ಆ್ಯಪ್ನಗರ

ಸರಕಾರಿ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಿ

ತುಮ್ಮಿನಕಟ್ಟಿ :ಪದೇ ಪದೇ ಜ್ವರ, ಕೆಮ್ಮು ತಲೆನೋವು ಅನುಭವಿಸುವ ವ್ಯಕ್ತಿ ಸಾಮಾನ್ಯವಾಗಿ ಕ್ಷ ಯರೋಗಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು. ಅದಕ್ಕೆ ಪ್ರಾಥಮಿಕ ಹಂತದಲ್ಲಿಯೇ ಸರಿಯಾಗಿ ಚಿಕಿತ್ಸೆ ಪಡೆದರೆ ಇದನ್ನು ತಡೆಯಲು ಸಾಧ್ಯ ಎಂದು ಕುಪ್ಪೆಲೂರು ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ನಿಗಾರ ಹಾವನೂರ ಹೇಳಿದರು.

Vijaya Karnataka 4 Jul 2018, 5:00 am
ತುಮ್ಮಿನಕಟ್ಟಿ :ಪದೇ ಪದೇ ಜ್ವರ, ಕೆಮ್ಮು ತಲೆನೋವು ಅನುಭವಿಸುವ ವ್ಯಕ್ತಿ ಸಾಮಾನ್ಯವಾಗಿ ಕ್ಷ ಯರೋಗಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು. ಅದಕ್ಕೆ ಪ್ರಾಥಮಿಕ ಹಂತದಲ್ಲಿಯೇ ಸರಿಯಾಗಿ ಚಿಕಿತ್ಸೆ ಪಡೆದರೆ ಇದನ್ನು ತಡೆಯಲು ಸಾಧ್ಯ ಎಂದು ಕುಪ್ಪೆಲೂರು ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ನಿಗಾರ ಹಾವನೂರ ಹೇಳಿದರು.
Vijaya Karnataka Web use government facilities
ಸರಕಾರಿ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಿ


ಮಂಗಳವಾರ ಕುಪ್ಪೆಲೂರು ಗ್ರಾಮದಲ್ಲಿ ಕ್ಷ ಯರೋಗ ಸೇವೆಗಳು ಮನೆ ಬಾಗಿಲವರೆಗೂ ಎಂಬ ಧ್ಯೇಯದೊಂದಿಗೆ ಟಿ.ಬಿ. ಸಕ್ರಿಯ ಪ್ರಕರಣ ಪತ್ತೆ ಆಂದೋಲನದಲ್ಲಿ ಮಾತನಾಡಿದರು. ಇದು ಸಾಂಕ್ರಾಮಿಕ ರೋಗ, ಇದು ಕಾಣಿಸಿಕೊಂಡ ವ್ಯಕ್ತಿ ಸಾರ್ವಜನಿಕ ಸ್ಥಳಗಳಲ್ಲಿ ಕೆಮ್ಮಿದಾಗ ಅದರಿಂದ ಹೊರಬರುವ ಕಫದಿಂದ ರೋಗಾಣುಗಳು ಆರೋಗ್ಯವಂತ ಮನುಷ್ಯನ ದೇಹ ಸೇರಿ ಅನಾರೋಗ್ಯ ಪೀಡಿತರನ್ನಾಗಿ ಮಾಡುತ್ತವೆ ಎಂದರು. ಗ್ರಾಮೀಣ ಪ್ರದೇಶದಲ್ಲಿ ರೋಗ ನಿಯಂತ್ರಿಸುವ ಸಲುವಾಗಿ ಕ್ಷ ಯರೋಗ ಸೇವೆಗಳು ಮನೆಬಾಗಿಲವರೆಗೂ ಬಂದು ಚಿಕಿತ್ಸೆ ನೀಡಲಾಗುತ್ತದೆ. ಸಾರ್ವಜನಿಕರು ಅದರ ಸದುಪಯೋಗ ಪಡೆಯಬೇಕೆಂದು ಹೇಳಿದರು. ಹಿರಿಯ ಆರೋಗ್ಯ ಸಹಾಯಕಿ ಜಾನಕಮ್ಮ ಕಮ್ಮಾರ, ಆಶಾ ಕಾರ್ಯಕತೆÜರ್‍ ನೀಲಮ್ಮ ಜಿಗಳಿ, ಸವಿತ್ರಾ ಮನ್ನಣ್ಣನವರ, ಮೋಹನ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ