ಆ್ಯಪ್ನಗರ

ಭಕ್ತಿ ಭಾವದ ವೀರಭದ್ರೇಶ್ವರ ರಥೋತ್ಸವ

ರಟ್ಟೀಹಳ್ಳಿ : ಪಟ್ಟಣದ ಆರಾಧ್ಯದೈವ ಶ್ರೀ ವೀರಭದ್ರೇಶ್ವರ ದೊಡ್ಡ ರಥೋತ್ಸವ ಹಾಗೂ ಗುಗ್ಗಳ ಕಾರ್ಯಕ್ರಮ ವಿವಿಧ ಪೂಜೆಗಳೊಂದಿಗೆ ಸಹಸ್ರಾರು ಭಕ್ತರ ಮಧ್ಯ ಸೋಮವಾರ ವಿಜ್ರಂಭಣೆಯಿಂದ ಜರುಗಿತು.

Vijaya Karnataka 16 Apr 2019, 5:00 am
ರಟ್ಟೀಹಳ್ಳಿ : ಪಟ್ಟಣದ ಆರಾಧ್ಯದೈವ ಶ್ರೀ ವೀರಭದ್ರೇಶ್ವರ ದೊಡ್ಡ ರಥೋತ್ಸವ ಹಾಗೂ ಗುಗ್ಗಳ ಕಾರ್ಯಕ್ರಮ ವಿವಿಧ ಪೂಜೆಗಳೊಂದಿಗೆ ಸಹಸ್ರಾರು ಭಕ್ತರ ಮಧ್ಯ ಸೋಮವಾರ ವಿಜ್ರಂಭಣೆಯಿಂದ ಜರುಗಿತು.
Vijaya Karnataka Web HVR-15 RATTIHALLI  1


ಬೆಳಗ್ಗೆ 6 ಗಂಟೆಗೆ ವಿಶೇಷ ಪೂಜೆ ಸಲ್ಲಿಸಿ ರಥಕ್ಕೆ ಎಡೆಯನ್ನು ಹಾಕಿ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಬೆಳಿಗ್ಗೆ 6 ಗಂಟೆಗೆ ಪ್ರಾರಂಭವಾದ ರಥೋತ್ಸವ ಪಟ್ಟಣದ ತೇರುಬೀದಿಯಲ್ಲಿ ಸಂಚರಿಸಿ ಹೊಸಪೇಟೆ ನಗರದ ಗಡಿ ತಲುಪಿ ಪುನಃ ಅದೇ ಮಾರ್ಗವಾಗಿ ಮಧ್ಯಾಹ್ನ 1.15 ರ ಸುಮಾರಿಗೆ ವೀರಭದ್ರೇಶ್ವರ ದೇವಸ್ಥಾನಕ್ಕೆ ಬಂದು ತಲುಪಿತು.

ಮಾರ್ಗಮಧÜ್ಯದಲ್ಲಿ ಭಕ್ತರು ರಥದ ಗಾಲಿಗೆ ಟೆಂಗಿನಕಾಯಿ ಒಡೆದು, ರಥೋತ್ಸವದ ಮೇಲೆ ಬಾಳೆಹಣ್ಣು ಎಸೆದು ತಮ್ಮ ಭಕ್ತಿ ಸಮರ್ಪಿಸಿದರು.

ರಥೋತ್ಸವದಲ್ಲಿ ಬಿರು ಬಿಸಿಲನ್ನು ಲೆಕ್ಕಿಸದೇ ರಾಜ್ಯದ ನಾನಾ ಮೂಲಗಳಿಂದ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ನಾನಾ ಸಂಘಟನೆಗಳು ತಂಪು ಪಾನೀಯಗಳನ್ನು ಭಕ್ತರಿಗೆ ಉಚಿತವಾಗಿ ವಿತರಿಸಿದರು. ದೇವಸ್ಥಾನದ ಪಕ್ಕದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ದೇವರ ದರ್ಶನಕ್ಕೆ ಸಾಕಷ್ಟು ಭಕ್ತರು ಸೇರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ