ಆ್ಯಪ್ನಗರ

ಹಿರೇಕೆರೂರಿಗೆ ಸಾರ್ವಜನಿಕ ಉದ್ಯಮ ಸಮಿತಿ ಭೇಟಿ

ಹಿರೇಕೆರೂರ: ಗುಡ್ಡದಮಲ್ಲಾಪುರ, ಮಡ್ಲೂರು ಹಾಗೂ ಅಸುಂಡಿ ಏತ ನೀರಾವರಿ ಯೋಜನೆಗಳ ಕಾಮಗಾರಿಗಳನ್ನು ಪರಿಶೀಲಿಸುವ ಸಲುವಾಗಿ ಮಾ.1ರಂದು ತನ್ವೀರ್‌ ಶೇಠ್‌ ಅಧ್ಯಕ್ಷ ತೆಯ ಸಾರ್ವಜನಿಕ ಉದ್ಯಮ ಸಮಿತಿ ಸದಸ್ಯರು ಪಟ್ಟಣಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ಮಾಡಲಿದ್ದಾರೆ ಎಂದು ಶಾಸಕ ಬಿ.ಸಿ.ಪಾಟೀಲ್‌ ಹೇಳಿದರು.

Vijaya Karnataka 28 Feb 2019, 5:00 am
ಹಿರೇಕೆರೂರ: ಗುಡ್ಡದಮಲ್ಲಾಪುರ, ಮಡ್ಲೂರು ಹಾಗೂ ಅಸುಂಡಿ ಏತ ನೀರಾವರಿ ಯೋಜನೆಗಳ ಕಾಮಗಾರಿಗಳನ್ನು ಪರಿಶೀಲಿಸುವ ಸಲುವಾಗಿ ಮಾ.1ರಂದು ತನ್ವೀರ್‌ ಶೇಠ್‌ ಅಧ್ಯಕ್ಷ ತೆಯ ಸಾರ್ವಜನಿಕ ಉದ್ಯಮ ಸಮಿತಿ ಸದಸ್ಯರು ಪಟ್ಟಣಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ಮಾಡಲಿದ್ದಾರೆ ಎಂದು ಶಾಸಕ ಬಿ.ಸಿ.ಪಾಟೀಲ್‌ ಹೇಳಿದರು.
Vijaya Karnataka Web visit hirekeri public business committee
ಹಿರೇಕೆರೂರಿಗೆ ಸಾರ್ವಜನಿಕ ಉದ್ಯಮ ಸಮಿತಿ ಭೇಟಿ


ಬುಧವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಗುಡ್ಡದಮಲ್ಲಾಪುರ, ಮಡ್ಲೂರು ಹಾಗೂ ಅಸುಂಡಿ ಏತ ನೀರಾವರಿ ಯೋಜನೆಗಳ ಕಾಮಗಾರಿಗಳು ತ್ವರಿತಗತಿಯಲ್ಲಿ ಆಗುತ್ತಿಲ್ಲ. ಗುಣಮಟ್ಟ ಇಲ್ಲದೆ ಅಸಮರ್ಪಕವಾಗಿ ಕಾಮಗಾರಿಗಳು ನಡೆಯುತ್ತಿವೆ ಎಂದು ಸಾರ್ವಜನಿಕ ಉದ್ಯಮ ಸಮಿತಿಗೆ ದೂರು ನೀಡಿದ್ದೆ. ಸಮಿತಿಯ ಸದಸ್ಯನಾಗಿರುವ ನಾನು ಕೊಟ್ಟ ದೂರಿನ ಹಿನ್ನಲೆಯಲ್ಲಿ ಮಾ.1ರಂದು ಮದ್ಯಾಹ್ನ 12ಕ್ಕೆ ಪಟ್ಟಣದ ಪ್ರವಾಸಿ ಮಂದಿರಕ್ಕೆ ಸಾರ್ವಜನಿಕ ಉದ್ಯಮಿ ಸಮಿತಿ ಅಧ್ಯಕ್ಷ ಶಾಸಕ ತನ್ವೀರ ಶೇಠ್‌, ಮಾಜಿ ಮುಖ್ಯ ಮಂತ್ರಿ ಜಗದೀಶ ಶೆಟ್ಟರ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ, ವಿ.ಸೋಮಣ್ಣ, ಲಕ್ಷ್ಮೀ ಹೆಬ್ಬಾಳ್ಕರ್‌ ಸೇರಿದಂತೆ 20 ಜನ ಶಾಸಕರಿರುವ ಸಮಿತಿ ಸದಸ್ಯರು ಆಗಮಿಸಲಿದ್ದಾರೆ ಎಂದು ಹೇಳಿದರು. ಇವರ ಜತೆಗೆ ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ, ನೀರಾವರಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಖೇಶ ಸಿಂಗ್‌ ಆಗಮಿಸಲಿದ್ದಾರೆ ಎಂದರು. ನೂರಾರು ಕೋಟಿ ರೂ. ವೆಚ್ಚದಲ್ಲಿ ಈ ಮೂರು ಏತ ನೀರಾವರಿ ಯೋಜನೆಗಳು ಗುಣಮಟ್ಟದೊಂದಿಗೆ ಕಾಲಮಿತಿಯೊಳಗೆ ಲೋಕಾರ್ಪಣೆಗೊಂಡರೆ ಈ ಭಾಗದ ರೈತರ ಹೊಲಗಳಿಗೆ ನೀರು ನೀಡಲು ಸಾಧ್ಯವಾಗುತ್ತದೆ. ಆದ್ದರಿಂದ ಏತ ನೀರಾವರಿ ಯೋಜನೆಯ ಕಾಮಗಾರಿಗಳು ನಡೆಯುವ ಸ್ಥಳಗಳಿಗೆ ಸಾರ್ವಜನಿಕ ಉದ್ಯಮ ಸಮಿತಿಯ ಎಲ್ಲ ಸದಸ್ಯರು ಭೇಟಿ ನೀಡಿ ಪರಿಶೀಲನೆ ಮಾಡಲಿದ್ದಾರೆ. ಈ ರೀತಿ ಮಾಡುವುದರಿಂದ ಗುಣಮಟ್ಟದೊಂದಿಗೆ ಕಾಮಗಾರಿಗಳು ನಿರ್ಮಾಣವಾಗುತ್ತವೆ ಎಂದು ತಿಳಿಸಿದರು.

ಎಪಿಎಂಸಿ ಅಧ್ಯಕ್ಷ ವಸಂತ ದ್ಯಾವಕ್ಕಳವರ, ಪಪಂ ಸದಸ್ಯರಾದ ಗುರುಶಾಂತ ಯತ್ತಿನಹಳ್ಳಿ, ಅಲ್ತಾಫ್‌ಖಾನ್‌ ಪಠಾಣ, ಹನುಮಂತಪ್ಪ ಕುರುಬರ, ರಾಜು ಕರಡಿ, ಬಸವರಾಜ ಕಟ್ಟಿಮನಿ, ಸನಾವುಲ್ಲಾ ಮಕಾಂದಾರ, ಅನುಸೂಯ ತಂಬಾಕದ, ರಜಿಯಾ ಬೇಗಮ್‌ ಅಸದಿ, ಫೀರ್‌ಅಹ್ಮದ್‌ ಬೇವಿನಹಳ್ಳಿ, ಅಬ್ದುಲ್‌ಖಾದರ ಲೋಹಾರ, ರುದ್ರಗೌಡ ನೀಲನಗೌಡ್ರ, ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ