ಆ್ಯಪ್ನಗರ

ತಂತ್ರಜ್ಞಾನದಿಂದ ದೃಷ್ಟಿ ವಿಶೇಷಚೇತನ ಸಾಕಷ್ಟು ಅವಕಾಶ

ರಾಣೇಬೆನ್ನೂರ: ದೃಷ್ಟಿ ವಿಶೇಷಚೇತನರು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಉದ್ಯೋಗ ಮಾಡುವ ಮೂಲಕ ಸಾಮಾನ್ಯರಂತೆ ಜೀವನ ಸಾಗಿಸುವ ಸಾಮರ್ಥ್ಯ‌ ಬೆಳೆಸಿಕೊಳ್ಳಬೇಕು ಎಂದು ನಗರಸಭಾ ಸದಸ್ಯ ಮಲ್ಲಿಕಾರ್ಜುನ ಅಂಗಡಿ ಹೇಳಿದರು.

Vijaya Karnataka 29 Aug 2019, 5:00 am
ರಾಣೇಬೆನ್ನೂರ: ದೃಷ್ಟಿ ವಿಶೇಷಚೇತನರು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಉದ್ಯೋಗ ಮಾಡುವ ಮೂಲಕ ಸಾಮಾನ್ಯರಂತೆ ಜೀವನ ಸಾಗಿಸುವ ಸಾಮರ್ಥ್ಯ‌ ಬೆಳೆಸಿಕೊಳ್ಳಬೇಕು ಎಂದು ನಗರಸಭಾ ಸದಸ್ಯ ಮಲ್ಲಿಕಾರ್ಜುನ ಅಂಗಡಿ ಹೇಳಿದರು.
Vijaya Karnataka Web HVR-28RNR2


ಇಲ್ಲಿನ ಗೌರಿಶಂಕರನಗರದ ನಿವೃತ್ತ ನೌಕರರ ಭವನದಲ್ಲಿ ಮಂಗಳವಾರ ಸ್ಥಳೀಯ ಅಂಧರ ಜೀವ ಬೆಳಕು ಸಂಸ್ಥೆ ವತಿಯಿಂದ ದೃಷ್ಟಿ ವಿಶೇಷಚೇತನರಿಗಾಗಿ ಆಯೋಜಿಸಲಾಗಿದ್ದ ಒಂದು ದಿನದ ತಂತ್ರಜ್ಞಾನ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.

ತಂತ್ರಜ್ಞಾನದಲ್ಲಾದ ಬೆಳವಣಿಗೆಯಿಂದಾಗಿ ದೃಷ್ಟಿ ವಿಶೇಷಚೇತನರು ಮೊಬೈಲ್‌ ಹಾಗೂ ಕಂಪ್ಯೂಟರ್‌ಗಳನ್ನು ಎಲ್ಲರಂತೆ ಬಳಸಬಹುದಾಗಿದೆ. ತರಬೇತಿಯಲ್ಲಿ ನೀಡುವ ಜ್ಞಾನವನ್ನು ಸರಿಯಾಗಿ ಅರ್ಥೈಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು. ನಗರಸಭಾ ಸದಸ್ಯೆ ಗಂಗಮ್ಮ ಹಾವನೂರ, ವರ್ತಕ ಸಂತೋಷ ಗುಪ್ತಾ ಅತಿಥಿಗಳಾಗಿ ಆಗಮಿಸಿದ್ದರು. ಬೆಂಗಳೂರಿನ ಎನೆಬಲ್‌ ಇಂಡಿಯಾದ ಆನಂದ ಮತ್ತು ನವೀನ ಶಿಬಿರಾರ್ಥಿಗಳಿಗೆ ತರಬೇತಿ ನೀಡಿದರು. ಎಂ.ಎಸ್‌. ಕ್ಷೇವಿಯರ್‌, ರವೀಂದ್ರ ಕುಲಕರ್ಣಿ, ನಾಗನಗೌಡ ಬೆಳ್ಳುಳ್ಳಿ, ವಿಕ್ರಾಂತ ಶೆಟ್ಟರ ಮತ್ತು ಇತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ