ರಾಣೇಬೆನ್ನೂರ: ಅತಿವೃಷ್ಟಿಯು ಹಿಂದೂಗಳ ಪಾಲಿಗೆ ಮಹತ್ವದ ಹಬ್ಬವಾದ ದೀಪಾವಳಿಯನ್ನು ಮಂದವಾಗಿಸಿದೆ. ಆದರೂ ಶನಿವಾರ ಹಬ್ಬದ ಆಚರಣೆಗಾಗಿ ನಗರ ಹಾಗೂ ಗ್ರಾಮೀಣ ಪ್ರದೇಶದಿಂದ ಆಗಮಿಸಿದ ಜನರು ಇಲ್ಲಿನ ಮಾರುಕಟ್ಟೆ ಪ್ರದೇಶದಲ್ಲಿಅಗತ್ಯವಸ್ತುಗಳ ಖರೀದಿಯಲ್ಲಿತೊಡಗಿರುವುದು ಕಂಡು ಬಂದಿತು.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬಾಳೆ ಹಣ್ಣಿನ ದರದಲ್ಲಿಮಾತ್ರ ಅಲ್ಪ ಏರಿಕೆಯಾಗಿದ್ದು ಉಳಿದ ಹಣ್ಣುಗಳ ದರದಲ್ಲಿಅಂತಹ ವ್ಯತ್ಯಾಸ ಕಂಡುಬಂದಿಲ್ಲ. ಆಕಾಶಬುಟ್ಟಿ, ಮಣ್ಣಿನ ಹಣತೆ, ಅಂಗಡಿಯ ಪೂಜೆಗಾಗಿ ಅಲಂಕಾರಿಕ ವಸ್ತುಗಳ ಮಾರಾಟ ಮಳಿಗೆಗಳಲ್ಲಿಸ್ವಲ್ಪ ಪ್ರಮಾಣದ ಜನಸಂದಣಿ ಕಂಡು ಬಂದಿತು. ಬೆಳಗ್ಗೆಯಿಂದ ಆಗಿಂದಾಗ್ಗೆ ಸುರಿದ ಮಳೆ ಜನರು ಮನೆಬಿಟ್ಟು ಹೊರಕ್ಕೆ ಬರಲು ಹಿಂದು ಮುಂದೆ ಯೋಚಿಸುವಂತೆ ಮಾಡಿತ್ತು.
ಕಾಶ್ಮೀರಿ ಸೇಬು 120 ರೂ.ಕೆಜಿ, ಹಿಮಾಚಲ ಪ್ರದೇಶ ಸೇಬು 100 ಕೆ.ಜಿ., ಮೊಸಂಬಿ 100ರೂ., ದಾಳಿಂಬೆ 80ರೂ., ಚಿಕ್ಕು 40 ರೂ. ಮತ್ತು ಸೇವಂತಿ ಮಾಲೆ 30ರಿಂದ 100 ರೂ., ಮಲ್ಲಿಗೆ ಹಾಗೂ ಕನಕಾಂಬರಿ 40ರೂ., ಬಿಡಿ ಹೂವು 50 ಗ್ರಾಂಗೆ 20ರೂ ದರದಲ್ಲಿಮಾರಾಟ ಮಾಡುತ್ತಿರುವುದು ಗೋಚರಿಸಿತು. ದೀಪಾವಳಿ ಹಬ್ಬದ ಮುನ್ನಾದಿನ ಬಳಸುವ ಮಹಾಲಿಂಗನ ಬಳ್ಳಿ 10 ರೂ. ಮಾರಿನಂತೆ ಮಾರಾಟವಾದವು.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬಾಳೆ ಹಣ್ಣಿನ ದರದಲ್ಲಿಮಾತ್ರ ಅಲ್ಪ ಏರಿಕೆಯಾಗಿದ್ದು ಉಳಿದ ಹಣ್ಣುಗಳ ದರದಲ್ಲಿಅಂತಹ ವ್ಯತ್ಯಾಸ ಕಂಡುಬಂದಿಲ್ಲ. ಆಕಾಶಬುಟ್ಟಿ, ಮಣ್ಣಿನ ಹಣತೆ, ಅಂಗಡಿಯ ಪೂಜೆಗಾಗಿ ಅಲಂಕಾರಿಕ ವಸ್ತುಗಳ ಮಾರಾಟ ಮಳಿಗೆಗಳಲ್ಲಿಸ್ವಲ್ಪ ಪ್ರಮಾಣದ ಜನಸಂದಣಿ ಕಂಡು ಬಂದಿತು. ಬೆಳಗ್ಗೆಯಿಂದ ಆಗಿಂದಾಗ್ಗೆ ಸುರಿದ ಮಳೆ ಜನರು ಮನೆಬಿಟ್ಟು ಹೊರಕ್ಕೆ ಬರಲು ಹಿಂದು ಮುಂದೆ ಯೋಚಿಸುವಂತೆ ಮಾಡಿತ್ತು.
ಕಾಶ್ಮೀರಿ ಸೇಬು 120 ರೂ.ಕೆಜಿ, ಹಿಮಾಚಲ ಪ್ರದೇಶ ಸೇಬು 100 ಕೆ.ಜಿ., ಮೊಸಂಬಿ 100ರೂ., ದಾಳಿಂಬೆ 80ರೂ., ಚಿಕ್ಕು 40 ರೂ. ಮತ್ತು ಸೇವಂತಿ ಮಾಲೆ 30ರಿಂದ 100 ರೂ., ಮಲ್ಲಿಗೆ ಹಾಗೂ ಕನಕಾಂಬರಿ 40ರೂ., ಬಿಡಿ ಹೂವು 50 ಗ್ರಾಂಗೆ 20ರೂ ದರದಲ್ಲಿಮಾರಾಟ ಮಾಡುತ್ತಿರುವುದು ಗೋಚರಿಸಿತು. ದೀಪಾವಳಿ ಹಬ್ಬದ ಮುನ್ನಾದಿನ ಬಳಸುವ ಮಹಾಲಿಂಗನ ಬಳ್ಳಿ 10 ರೂ. ಮಾರಿನಂತೆ ಮಾರಾಟವಾದವು.