬರ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಧ್ಯೆಯೂ ಯುಗಾದಿ ಹಬ್ಬದ ಆಚರಣೆಗೆ ಯಾವುದೇ ಕೊರತೆಯಾಗಲಿಲ್ಲ.
Vijaya Karnataka Web HVR-6 RATTIHALLI  1


ರೈತರು ಯುಗಾದಿಯನ್ನು ಹೊಸ ವರ್ಷದ ಆಚರಣೆಯನ್ನಾಗಿ ಮಾಡುವುದು ಸಂಪ್ರದಾಯ. ಅದರಂತೆ ರೈತರು ಶನಿವಾರ ಬೆಳಿಗ್ಗೆ ಮನೆ ಬಾಗಿಲುಗಳಿಗೆ ಹಸಿರು ತಳಿರು ತೋರಣಗಳನ್ನು ಕಟ್ಟಿ ಪೂಜೆ ಸಲ್ಲಿಸಿ, ಸಿಹಿ, ಕಹಿಗಳೆರಡನ್ನೂ ಪಡೆಯಬೇಕೆಂದು ಬೇವು, ಬೆಲ್ಲವನ್ನು ಸ್ವೀಕರಿಸಿದರು.

ಬಳಿಕ ರೈತರು ತಮ್ಮ ಎತ್ತು ಮತ್ತು ಟ್ರ್ಯಾಕ್ಟರಗಳೊಂದಿಗೆ ಹೊಲಗಳಿಗೆ ತೆರಳಿ ಭೂತಾಯಿಗೆ ಎಡೆ ಹಿಡಿದು ಪೂಜೆ ಸಲ್ಲಿಸಿ ಬೇಸಾಯ ಮಾಡುವ ಮೂಲಕ ಹೊಸ ವರ್ಷದ ಆಗಮನಕ್ಕೆ ಭೂಮಿ ಪೂಜೆ ಸಲ್ಲಿಸಿದರು. ಎತ್ತು ಮತ್ತು ಟ್ರ್ಯಾಕ್ಟರಗಳೊಂದಿಗೆ ಹೊಲಗಳಿಗೆ ಹಲವು ರೈತರು ಪೂಜೆ ಸಲ್ಲಿಸಿದರೆ ಇನ್ನು ಎತ್ತುಗಳು ಇಲ್ಲದೇ ಇರುವವರು ಗುದ್ಲಿಯಿಂದ ಭೂಮಿ ಅಗೆದು ಭೂಮಿಪೂಜೆ ನೆರವೇರಿಸಿದರು.

ಕುರುಬರಿಂದ ಯುಗಾದಿ: ಜಮೀನುಗಳಲ್ಲಿ ಬೀಡುಬಿಟ್ಟಿರುವ ಸಂಚಾರಿ ಕುರುಬರು ಯುಗಾದಿ ಹಬ್ಬವನ್ನು ವಿಶಿಷ್ಟವಾಗಿ ಆಚರಣೆ ಮಾಡಿದರು. ಶನಿವಾರ ಬೆಳಗಿನಜಾವ ಅಡುಗೆ ಮಾಡಿ, ಸೂರ್ಯ ಉದಯಿಸುವ ಪೂರ್ವದಲ್ಲಿ ಹತ್ತಿರದ ಹುತ್ತಗಳಿಗೆ ತೆರಳಿ ವಿಶೇಷವಾದ ಪೂಜೆ ಸಲ್ಲಿಸಿ, ಬಳಿಕ ತಾವು ಇರುವ ಜಮೀನುಗಳಲ್ಲಿಯೇ ಕಂಬಳಿ ಹಾಸಿ, ತಮ್ಮ ಕುಲದೇವರುಗಳ ಮೂರ್ತಿಯನ್ನಿಟ್ಟು ವಿಶೇಷವಾದ ಪೂಜೆ ಸಲ್ಲಿಸಿ, ಕುರಿಗಳಿಗೂ ಪೂಜೆಸಲ್ಲಿಸಿದರು.

ಯುಗಾದಿ ಸಂದರ್ಭದಲ್ಲಿ ಕುರಿಗಳ ಕಿವಿಗಳನ್ನು, ಬಾಲವನ್ನು ಸಲ್ಪ ಕತ್ತರಿಸಿದರು. ಇನ್ನು ಕೆಲವು ಕುರುಬರು ಕುರಿಯ ಹಣೆಗೆ ಬರೆ ಹಾಕಿದರು. ಕುರುಬರು ಹುತ್ತಕ್ಕೆ ಪೂಜೆ ಸಲ್ಲಿದ ಬಳಿಕ ತಾವು ತಯಾರಿಸಿದ ಸಾವಗಿ, ಹೋಳಿಗಳನ್ನು ಊಟ ಮಾಡಲಾಡುವುದರ ಮೂಲಕ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ