ಆ್ಯಪ್ನಗರ

ಏತ ನೀರಾವರಿ ಯೋಜನೆಯ ಕಾಮಗಾರಿ ವೀಕ್ಷಣೆ

ರಟ್ಟೀಹಳ್ಳಿ: 23 ಕೋಟಿ ರೂ. ವೆಚ್ಚದಲ್ಲಿ ತಾಲೂಕಿನ ಗುಡ್ಡದಮಾದಾಪುರ ಏತ ನೀರಾವರಿ ಯೋಜನೆಯ ಕಾಮಗಾರಿ ಪ್ರಾರಂಭವಾಗಿದ್ದು, ಶಾಸಕ ಬಿ.ಸಿ.ಪಾಟೀಲ್‌ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು.

Vijaya Karnataka 12 May 2019, 5:00 am
ರಟ್ಟೀಹಳ್ಳಿ: 23 ಕೋಟಿ ರೂ. ವೆಚ್ಚದಲ್ಲಿ ತಾಲೂಕಿನ ಗುಡ್ಡದಮಾದಾಪುರ ಏತ ನೀರಾವರಿ ಯೋಜನೆಯ ಕಾಮಗಾರಿ ಪ್ರಾರಂಭವಾಗಿದ್ದು, ಶಾಸಕ ಬಿ.ಸಿ.ಪಾಟೀಲ್‌ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು.
Vijaya Karnataka Web HVR-11 RATTIHALLI  ,1


ನಂತರ ಮಾತನಾಡಿದ ಅವರು ಗುಡ್ಡದಮಾದಾಪುರ ಏತ ನೀರಾವರಿ ಯೋಜನೆಯಿಂದ ಒಟ್ಟು 13 ಕೆರೆಗಳು ತುಂಬಲಿವೆ. ಗುಡ್ಡದಮಾದಾಪುರ, ಮೈದೂರು, ಹಿರೇಕಬ್ಬಾರ, ಗಲಗಿನಕಟ್ಟಿ, ತಡಕನಹಳ್ಳಿ, ಅಂಗರಗಟ್ಟಿ, ಹೊಸಕಟ್ಟಿ, ಗುಳೇದಹಳ್ಳಿ, ಗುಡ್ಡೇದಹಳ್ಳಿ, ಗಂಗೈಕೊಪ್ಪ ವ್ಯಾಪ್ತಿಯ ಕೆರೆಗಳು ತುಂಬಲಿವೆ. ಶಂಕರನಹಳ್ಳಿ ಗ್ರಾಮದ ಬಳಿಯಲ್ಲಿರುವ ತುಂಗಭದ್ರಾ ನದಿಯಿಂದ ನೀರನ್ನು ಈ ಯೋಜನೆಯ ಮೂಲಕ ಕೆರೆಗಳನ್ನು ತುಂಬಿಸಲಾಗುತ್ತದೆ. ಕೆರೆಗಳನ್ನು ತುಂಬಿಸಬೇಕೆಂಬ ಕನಸ್ಸು ನನಸಾಗುವ ಸಂದರ್ಭ ಬಂದಿದೆ. ಕಾಮಗಾರಿ ಬರದಿಂದ ಸಾಗಿದ್ದು, ಜುಲೈ ವೇಳೆಗೆ ಕೆರೆಗಳಲ್ಲಿ ನೀರು ಕಾಣಬಹುದು ಎಂದರು.

ಈ ಸಂದರ್ಭದಲ್ಲಿ ರೇಣಕಪ್ಪ ಭರಮಗೌಡ್ರ, ಲಿಂಗರಾಜ ಕುಂಟಗೌಡ್ರ, ಮಧುಗೌಡ ಪಾಟೀಲ, ಸೃಷ್ಠಿ ಪಾಟೀಲ, ವನಜಾ ಪಾಟೀಲ, ಕುಬೇರಗೌಡ ಪಾಟೀಲ, ಕುಬೇರಪ್ಪ ಹುಚ್ಚಪ್ಪಳವರ, ಪ್ರಕಾಶ ಪಾಟೀಲ, ಸುರೇಶ ಮಟ್ಟಿಮನಿ, ನಂದೆಪ್ಪ ಹೊಟ್ಟೇರ, ರವಿ ಎಣ್ಣೇರ, ನಿಂಗಣ್ಣ ಮೇದೂರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ