ಆ್ಯಪ್ನಗರ

ದೀಪಾವಳಿ ಖರೀದಿಗೆ ವರುಣನ ಅಡ್ಡಿ

ರಾಣೇಬೆನ್ನೂರ: ಅತಿವೃಷ್ಟಿಯು ಹಿಂದೂಗಳ ಪಾಲಿಗೆ ಮಹತ್ವದ ಹಬ್ಬವಾದ ದೀಪಾವಳಿಯನ್ನು ಮಂದವಾಗಿಸಿದೆ. ಆದರೂ ಶನಿವಾರ ಹಬ್ಬದ ಆಚರಣೆಗಾಗಿ ನಗರ ಹಾಗೂ ಗ್ರಾಮೀಣ ಪ್ರದೇಶದಿಂದ ಆಗಮಿಸಿದ ಜನರು ಇಲ್ಲಿನ ಮಾರುಕಟ್ಟೆ ಪ್ರದೇಶದಲ್ಲಿಅಗತ್ಯವಸ್ತುಗಳ ಖರೀದಿಯಲ್ಲಿತೊಡಗಿರುವುದು ಕಂಡು ಬಂದಿತು.

Vijaya Karnataka 27 Oct 2019, 5:00 am
ರಾಣೇಬೆನ್ನೂರ: ಅತಿವೃಷ್ಟಿಯು ಹಿಂದೂಗಳ ಪಾಲಿಗೆ ಮಹತ್ವದ ಹಬ್ಬವಾದ ದೀಪಾವಳಿಯನ್ನು ಮಂದವಾಗಿಸಿದೆ. ಆದರೂ ಶನಿವಾರ ಹಬ್ಬದ ಆಚರಣೆಗಾಗಿ ನಗರ ಹಾಗೂ ಗ್ರಾಮೀಣ ಪ್ರದೇಶದಿಂದ ಆಗಮಿಸಿದ ಜನರು ಇಲ್ಲಿನ ಮಾರುಕಟ್ಟೆ ಪ್ರದೇಶದಲ್ಲಿಅಗತ್ಯವಸ್ತುಗಳ ಖರೀದಿಯಲ್ಲಿತೊಡಗಿರುವುದು ಕಂಡು ಬಂದಿತು.
Vijaya Karnataka Web varunas disruption to diwali purchase
ದೀಪಾವಳಿ ಖರೀದಿಗೆ ವರುಣನ ಅಡ್ಡಿ


ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬಾಳೆ ಹಣ್ಣಿನ ದರದಲ್ಲಿಮಾತ್ರ ಅಲ್ಪ ಏರಿಕೆಯಾಗಿದ್ದು ಉಳಿದ ಹಣ್ಣುಗಳ ದರದಲ್ಲಿಅಂತಹ ವ್ಯತ್ಯಾಸ ಕಂಡುಬಂದಿಲ್ಲ. ಆಕಾಶಬುಟ್ಟಿ, ಮಣ್ಣಿನ ಹಣತೆ, ಅಂಗಡಿಯ ಪೂಜೆಗಾಗಿ ಅಲಂಕಾರಿಕ ವಸ್ತುಗಳ ಮಾರಾಟ ಮಳಿಗೆಗಳಲ್ಲಿಸ್ವಲ್ಪ ಪ್ರಮಾಣದ ಜನಸಂದಣಿ ಕಂಡು ಬಂದಿತು. ಬೆಳಗ್ಗೆಯಿಂದ ಆಗಿಂದಾಗ್ಗೆ ಸುರಿದ ಮಳೆ ಜನರು ಮನೆಬಿಟ್ಟು ಹೊರಕ್ಕೆ ಬರಲು ಹಿಂದು ಮುಂದೆ ಯೋಚಿಸುವಂತೆ ಮಾಡಿತ್ತು.

ಕಾಶ್ಮೀರಿ ಸೇಬು 120 ರೂ.ಕೆಜಿ, ಹಿಮಾಚಲ ಪ್ರದೇಶ ಸೇಬು 100 ಕೆ.ಜಿ., ಮೊಸಂಬಿ 100ರೂ., ದಾಳಿಂಬೆ 80ರೂ., ಚಿಕ್ಕು 40 ರೂ. ಮತ್ತು ಸೇವಂತಿ ಮಾಲೆ 30ರಿಂದ 100 ರೂ., ಮಲ್ಲಿಗೆ ಹಾಗೂ ಕನಕಾಂಬರಿ 40ರೂ., ಬಿಡಿ ಹೂವು 50 ಗ್ರಾಂಗೆ 20ರೂ ದರದಲ್ಲಿಮಾರಾಟ ಮಾಡುತ್ತಿರುವುದು ಗೋಚರಿಸಿತು. ದೀಪಾವಳಿ ಹಬ್ಬದ ಮುನ್ನಾದಿನ ಬಳಸುವ ಮಹಾಲಿಂಗನ ಬಳ್ಳಿ 10 ರೂ. ಮಾರಿನಂತೆ ಮಾರಾಟವಾದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ