ಆ್ಯಪ್ನಗರ

ಲಿಂಗದಹಳ್ಳಿ ಗ್ರಾಮಕ್ಕೆ ವೈದ್ಯರ ತಂಡ ಭೇಟಿ

ತುಮ್ಮಿನಕಟ್ಟಿ :ಲಿಂಗದಹಳ್ಳಿ ಗ್ರಾಮದಲ್ಲಿ ಕಳೆದ 15 ದಿನಗಳಿಂದ ಗ್ರಾಮಸ್ಥರು ಜ್ವರದಿಂದ ಬಳಲುತ್ತಿದ್ದಾರೆಂದು ಮಾಹಿತಿ ಮೇರೆಗೆ ಜಿಪಂ ಸದಸ್ಯೆ ಗಿರಿಜಮ್ಮ ಬ್ಯಾಲದಹಳ್ಳಿ, ತಾಪಂ ಉಪಾಧ್ಯಕ್ಷ ಚೈತ್ರಾ ಮಾಗನೂರು ದಿಢೀರನೆ ಗ್ರಾಮಕ್ಕೆ ಭೇಟಿ ನೀಡಿದರು. ಗ್ರಾಮಸ್ಥರ ಆರೋಗ್ಯ ವಿಚಾರಿಸಿ ಮಾತನಾಡಿದ ಅವರು ಗ್ರಾಮದಲ್ಲಿ ರೋಗಿಗಳಿಗೆ ಜ್ವರ ಬರದಂತೆ ಮುಂಜಾಗೃತ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.

Vijaya Karnataka 1 Oct 2018, 5:00 am
ತುಮ್ಮಿನಕಟ್ಟಿ :ಲಿಂಗದಹಳ್ಳಿ ಗ್ರಾಮದಲ್ಲಿ ಕಳೆದ 15 ದಿನಗಳಿಂದ ಗ್ರಾಮಸ್ಥರು ಜ್ವರದಿಂದ ಬಳಲುತ್ತಿದ್ದಾರೆಂದು ಮಾಹಿತಿ ಮೇರೆಗೆ ಜಿಪಂ ಸದಸ್ಯೆ ಗಿರಿಜಮ್ಮ ಬ್ಯಾಲದಹಳ್ಳಿ, ತಾಪಂ ಉಪಾಧ್ಯಕ್ಷ ಚೈತ್ರಾ ಮಾಗನೂರು ದಿಢೀರನೆ ಗ್ರಾಮಕ್ಕೆ ಭೇಟಿ ನೀಡಿದರು. ಗ್ರಾಮಸ್ಥರ ಆರೋಗ್ಯ ವಿಚಾರಿಸಿ ಮಾತನಾಡಿದ ಅವರು ಗ್ರಾಮದಲ್ಲಿ ರೋಗಿಗಳಿಗೆ ಜ್ವರ ಬರದಂತೆ ಮುಂಜಾಗೃತ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
Vijaya Karnataka Web visit the doctors team at linghahalli village
ಲಿಂಗದಹಳ್ಳಿ ಗ್ರಾಮಕ್ಕೆ ವೈದ್ಯರ ತಂಡ ಭೇಟಿ


ಗ್ರಾಮಸ್ಥರು ಮಾತನಾಡಿ, ಆಸ್ಪತ್ರೆಯಿಂದ ವೈದ್ಯರ ತಂಡ ಬಂದು ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಆದರೂ ಇನ್ನೂ ಸಹ ಗುಣಮುಖರಾಗಿಲ್ಲ. ರೋಗಿಗಳು ಮಣಿಪಾಲ್‌ ಮಂಗಳೂರು, ದಾವಣಗೆರೆ ಸೇರಿದಂತೆ ರಾಣೇಬೆನ್ನೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸದಸ್ಯರಿಗೆ ತಿಳಿಸಿದರು.

ಲಿಂಗದಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ಜ್ವರದಿಂದ ಬಳಲುತ್ತಿದ್ದು, ಈ ಬಗ್ಗೆ ಗ್ರಾಮದಲ್ಲಿ ಚರಂಡಿಗಳ ಸ್ವಚ್ಛತೆ, ಕುಡಿಯುವ ನೀರಿನ ಸ್ವಚ್ಛತೆ ಹಾಗೂ ಫಾಗಿಂಗ್‌, ಚರಂಡಿಗಳಿಗೆ ಪೌಡರ್‌ ಹಾಕಿ ಮುಂಜಾಗ್ರತೆ ಕ್ರಮ ಕೈಗೊಂಡಿದ್ದಾರೆ.

ಲಿಂಗದಹಳ್ಳಿ ಗ್ರಾಮಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ, ಕಿರಿಯ ಆರೋಗ್ಯ ಸಹಾಯಕ ಎಂ.ಪಿ.ಭಾನುವಳ್ಳಿ, ಲೋಕೇಶ ಟಿ., ಆಶಾ ಕಾರ್ಯಕರ್ತೆಯರು ಭೇಟಿ ನೀಡಿದ್ದಾರೆ. ರೋಗಿಗಳ ರಕ್ತ ಪರೀಕ್ಷೆ, 9 ಆಶಾ ಕಾರ್ಯರ್ತರ ತಂಡ ಮನೆ ಮನೆಗೆ ಭೇಟಿ ನೀಡಿ 2,325 ಕುಡಿಯುವ ನೀರಿನ ತೊಟ್ಟಿಗಳನ್ನು ಪರೀಕ್ಷೆ ಮಾಡಿ, 34 ಮನೆಯಲ್ಲಿ ಲಾರ್ವಾ ಕಂಡು ಬಂದಿದ್ದು ಅವುಗಳಿಗೆ ಔಷಧಿ ಹಾಕಿದ್ದಾರೆ.

ಗ್ರಾಮಕ್ಕೆ ಬಾರದ ಸಂಬಂಧಿಕರು

ಲಿಂಗದಹಳ್ಳಿ ಗ್ರಾಮದಲ್ಲಿ ಜ್ವರದ ಭೀತಿ ಕಂಡು ಬಂದಿದ್ದರಿಂದ ಸಂಬಂಧಿಕರು, ಬೀಗರು, ಗ್ರಾಮಕ್ಕೆ ಬರುವುದನ್ನು ಬಿಟ್ಟಿದ್ದಾರೆ. ನಾವು ಗ್ರಾಮಕ್ಕೆ ಹೋದರೆ ನನಗೆ ಜ್ವರ ಬರುತ್ತವೆ ಎಂದು ಕೆಲವರು ಗ್ರಾಮಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ವೀರಭದ್ರಪ್ಪ ಎತ್ತಿನಮನಿ, ಮರ್ಕಂಡೆಪ್ಪ ಬೈರಮ್ಮನವರ, ಮಂಜಪ್ಪ ಭಾರ್ಕಿ, ಚಂದ್ರಗೌಡ ಮುದಿಗೌಡರ, ಬಸಪ್ಪ ತಳವಾರ, ಚನ್ನಬಸಪ್ಪ ಮುದಿಗೌಡ್ರ, ಫಕ್ಕೀರಪ್ಪ ತಳವಾರ, ಹನುಮಂತಪ್ಪ ಕಂಡ್ರಳ್ಳಿ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ