ಆ್ಯಪ್ನಗರ

ಉಜ್ವಲಾ ಗ್ಯಾಸ್‌, ಸಿಲಿಂಡರ್‌ ವಶ

ಹಾವೇರಿ: ಜಿಲ್ಲೆಯ ಹಾನಗಲ್ಲ ಪಟ್ಟಣದ ಹೊಸ ಬಸ್‌ ನಿಲ್ದಾಣದಲ್ಲಿ ಉಜ್ವಲಾ ಯೋಜನೆಯ ಫಲಾನುಭವಿಗಳಿಗೆ ಪೂರೈಕೆಯಾಗುತ್ತಿದ್ದ ಗ್ಯಾಸ್‌ ಮತ್ತು ಸಿಲಿಂಡರ್‌ ಹೊಂದಿದ ಕಟಮಾ (ಆಟೋ) ವಾಹನವನ್ನು ತಡೆದ ಯುವ ಕಾಂಗ್ರೆಸ್‌ ಕಾರ‍್ಯಕರ್ತರು ಬುಧವಾರ ಪೋಲಿಸರ ವಶಕ್ಕೆ ಒಪ್ಪಿಸಿದ ಘಟನೆ ನಡೆದಿದೆ.

Vijaya Karnataka 29 Mar 2019, 5:00 am
ಹಾವೇರಿ: ಜಿಲ್ಲೆಯ ಹಾನಗಲ್ಲ ಪಟ್ಟಣದ ಹೊಸ ಬಸ್‌ ನಿಲ್ದಾಣದಲ್ಲಿ ಉಜ್ವಲಾ ಯೋಜನೆಯ ಫಲಾನುಭವಿಗಳಿಗೆ ಪೂರೈಕೆಯಾಗುತ್ತಿದ್ದ ಗ್ಯಾಸ್‌ ಮತ್ತು ಸಿಲಿಂಡರ್‌ ಹೊಂದಿದ ಕಟಮಾ (ಆಟೋ) ವಾಹನವನ್ನು ತಡೆದ ಯುವ ಕಾಂಗ್ರೆಸ್‌ ಕಾರ‍್ಯಕರ್ತರು ಬುಧವಾರ ಪೋಲಿಸರ ವಶಕ್ಕೆ ಒಪ್ಪಿಸಿದ ಘಟನೆ ನಡೆದಿದೆ.
Vijaya Karnataka Web HVR-28 HAVERI 16 (2)


ಬುಧವಾರ ಮಧ್ಯಾಹ್ನ ಪಟ್ಟಣದ ಹೊಸಬಸ್‌ ನಿಲ್ದಾಣ ಭಾಗದಲ್ಲಿ ಕಟಮಾ (ಆಟೋ) ವಾಹನದಲ್ಲಿ ಸುಮಾರು ಏಳೆಂಟು ಸಿಲಿಂಡರ್‌ ಮತ್ತು ಒಲೆಗಳನ್ನು ಚಿಕ್ಕೇರಿ-ಹೊಸಳ್ಳಿ ಮತ್ತು ಹಿರೇಕಣಗಿ ಗ್ರಾಮಗಳಿಗೆ ಸಾಗಿಸುತ್ತಿದ್ದ ಉಜ್ವಲಾ ಯೋಜನೆಯ ಉಚಿತ ಗ್ಯಾಸ್‌ ಸಿಲಿಂಡರ್‌ಗಳನ್ನು ತಡೆದ ಕಾಂಗ್ರೆಸ್‌ ಕಾರ‍್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಬಳಿಕ ಇಲ್ಲಿನ ಕುಂಟನಹೊಸಳ್ಳಿ ರಸ್ತೆಗೆ ಇರುವ ಗ್ಯಾಸ್‌ ಗೋಡಾನ್‌ ಬಳಿಗೆ ತೆರಳಿದ ಯುವಕರು ಪ್ರತಿಭಟನೆ ನಡೆಸಿ ನೀತಿ ಸಂಹಿತೆ ಉಲ್ಲಂಘನೆಯಾಗುತ್ತಿದೆ ಎಂದು ಘೋಷಣೆ ಕೂಗಿದರು.

ಈ ಕುರಿತಂತೆ ಹಾನಗಲ್ಲ ಆಹಾರ ಇಲಾಖೆ ಅಧಿಕಾರಿ ವೀಣಾ ಪ್ರಕರಣ ದಾಖಲಿಸಿದ್ದಾರೆ. ಗ್ಯಾಸ್‌ ಮತ್ತು ಒಲೆಗಳನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. ಒಲೆಗಳ ಮೇಲೆ ಉಜ್ವಲಾ ಚಿನ್ಹೆಯ ಗುರುತು ಗಮನಾರ್ಹವಾಗಿದೆ ಎಂದು ಯುವ ಕಾಂಗ್ರೆಸ್‌ ಮುಖಂಡರು ತಿಳಿಸಿದರು.

ಈ ವೇಳೆ ಯುವ ಕಾಂಗ್ರೆಸ್‌ ಉಪಾಧ್ಯಕ್ಷ ಇರ್ಫಾನ್‌ ಸೌದಾಗರ, ಬಸವರಾಜ ಹಾದಿಮನಿ, ದಾದಾಫೀರ ಗೋಳನಬ್ಬಿ, ತನ್ವೀರ್‌ ಆಲೂರ, ಸುರೇಶ ದೊಡ್ಡಕುರುಬರ, ರವಿ ದೇಶಪಾಂಡೆ, ರುಸ್ತುಮ್‌ ಹಿರೂರ, ರಾಜು ಗುಡಿ, ಮಂಜುನಾಥ, ಶಹರ ಘಟಕದ ಅಧ್ಯಕ್ಷ ಎಂ.ಕೆ. ಹುಬ್ಬಳ್ಳಿ, ಶಕೀಲ್‌ ಬಾಳೂರ, ಮಲ್ಲೇಶ ಒಗ್ಗಣ್ಣನವರ, ಶಶಿಧರ ಬೈರಕ್ಕನವರ ಸೇರಿದಂತೆ ಕಾಂಗ್ರೆಸ್‌ ಕಾರ‍್ಯಕರ್ತರು ಉಪಸ್ಥಿತರಿದ್ದರು.



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ