ಆ್ಯಪ್ನಗರ

5 ಕೋಟಿ ಕುಟುಂಬಗಳಿಗೆ ಉಜ್ವಲಾ ಯೋಜನೆ

ಹಾನಗಲ್ಲ: ದೇಶದ 21 ಕೋಟಿ ಜನರಿಗೆ ಕೇಂದ್ರ ಸರಕಾರದ ಒಂದಿಲ್ಲೊಂದು ಯೋಜನೆಯ ಲಾಭ ತಟ್ಟಿದೆ, 5 ಕೋಟಿ ಕುಟುಂಬಗಳಿಗೆ ಉಜ್ವಲಾ ಯೋಜನೆ ಅನುಕೂಲ ಒದಗಿಸಿದೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.

Vijaya Karnataka 28 Jan 2019, 5:00 am
ಹಾನಗಲ್ಲ: ದೇಶದ 21 ಕೋಟಿ ಜನರಿಗೆ ಕೇಂದ್ರ ಸರಕಾರದ ಒಂದಿಲ್ಲೊಂದು ಯೋಜನೆಯ ಲಾಭ ತಟ್ಟಿದೆ, 5 ಕೋಟಿ ಕುಟುಂಬಗಳಿಗೆ ಉಜ್ವಲಾ ಯೋಜನೆ ಅನುಕೂಲ ಒದಗಿಸಿದೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.
Vijaya Karnataka Web HVR-27HGL2
ಹಾನಗಲ್ಲ ತಾಲೂಕಿನ ಅರಿಶಿಣಗುಪ್ಪಿ ಗ್ರಾಮದಲ್ಲಿ ಶನಿವಾರ ಸಂಜೆ ಕಾಂಕ್ರಿಟ್‌ ರಸ್ತೆ ಕಾಮಗಾರಿಗೆ ಶಾಸಕ ಸಿ.ಎಂ.ಉದಾಸಿ ಭೂಮಿಪೂಜೆ ನೆರವೇರಿಸಿದರು. ಸಂಸದ ಶಿವಕುಮಾರ ಉದಾಸಿ ಇದ್ದರು.


ತಾಲೂಕಿನ ಅರಿಶಿಣಗುಪ್ಪಿ ಗ್ರಾಮದಲ್ಲಿ ಶನಿವಾರ ಸಂಜೆ ಕಾಂಕ್ರೀಟ್‌ ರಸ್ತೆ ಮತ್ತು ಶುದ್ಧ ಕುಡಿವ ನೀರಿನ ಘಟಕ ಕಾಮಗಾರಿಗೆ ಅಡಿಗಲ್ಲು ಮತ್ತು ವಾಲ್ಮೀಕಿ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದ ಅವರು, ಉಚಿತ ವೈದ್ಯಕೀಯ ಸೇವೆಯ ಆಯುಷ್‌ಮಾನ್‌ ಭಾರತ ಕಾರ್ಡ್‌ಗಳು ರಾಜ್ಯದ 40 ಸಾವಿರ ಜನರನ್ನು ತಲುಪಿವೆ ಎಂದರು.

ಜನರಿಂದ ಸಂಗ್ರಹಗೊಂಡ ತೆರಿಗೆ ಹಣವು ಸಮರ್ಪಕವಾಗಿ ವಿನಿಯೋಗಿಸಿದ ಕೀರ್ತಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಸಲ್ಲುತ್ತದೆ, ಪಾರದರ್ಶಕ ಆಡಳಿತ, ಅನುದಾನ ಸೋರಿಕೆ ತಡೆಯಿಂದ ಕೇಂದ್ರದ ಬೊಕ್ಕಸಕ್ಕೆ ಸಾಕಷ್ಟು ಲಾಭವಾಗಿದೆ ಎಂದರು.

ಶಾಸಕ ಸಿ.ಎಂ.ಉದಾಸಿ ಮಾತನಾಡಿ, ತಾಲೂಕಿನ ಶೇಷಗಿರಿ-ಹೊಂಕಣ ರಸ್ತೆಯನ್ನು 1.20 ಕೋಟಿ ಮೊತ್ತದಲ್ಲಿ ಸುಧಾರಣೆ ಮಾಡುವ ಕಾಮಗಾರಿ ಆರಂಭಗೊಳ್ಳುತ್ತದೆ, ಅಧಿಕಾರವಿದ್ದ ಹಿಂದಿನ ಅವಧಿಯಲ್ಲಿ ತಾಲೂಕಿಗೆ ಅಗತ್ಯದ ಏತ ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದ ತೃಪ್ತಿ ಇದೆ, ಈ ಅವಧಿಯಲ್ಲೂ ಅಂದುಕೊಂಡ ನೀರಾವರಿ ಯೋಜನೆಗಳನ್ನು ಸಾಕಾರಗೊಳ್ಳಿಸುತ್ತೇನೆ ಎಂದರು.

ಗ್ರಾಪಂ ಅಧ್ಯಕ್ಷ ಗಿರಿಯಪ್ಪಗೌಡ್ರ ಪಾಟೀಲ ಅಧ್ಯಕ್ಷ ತೆ ವಹಿಸಿದ್ದರು. ಜಿ.ಪಂ ಸದಸ್ಯ ಟಾಕನಗೌಡ ಪಾಟೀಲ, ಮುಖಂಡರಾದ ನಾಗಪ್ಪ ಪಿಳ್ಳಿಕಟ್ಟಿ, ರಾಜಣ್ಣ ಗೌಳಿ, ಉದಯ ವಿರುಪಣ್ಣನವರ, ರೇಣುಕಾ ಸುಂಕದ, ಪರಮೇಶ ಹುಲಮನಿ ಮತ್ತಿತರರು ಹಾಜರಿದ್ದರು.

ಇದಕ್ಕೂ ಮುನ್ನ ತಾಲೂಕಿನ ಹೋತನಹಳ್ಳಿ, ಡೊಳ್ಳೇಶ್ವರ, ಕೊಂಡೋಜಿ ಗ್ರಾಮಗಳಲ್ಲಿ ನಿರ್ಮಾಣಗೊಳ್ಳುವ ಕಾಂಕ್ರಿಟ್‌ ರಸ್ತೆ ಕಾಮಗಾರಿಗಳಿಗೆ ಶಾಸಕ ಸಿ.ಎಂ.ಉದಾಸಿ ಮತ್ತು ಸಂಸದ ಶಿವಕುಮಾರ ಉದಾಸಿ ಚಾಲನೆ ನೀಡಿದರು. ಪಿಡಬ್ಲುಡಿ ಅಭಿಯಂತರ ಗೋವಿಂದ ಚಪ್ಪರ, ಹೊನ್ನಪ್ಪ ದೊಡ್ಡಮನಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ